![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 27, 2024, 3:27 PM IST
“ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಮೋಡಿ ಮಾಡಿದ್ದ ನಿರ್ದೇಶಕ ಸುನಿ ಈ ಬಾರಿ “ಒಂದು ಸರಳ ಪ್ರೇಮಕಥೆ’ಯನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದ್ದಾರೆ. ಹೌದು, ಸಿಂಪಲ್ ಸುನಿ ನಿರ್ದೇಶನದ “ಒಂದು ಸರಳ ಪ್ರೇಮಕಥೆ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಫೆಬ್ರವರಿ 8ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಅಂದಹಾಗೆ, “ಒಂದು ಸರಳ ಪ್ರೇಮಕಥೆ’ ಟೈಟಲ್ನಲ್ಲಿ ಸರಳವಾಗಿರಬಹುದು. ಆದರೆ ಸಿನಿಮಾ ಸುಮಾರಲ್ಲ, ಎಕ್ಸ್ಟ್ರಾರ್ಡಿನರಿ ಎನ್ನುವ ವಿಶ್ವಾಸದ ಮಾತು ನಿರ್ದೇಶಕ ಸುನಿ ಅವರದ್ದು. ಇನ್ನು “ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ಸಿನಿಮಾದ ಹಾಡು, ಕ್ಯಾರೆಕ್ಟರ್ ಟೀಸರ್ಗಳನ್ನು ಒಂದೊಂದಾಗಿಯೇ ಹರಿಬಿಡುತ್ತಿದೆ ಚಿತ್ರತಂಡ.
ಕೆಲ ದಿನಗಳ ಹಿಂದಷ್ಟೇ ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಸಿನಿಮಾದ “ಗುನು ಗುನುಗು…’ ಎಂಬ ಹಾಡೊಂದನ್ನು ನಟ ಗಣೇಶ್ ಬಿಡುಗಡೆ ಮಾಡಿ, ಚಿತ್ರತಂಡತಂಡಕ್ಕೆ ಶುಭ ಕೋರಿದ್ದರು. ಅದಾದ ಬಳಿಕ ಚಿತ್ರತಂಡ ಇದೀಗ ನಾಯಕಿ ಸ್ವಾತಿಷ್ಠ ಹಾಗೂ ನಾಯಕ ವಿನಯ್ ರಾಜಕುಮಾರ್ ಅವರ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದೆ. ನಾಯಕಿ ಸ್ವಾತಿಷ್ಠ ಕೃಷ್ಣನ್ ಈ ಸಿನಿಮಾದಲ್ಲಿ ಅನುರಾಗ ಎಂಬ ಪಾತ್ರ ನಿರ್ವಹಿಸಿದ್ದು, ಈ ಕ್ಯಾರೆಕ್ಟರ್ ಟೀಸರ್ ಗೆ ತಮಿಳು ನಟ ವಿಜಯ್ ಸೇತುಪತಿ ಸಾಥ್ ನೀಡಿದ್ದರು. ಹಾಗೆಯೇ ನಾಯಕ ವಿನಯ್ ರಾಜ್ಕುಮಾರ್ ಅತಿಶಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಕ್ಯಾರೆಕ್ಟರ್ ಟೀಸರ್ ಕೂಡ ಈಗ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ
“ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಾಯಕ ವಿನಯ್ ರಾಜಕುಮಾರ್ ಅವರಿಗೆ ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಕೂಡಾ ಒಂದು ಮುಖ್ಯ ಪಾತ್ರದಲ್ಲಿದ್ದಾರೆ.
ಮೈಸೂರು ಮೂಲದ ರಮೇಶ್ “ಒಂದು ಸರಳ ಪ್ರೇಮಕಥೆ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ ತನ್ನ ಟೈಟಲ್, ಕಾಸ್ಟಿಂಗ್, ಮೇಕಿಂಗ್ ಮತ್ತು ಪ್ರಮೋಶನ್ಸ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ “ಒಂದು ಸರಳ ಪ್ರೇಮಕಥೆ’ ಥಿಯೇಟರಿನಲ್ಲಿ ಹೇಗಿರಲಿದೆ ಎಂಬುದು ಇದೇ ಫೆಬ್ರವರಿ ವೇಳೆಗೆ ಗೊತ್ತಾಗಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.