‘ನಿಶಾಚರ’ ಟ್ರೇಲರ್‌ ದರ್ಶನ


Team Udayavani, Jul 23, 2022, 4:09 PM IST

Nishachara Audio Launch Event

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಿಶಾಚರ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ “ನಿಶಾಚರ’ ಸಿನಿಮಾದ ಟ್ರೇಲರ್‌ ಮತ್ತು ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು.

ಯುವ ಪ್ರತಿಭೆಗಳಾದ ಅಕ್ಷಯ್‌, ಮಧು, ಅಭಿಮನ್ಯು ಮತ್ತಿತರರು “ನಿಶಾಚರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ವರ್ಷದಿಂದ ಸಿನಿಮಾ ರಂಗದಲ್ಲಿ ಚಿತ್ರಕಥೆ ಮತ್ತು ಬರವಣಿಗೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಅಂಧ ಪ್ರತಿಭೆ ಎಸ್‌. ಭಾಸ್ಕರ್‌ ಜೀ ಈ “ನಿಶಾಚರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಪ್ರಿಯಶ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಲತಾ ಬಿ. ಆರ್‌, ಜನಾರ್ಧನ್‌ ನಿರ್ಮಿಸಿರುವ ಈ ಚಿತ್ರಕ್ಕೆ ಬೃಂದಾ, ನೇತ್ರಾವತಿ ಸಹ ನಿರ್ಮಾಪಕರಾಗಿದ್ದಾರೆ.

“ನಿಶಾಚರ’ ಸಿನಿಮಾದ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಎಸ್‌. ಭಾಸ್ಕರ್‌ ಜೀ, “ಇದೊಂದು ಅಡ್ವೆಂಚರ್-ಥ್ರಿಲ್ಲರ್‌ ಶೈಲಿಯ ಸಿನಿಮಾ. ಸುಮಾರು 26 ದಿನಗಳ ಕಾಲ ಕಾರ್ಕಳ, ಉಡುಪಿ ಸುತ್ತಮುತ್ತ ಶೂಟಿಂಗ್‌ ಮಾಡಲಾಗಿದೆ. ಪ್ರೀತಿ ತಪ್ಪಾ? ಅಥವಾ ಪ್ರೀತ್ಸೋದ್‌ ತಪ್ಪಾ? ಎಂಬ ಅಂಶದ ಜೊತೆಗೆ ತಂದೆ-ತಾಯಿಗೆ ಸುಳ್ಳು ಹೇಳಿ ಮಕ್ಕಳು ಬೇರೆ ಸ್ಥಳಕ್ಕೆ ಹೋದರೆ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಇನ್ನೊಂದು ವಿಶೇಷವೆಂದರೆ, ಇಡೀ ಸಿನಿಮಾದ ಬಹುತೇಕ ಕಥೆ ಸಮುದ್ರದ ಮಧ್ಯದಲ್ಲಿ ಕೆಟ್ಟು ನಿಂತಿರುವ ಹಡಗಿನಲ್ಲಿ ನಡೆಯುತ್ತದೆ. “ನಿಶಾಚರ’ ಅಂದ್ರೆ ರಾತ್ರಿ ಸಂಚಾರಿ ಅಥವಾ ಕತ್ತಲೆಯಲ್ಲಿ ಸಕ್ರಿಯವಾಗಿರುವುದು ಎಂದು ಅರ್ಥ ಬರುತ್ತದೆ. ಸಿನಿಮಾ ನೋಡಿದ ನಂತರ ಅದು ಹೇಗೆ ಕಥೆಗೆ ಕನೆಕ್ಟ್ ಆಗುತ್ತದೆ ಅನ್ನೋದು ಗೊತ್ತಾಗುತ್ತದೆ’ ಎಂದು ಕಥೆಯ ಎಳೆ ಬಿಚ್ಚಿಟ್ಟರು.

