Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ
Team Udayavani, May 11, 2024, 10:58 AM IST
ಆತನಿಗೆ ಊರು ಉದ್ಧಾರ ಮಾಡಬೇಕು, ಊರ ಜನರಿಂದ ಭೇಷ್ ಎನ್ನಿಸಿಕೊಳ್ಳಬೇಕು ಎಂಬ ಆಸೆ. ಅದಕ್ಕಾಗಿ ಆತ ನಾನಾ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಹಾಗಂತ ಮಾಡುವ ಕಾರ್ಯ ಎಲ್ಲವೂ ಯಶಸ್ಸು ಕಾಣಬೇಕೆಂದಿಲ್ಲ, ಕೆಲವೊಮ್ಮೆ ಉಲ್ಟಾ ಆಗಿ ಆತನೇ ಸಂಕಷ್ಟಕ್ಕೆ ಸಿಲುಕುತ್ತಾನೆ..
ಈ ವಾರ ತೆರೆಕಂಡಿರುವ “ರಾಮನ ಅವತಾರ’ ಚಿತ್ರ ಒಂದು ಕಾಮಿಡಿ ಹಾದಿಯಲ್ಲಿ ಸಾಗುತ್ತಲೇ, ಒಂದಷ್ಟು ವಿಷಯಗಳನ್ನು ತೆರೆದಿಟ್ಟಿದೆ.
ಇಲ್ಲಿನ ನಾಯಕನ ವಿವಿಧ ಅವತಾರಗಳು ಈ ಸಿನಿಮಾದ ಜೀವಾಳ. ಆ ಸನ್ನಿವೇಶಗಳು ಹಾಗೂ ಅಲ್ಲಿನ ಸಂಭಾಷಣೆಗಳು ಪ್ರೇಕ್ಷಕನಿಗೆ ನಗೆ ಉಕ್ಕಿಸುತ್ತವೆ. ಕಾಮಿಡಿಯಾಗಿ ಜೊತೆಗೆ ಒಂದಷ್ಟು ನೀತಿಪಾಠಗಳ ಜೊತೆಗೆ ಸಾಗುವ ಸಿನಿಮಾದಲ್ಲಿ ಬರುವ ಟ್ವಿಸ್ಟ್ಗಳು ಈ ಚಿತ್ರದ ಜೀವಾಳ.
ಚಿತ್ರದ ಮೊದಲರ್ಧದಲ್ಲಿ ನಾಯಕ “ಕಾರ್ಯ’ಕ್ರಮಗಳು, ಎಡವಟ್ಟುಗಳ ಮೂಲಕ ಸಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಮಗ್ಗುಲು ಬದಲಿಸುತ್ತದೆ. ಇಲ್ಲೊಂದಿಷ್ಟು ಗಂಭೀರ ವಿಚಾರಗಳು, ಸಂದಿಗ್ಧತೆಗಳು ತೆರೆದುಕೊಂಡು ಒಂದಷ್ಟು ಕುತೂಹಲಕ್ಕೆ ದಾರಿ ಮಾಡಿವೆ.
ಹಾಗಂತ ನಿರ್ದೇಶಕರ ಮೂಲ ಉದ್ದೇಶ ನಗು. ತರ್ಲೆ, ತಮಾಷೆ, ಜಾಲಿಯಾಗಿಯೇ ಕಥೆಯನ್ನು ಹೇಳಬೇಕು ಎಂಬ ನಿರ್ಧಾರ ಅವರದು. ಆ ಕಾರಣದಿಂದಲೇ ಕಥೆ ಹೆಚ್ಚು ಭಾರವಾಗದೇ “ಜಾಲಿರೈಡ್’ ಮಾಡಿದೆ.
ಇನ್ನು ಮಾಡರ್ನ್ರಾಮನ ಮೂಲಕ ರಾಮಾಯಣದ ಕೆಲವು ಮೌಲ್ಯಗಳನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದ ಮೂಲ ಪರಿಕಲ್ಪನೆ ಚೆನ್ನಾಗಿದೆಯಾದರೂ ಅದನ್ನು ಇನ್ನೊಂದಿಷ್ಟು ಆಸಕ್ತಿದಾಯಕವಾಗಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಹುಟ್ಟೂರಲ್ಲೇ ಉದ್ಯೋಗ ಸೃಷ್ಟಿಯಾದರೆ ಆ ಊರು ಉದ್ಧಾರ ಆಗುತ್ತದೆ ಎಂಬ ಆಶಯವೂ ಈ ಸಿನಿಮಾದಲ್ಲಿದೆ.
ನಾಯಕ ರಿಷಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತರ್ಲೆ, ತುಂಟತನದಿಂದ ಕೂಡಿದ ಪಾತ್ರ ಅವರದು.ಉಳಿದಂತೆ ಪ್ರಣೀತಾ, ಶುಭ್ರ, ಅರುಣ್ ಸಾಗರ್ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.