![1-csaddasd](https://www.udayavani.com/wp-content/uploads/2024/07/1-csaddasd-415x234.jpg)
Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್ ಮೆಹ್ತಾ
Team Udayavani, Jun 29, 2024, 3:42 PM IST
![No problem anyone comes in front of Martin…: Producer Uday Mehta](https://www.udayavani.com/wp-content/uploads/2024/06/martin-620x342.jpg)
ಧ್ರುವ ಸರ್ಜಾ ನಟನೆಯ “ಮಾರ್ಟಿನ್’ ಚಿತ್ರ ಅಕ್ಟೋಬರ್ 11ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಚಿತ್ರತಂಡ ಅಧಿಕೃತವಾಗಿ ಡೇಟ್ ಅನೌನ್ಸ್ ಮಾಡಿದೆ. ಈ ಹಿಂದೆ ಅಕ್ಟೋಬರ್ 10ರಂದು ಜೂ.ಎನ್ಟಿಆರ್ ನಟನೆಯ “ದೇವರ’ ಚಿತ್ರ ಬಿಡುಗಡೆಯನ್ನು ಘೋಷಿಸಿಕೊಂಡಿತ್ತು. ಆದರೆ, ಈಗ ಆ ಚಿತ್ರ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಆ ಜಾಗಕ್ಕೆ ಮತ್ತೂಂದು ಪರಭಾಷಾ ಸ್ಟಾರ್ ಚಿತ್ರ ತನ್ನ ಡೇಟೌ ಅನೌನ್ಸ್ ಮಾಡಿದೆ. ಅದು ಸೂರ್ಯ ನಟನೆಯ “ಕಂಗುವಾ’. ಈ ಚಿತ್ರ ಅಕ್ಟೋಬರ್ 10ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ “ಮಾರ್ಟಿನ್’ ಜೊತೆಗೆ ಮತ್ತೂಂದು ಸ್ಟಾರ್ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಕುರಿತು ಮಾತನಾಡುವ “ಮಾರ್ಟಿನ್’ ನಿರ್ಮಾಪಕ ಉದಯ್ ಮೆಹ್ತಾ, “ಯಾವ ಸ್ಟಾರ್ ಸಿನಿಮಾಗಳು ಬೇಕಾದರೂ ಬಿಡುಗಡೆಯಾಗಲಿ, ನಮ್ಮ ನಿರ್ಧಾರ ಬದಲಾಗುವುದಿಲ್ಲ. ಏಕೆಂದರೆ ಕನ್ನಡದಿಂದ ತಯಾರಾಗಿರುವ ದೊಡ್ಡ ಮಟ್ಟದ ಬಿಗ್ಬಜೆಟ್ ಸಿನಿಮಾ “ಮಾರ್ಟಿನ್’. ಇಂತಹ ಸಿನಿಮಾ ಬಿಡುಗಡೆ ಹೊತ್ತಲ್ಲಿ ಬೇರೆ ಸಿನಿಮಾಗಳು ನಮ್ಮ ರಾಜ್ಯಕ್ಕೆ ಬರಲು ಯೋಚನೆ ಮಾಡಬೇಕೇ ಹೊರತು ನಾವಲ್ಲ. ಹಾಗಾಗಿ, ನಾವು ಬಿಡುಗಡೆಯ ತಯಾರಿಯಲ್ಲಿದ್ದೇವೆ. ಕನ್ನಡದಿಂದ ತಯಾರಾದ ಇಂಡಿಯನ್ ಸಿನಿಮಾವಾಗಿ “ಮಾರ್ಟಿನ್’ ಗಮನ ಸೆಳೆಯಲಿದೆ. ಅದೇ ಕಾರಣದಿಂದ ಸಿನಿಮಾದ ಯಾವ ವಿಚಾರದಲ್ಲೂ ರಾಜಿಯಾಗಿಲ್ಲ. ಈ ಚಿತ್ರದ ಮೂಲಕ ಮತ್ತೂಮ್ಮೆ ಎಲ್ಲರೂ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿವಂತಾಗುತ್ತದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
![1-csaddasd](https://www.udayavani.com/wp-content/uploads/2024/07/1-csaddasd-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-csaddasd](https://www.udayavani.com/wp-content/uploads/2024/07/1-csaddasd-150x85.jpg)
Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್
![1-sagara](https://www.udayavani.com/wp-content/uploads/2024/07/1-sagara-150x94.jpg)
Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ](https://www.udayavani.com/wp-content/uploads/2024/07/aaaz-150x84.jpg)
Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ
![police crime](https://www.udayavani.com/wp-content/uploads/2024/07/police-crime-150x92.jpg)
New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.