![13](https://www.udayavani.com/wp-content/uploads/2024/06/13-16-415x249.jpg)
Not out Movie: ನಾಟ್ ಔಟ್ ಮೇಲೆ ರಚನಾ ನಿರೀಕ್ಷೆ
Team Udayavani, Jun 26, 2024, 11:08 AM IST
![Untitled-1](https://www.udayavani.com/wp-content/uploads/2024/06/Untitled-1-18-620x372.jpg)
“ಲವ್ ಮಾಕ್ಟೇಲ್’ ಚಿತ್ರದಲ್ಲಿ ಸಖತ್ ಎನರ್ಜಿಟಿಕ್ ಆಗಿ ಪಟ್ ಪಟ್ ಅಂತಾ ಮಾತನಾಡುತ್ತಾ, ಪ್ರತಿ ಮಾತಿಗೂ “ಹೆಂಗೆ ನಾವೂ’ ಅಂತಾ ಹೇಳುತ್ತಲೇ ಕೋಟಿ ಕನ್ನಡಿಗರ ಹೃದಯ ಗೆದ್ದೆ ಚೆಲುವೆ ರಚನಾ ಇಂದರ್.
ಲವ್ ಮಾಕ್ಟೇಲ್ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಸಾಕಷ್ಟು ಪ್ರಶಂಸೆಯನ್ನು ಪಡೆದ ರಚನಾ, ಈಗ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಮೇಲೊಂದು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಚನಾ ಸದ್ಯ “ನಾಟ್ ಔಟ್’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಹೀಗೊಂದು ಸಿನಿಮಾದಲ್ಲಿ ರಚನಾ ನಟಿಸಿದ್ದು, ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿರುವುದರಿಂದ ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಇತ್ತೀಚೆಗಷ್ಟೇ ರಚನಾ ನಟನೆಯ “4ಎನ್6′ ತೆರೆಕಂಡು ಮೆಚ್ಚುಗೆ ಪಡೆದಿತ್ತು.
ಇದನ್ನೂ ಓದಿ: Tollywood: ಪ್ರಭಾಸ್ ಕಲ್ಕಿ ಹವಾ ಜೋರು
ಈಗ “ನಾಟ್ ಔಟ್’ ಸರದಿ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಮ್ದು ದ್ದೀನ್ ಎ ಈ ಚಿತ್ರ ವನ್ನು ನಿರ್ಮಿಸಿದ್ದಾರೆ. ಅಜಯ್ ಪೃಥ್ವಿ ಚಿತ್ರದ ನಾಯಕ. ಅಂಬರೀಶ್ ನಿರ್ದೇಶನ ಚಿತ್ರಕ್ಕಿದೆ.
“ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್ಔಟ್ ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು’ ಎನ್ನುವುದು ತಂಡದ ಮಾತು.
ಟಾಪ್ ನ್ಯೂಸ್
![13](https://www.udayavani.com/wp-content/uploads/2024/06/13-16-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-AAP](https://www.udayavani.com/wp-content/uploads/2024/06/1-AAP-150x113.jpg)
BJP ಕೇಂದ್ರ ಕಚೇರಿ ಬಳಿ ಎಎಪಿ ಬೃಹತ್ ಪ್ರತಿಭಟನೆ; ಗೋಪಾಲ್ ರಾಯ್, ಅತಿಶಿ ಭಾಗಿ
![13](https://www.udayavani.com/wp-content/uploads/2024/06/13-16-150x90.jpg)
ಮದುವೆಯಾದ ವಾರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ: ಗರ್ಭಿಣಿ ಇರಬಹುದೆಂದ ನೆಟ್ಟಿಗರು.!
![drowned](https://www.udayavani.com/wp-content/uploads/2024/06/drowned-2-150x93.jpg)
Kolluru; ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಮೃತ್ಯು: ತಾಯಿಯ ರಕ್ಷಣೆ, ಸ್ಥಿತಿ ಗಂಭೀರ
![ICC T20 World Cup; ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ?](https://www.udayavani.com/wp-content/uploads/2024/06/icc-150x83.jpg)
ICC T20 World Cup; ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ?
![ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ](https://www.udayavani.com/wp-content/uploads/2024/06/Belagavi-6-150x60.jpg)
ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.