Laughing Buddha: ಇದು ದಂತಕಥೆಯಲ್ಲಿ ಸ್ವಂತ ಕಥೆ


Team Udayavani, Aug 10, 2024, 10:44 AM IST

laughing buddha

ಪೊಲೀಸರ ಸಾಹಸಗಾಥೆಗಳ ಕುರಿತಾಗಿ ಈಗಗಾಲೇ ಅನೇಕ ಸಿನಿಮಾಗಳು ಬಂದಿವೆ. ಆದರೆ, ಪೊಲೀಸರ ಕುಟುಂಬ, ಅವರ ನೋವು-ನಲಿವು, ಒತ್ತಡಗಳ ಕುರಿತಾಗಿ ಸಿನಿಮಾ ಬಂದಿರೋದು ಕಡಿಮೆ. ಇದನ್ನೇ ಗಮನದಲ್ಲಿಟ್ಟುಕೊಂಡ ರಿಷಭ್‌ ಶೆಟ್ಟಿ ತಂಡದ ಭರತ್‌ ರಾಜ್‌ ಮಾಡಿರುವ ಸಿನಿಮಾ “ಲಾಫಿಂಗ್‌ ಬುದ್ಧ’. ಮೊದಲ ಬಾರಿಗೆ ಪ್ರಮೋದ್‌ ಶೆಟ್ಟಿ ನಾಯಕರಾಗಿರುವ ಈ ಚಿತ್ರ ಆಗಸ್ಟ್‌ 30ರಂದು ತೆರೆಕಾಣುತ್ತಿದೆ.

ಅದಕ್ಕೂ ಮೊದಲು ಆ.15ರಂದು ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರದ “ಎಂಥಾ ಚಂದಾನೇ ಇವಳು’ ಹಾಡು ಬಿಡುಗಡೆಯಾಯಿತು. ಈ ಚಿತ್ರವನ್ನು ರಿಷಭ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಭರತ್‌ ರಾಜ್‌ ಹೇಳಿದ ಕಥೆ ಇಷ್ಟವಾದ ಕೂಡಲೇ ರಿಷಭ್‌ ಶೆಟ್ಟಿ, ಪ್ರಮೋದ್‌ ಅವರಿಗೆ ಕರೆಮಾಡಿ, ಅರ್ಜೆಂಟಾಗಿ ಆಫೀಸಿಗೆ ಬರುವಂತೆ ಹೇಳಿದರಂತೆ. ಬಂದ ಕೂಡಲೇ “ಲಾಫಿಂಗ್‌ ಬುದ್ಧ’ ಚಿತ್ರಕ್ಕೆ “ನೀವೇ ಹೀರೋ ರೆಡಿಯಾಗಿ’ ಅಂದರಂತೆ. ಒಮ್ಮೆ ಆಶ್ಚರ್ಯಗೊಂಡ ಪ್ರಮೋದ್‌, “ಯಾವ ಧೈರ್ಯದ ಮೇಲೆ ನನ್ನ ಮೇಲೆ ದುಡ್ಡು ಹಾಕುತ್ತೀಯಾ’ ಎಂದು ಕೇಳಿದಾಗ ರಿಷಭ್‌, “ನಾನು ದುಡ್ಡು ಹಾಕುತ್ತಿರೋದು ನಿನ್ನ ಮೇಲಲ್ಲ, ಕಥೆ ಮೇಲೆ’ ಅಂದರಂತೆ. ಅಲ್ಲಿಂದ ಪಾತ್ರಕ್ಕಾಗಿ ಪ್ರಮೋದ್‌ 30 ಕೆಜಿ ತೂಕ ಹೆಚ್ಚಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಇದು ಪೊಲೀಸರ ವೈಯಕ್ತಿಕ ಬದುಕಿನ ಸುತ್ತ ನಡೆಯುವ ಕಥೆಯಾದ್ದರಿಂದ ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಪ್ರಮೋದ್‌ ಅವರಿಗಿದೆ.

ನಿರ್ದೇಶಕ ಭರತ್‌ ರಾಜ್‌ ಮಾತನಾಡಿ, “ಈ ಕಥೆ ಹುಟ್ಟಲು ನಾನು ಯುಟ್ಯೂಬ್‌ನಲ್ಲಿ ನೋಡಿದ ವಿಡಿಯೋವೊಂದು ಕಾರಣ. ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಯೂಟ್ಯೂಬ್‌ನಲ್ಲಿ ನೋಡಿದೆ. ಪೊಲೀಸ್‌ ಪೇದೆಯೊಬ್ಬ ತನ್ನ ಎಸ್‌.ಪಿ ಬೈದರು ಎಂಬ ಕಾರಣಕ್ಕೆ ಅಳುತ್ತಿದ್ದ ಘಟನೆ ಅದಾಗಿತ್ತು. ಅದರಲ್ಲಿ ಬಹಳ ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದರು. ಆಗ ಈ ಕಥೆ ಹುಟ್ಟಿತು. ಪೊಲೀಸರ ಕುರಿತು ಹಲವು ಚಿತ್ರಗಳು ಬಂದಿವೆ. ಆದರೆ, ಇದು ಅವರ ವೈಯಕ್ತಿಕ ವಿಚಾರದ ಕುರಿತಾದ ಚಿತ್ರ. ಪ್ರಮೋದ್‌ ಶೆಟ್ಟಿ ಇಲ್ಲಿ ಗೋವರ್ಧನ್‌ ಎಂಬ ಹೆಡಕಾನ್ಸ್‌ಟೇಬಲ್‌ ಪಾತ್ರ ಮಾಡಿದ್ದಾರೆ’ ಎಂದರು.

ಚಿತ್ರದ ವಿಶೇಷ ಪಾತ್ರವೊಂದರಲ್ಲಿ ದಿಗಂತ್‌ ನಟಿಸಿದ್ದಾರೆ. ಈ ಪಾತ್ರವನ್ನು ರಿಷಭ್‌ ಶೆಟ್ಟಿ ಮಾಡಬೇಕಿತ್ತಂತೆ. ತೇಜು ಬೆಳವಾಡಿ ಈ ಚಿತ್ರದ ನಾಯಕಿ.

ಟಾಪ್ ನ್ಯೂಸ್

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.