ಅಂಧನಾದರೂ, ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಮಾಡಿರುವುದರ ಬಗ್ಗೆ ಮಾತನಾಡಿದ ಭಾಸ್ಕರ್‌ ಜೀ, “ಸುಮಾರು 15 ವರ್ಷದಿಂದ ಕಣ್ಣು ಕಾಣುತ್ತಿಲ್ಲ. ಆದರೂ, ಈಗಾಗಲೇ ಕನ್ನಡದಲ್ಲಿ “ಮುನಿಯಾ’, “ಗೊಂಬೆಯಾಟ’ ಸೇರಿ ಸಾಕಷ್ಟು ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ಅನುಭವವಿದೆ. ಆ ಅನುಭವದ ಆಧಾರದಲ್ಲಿ ಈ ಸಿನಿಮಾ ನಿರ್ದೇಶಿಸಿದ್ದೇನೆ. ನಿರ್ದೇಶನ ಮಾಡುವುದು ಕಷ್ಟವಾದ್ರೂ ಇಷ್ಟ ಪಟ್ಟು ಚಾಲೆಂಜ್‌ ಆಗಿ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ. ನನ್ನ ಈ ಕನಸಿಗೆ ಇಡೀ ಚಿತ್ರತಂಡ ಸಂಪೂರ್ಣ ಬೆನ್ನೆಲುಬಾಗಿ ನಿಂತು ಸಹಕರಿಸಿತು. ಕನ್ನಡದ ಸಿನಿಪ್ರಿಯರಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ’ ಎಂಬ ಭರವಸೆ ವ್ಯಕ್ತಪಡಿಸಿದರು.

“ನಿಶಾಚರ’ ಚಿತ್ರಕ್ಕೆ ವಿ. ಮಂಜುನಾಥ್‌ ಪಾಟೀಲ್‌ ಛಾಯಾಗ್ರಹಣ, ಮನು ಅಡಗೂರು ಸಂಕಲನವಿದೆ. ಚಿತ್ರದ ಹಾಡುಗಳಿಗೆ “ಮಜಾ ಟಾಕೀಸ್‌’ ಮೋಹನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಕಲಾವಿದರು, ತಂತ್ರಜ್ಞರು ಸಿನಿಮಾದ ಅನುಭವ ಹಂಚಿಕೊಂಡರು. ಇದೇ ಆಗಸ್ಟ್‌ ವೇಳೆಗೆ “ನಿಶಾಚರ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ಟಾಪ್ ನ್ಯೂಸ್

surathkal

ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಮೆಸೇಜ್ ಮಾಡಿ ಕಿರುಕುಳ; ಆರೋಪಿ ವಶಕ್ಕೆ

5-mukka

Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು

4-bntwl

Farangipete: ಪೂರ್ವದ್ವೇಷದ ಹಿನ್ನಲೆ ತಲ್ವಾರ್ ದಾಳಿ; ಇಬ್ಬರಿಗೆ ಗಾಯ

6

Actor Yash: ‘ಕೆಜಿಎಫ್‌-3ʼ ಬಗ್ಗೆ ಯಶ್‌ ಕೊಟ್ರು ಬಿಗ್‌ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?

3

Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?

3-ptr

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ‌‌ ಪೂಜೆ; ಅರುಣ್ ಪುತ್ತಿಲ ಆಗಮನಕ್ಕೆ ವಿರೋಧ

2

Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಯಶ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Actor Yash: ‘ಕೆಜಿಎಫ್‌-3ʼ ಬಗ್ಗೆ ಯಶ್‌ ಕೊಟ್ರು ಬಿಗ್‌ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?

2

Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಯಶ್‌ ಮಾತು

1

Sandalwood: ಸುಂದರ ರಾಕ್ಷಸಿ ಇವಳು!

Women’s Cricket League: ವುಮೆನ್ಸ್‌ ಕ್ರಿಕೆಟ್‌ ಲೀಗ್‌ ಲೋಗೋ ಲಾಂಚ್‌

Women’s Cricket League: ವುಮೆನ್ಸ್‌ ಕ್ರಿಕೆಟ್‌ ಲೀಗ್‌ ಲೋಗೋ ಲಾಂಚ್‌

Jalandhara Movie: ಹಾಡಲ್ಲಿ ಜಲಂಧರ

Jalandhara Movie: ಹಾಡಲ್ಲಿ ಜಲಂಧರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

7-koppala

Koppala: ಒಳ ಮೀಸಲಾತಿಗೆ ಒತ್ತಾಯಿಸಿ ವಕೀಲರಿಂದ ಪ್ರತಿಭಟನೆ

surathkal

ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಮೆಸೇಜ್ ಮಾಡಿ ಕಿರುಕುಳ; ಆರೋಪಿ ವಶಕ್ಕೆ

5-mukka

Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು

4-bntwl

Farangipete: ಪೂರ್ವದ್ವೇಷದ ಹಿನ್ನಲೆ ತಲ್ವಾರ್ ದಾಳಿ; ಇಬ್ಬರಿಗೆ ಗಾಯ

6

Actor Yash: ‘ಕೆಜಿಎಫ್‌-3ʼ ಬಗ್ಗೆ ಯಶ್‌ ಕೊಟ್ರು ಬಿಗ್‌ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.