
ತಂದೆಯರ ಮಹತ್ವ ಸಾರುವ “ಕಿಲಾಡಿ ಪೊಲೀಸ್’ ಫಸ್ಟ್ ಲುಕ್: Watch
Team Udayavani, Jun 17, 2018, 3:07 PM IST

ಸ್ಯಾಂಡಲ್ವುಡ್ನಲ್ಲಿ ತಾಯಂದಿರ ದಿನಾಚರಣೆಯಂದು ಚಿರಂಜೀವಿ ಸರ್ಜಾ ಅಭಿನಯದ “ಅಮ್ಮ ಐ ಲವ್ ಯೂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲ ತಾಯಂದಿರಿಗೆ ಸಮರ್ಪಿಸಲಾಗಿತ್ತು. ಇದೀಗ ಕನ್ನಡದ ನಟ ಹರೀಶ್ ರಾಜ್ ಒಂದು ಹೆಜ್ಜೆ ಮುಂದೆ ಹೋಗಿ “ತಂದೆಯರ ದಿನಾಚರಣೆ’ ಸಲುವಾಗಿ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಅದನ್ನು ಎಲ್ಲ ತಂದೆಯರಿಗೂ ಅರ್ಪಿಸಿದ್ದಾರೆ. ಹೌದು!
“ಶ್ರೀ ಸತ್ಯನಾರಾಯಣ’ ಚಿತ್ರದ ನಂತರ ಹರೀಶ್ ರಾಜ್ ಅವರ ಇನ್ನೊಂದು ಚಿತ್ರ “ಕಿಲಾಡಿ ಪೊಲೀಸ್’ ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ ನಿರ್ಮಾಣ ಮತ್ತು ನಿರ್ದೇಶನದ ಐದನೆಯ ಚಿತ್ರ.
ಇನ್ನು ಈ ಚಿತ್ರದ ಟೀಸರ್ ನ್ನು “ತಂದೆಯರ ದಿನಾಚರಣೆಯಂದು ಬಿಡುಗಡೆ ಮಾಡಿದ್ದು, ಎಲ್ಲ ತಂದೆಯರಿಗೂ ಇದನ್ನು ಅರ್ಪಿಸಲಾಗಿದೆ. ಈ ಟೀಸರ್ ನಲ್ಲಿ ಹೇಳುವ ಹಾಗೆ “ತಾಯಿ ನಂತರ ಕಣ್ಣಿಗೆ ಕಾಣೋ ದೇವರು ಅಂದರೆ ಅದು ತಂದೆ. ತನ್ನ ಮಗುವನ್ನ ತಾಯಿಯಷ್ಟೇ ಪ್ರೀತಿ ಮಾಡುತ್ತಾನೆ. ಆದರೆ ಹೇಳಿಕೊಳ್ಳೊಕ್ಕೆ ಬರಲ್ಲ. ಬೆರಳು ಹಿಡಿದು ನಡೆಯೋದು ಕಲಿಸುತ್ತಾನೆ, ತಮಾಷೆ ಮಾಡಿ ನಗಿಸುತ್ತಾನೆ. ತಪ್ಪು ಮಾಡಿದಾಗ ಹೊಡೆದು, ಬಯ್ದು, ಬುದ್ಧಿ ಕಲಿಸುತ್ತಾನೆ. ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಅಂತಾ, ಎಷ್ಟೇ ದುಃಖ ಇದ್ದರೂ ಯಾರ ಹತ್ತಿರನೂ ತೋರಿಸಿಕೊಳ್ಳದೇ, ನಗು – ನಗುತಾ ಖುಷಿಯಾಗಿ ಮಕ್ಕಳನ್ನು ಬೆಳೆಸುತ್ತಾನೆ, ಎಲ್ಲ ತಂದೆಯಂದಿರಿಗೂ ಒಂದು ಆಸೆ ಇರುತ್ತೆ. ನಮ್ಮಪ್ಪನ ಆಸೆ ನಾನು ಪೊಲೀಸ್ ಆಗಬೇಕು ಅಂತಾ’. ಎಂಬ ಸಂದೇಶದ ಜೊತೆಗೆ “ಹ್ಯಾಟ್ಸ್ ಆಫ್ ಟು ಅಲ್ ಫಾಧರ್ಸ್’, ಹ್ಯಾಪಿ ಫಾಧರ್ಸ್ ಡೇ ಎಂಬ ಸಂದೇಶದೊಂದಿಗೆ ತೆರೆ ಬೀಳುತ್ತದೆ.
ಈ ಚಿತ್ರವು ತಮಿಳಿನಲ್ಲಿ 2014ರಲ್ಲಿ ತೆರೆಗೆ ಬಂದ “ತಿರುಡನ್ ಪೊಲೀಸ್’ ಎಂಬ ಚಿತ್ರದ ರೀಮೇಕ್. ಈ ಚಿತ್ರದಲ್ಲಿ ಹರೀಶ್ ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡಿದ್ದು, ತಂದೆ-ಮಗನ ಸಂಬಂಧದ ಸುತ್ತ ಚಿತ್ರ ಸುತ್ತುತ್ತದಂತೆ. “ತಂದೆ-ಮಗನ ಸೆಂಟಿಮೆಂಟ್ ಚಿತ್ರ ಇದು. ಇಲ್ಲಿ ತಂದೆಯಾಗಿ ಶ್ರೀನಿವಾಸಮೂರ್ತಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಅಲ್ಲದೇ ಚಿತ್ರದಲ್ಲಿ ಹರೀಶ್ ರಾಜ್ಗೆ ನಾಯಕಿಯಾಗಿ ಸಾನ್ವಿ ಪೊನ್ನಮ್ಮ ನಟಿಸುತ್ತಿದ್ದು, ಮಿಕ್ಕಂತೆ ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೇಂದ್ರ ಪ್ರಸಾದ್, ಮುನಿ, ಗಿರಿ, ಮೋಹನ್ ಜುನೇಜ, ಜೆನ್ನೀಫರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಎಲ್ವಿನ್ ಜೋಶ್ವಾ ಅವರ ಸಂಗೀತ ಚಿತ್ರಕ್ಕಿದ್ದು, ಡಿಫರೆಂಟ್ ಡ್ಯಾನಿ ಈ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.