Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ


Team Udayavani, Jun 26, 2024, 6:01 PM IST

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

ಬೆಂಗಳೂರು/ಮಂಗಳೂರು: ಕರಾವಳಿ ಭಾಗದ ಕಥೆಯನ್ನು ಹೇಳುವ ಮೂಲಕ ಇಂದು ಸ್ಯಾಂಡಲ್‌ ವುಡ್‌ ಹಾಗೂ ಮಾಲಿವುಡ್‌ ನಲ್ಲಿ ತನ್ನ ನಟನೆಯ ಮೂಲಕ ಮಿಂಚಿರುವ ನಿರ್ದೇಶಕ, ನಟ ರಾಜ್‌ ಶೆಟ್ಟಿ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಲಿದ್ದಾರೆ.

ರಾಜ್‌ ಬಿ ಶೆಟ್ಟಿ ಚಂದನವನದಲ್ಲಿ ಈಗಾಗಲೇ ತಾನೊಬ್ಬ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಕೂಡ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನಾ ಕೌಶಲ್ಯ ಮಾಲಿವುಡ್‌ ಮಂದಿಯನ್ನೂ ಫಿದಾ ಆಗಿಸಿದೆ. ಇತ್ತೀಚೆಗಷ್ಟೇ ಮಮ್ಮುಟ್ಟಿ ಅವರೊಂದಿಗೆ ʼಟರ್ಬೊʼ ಸಿನಿಮಾದಲ್ಲಿ ಖಡಕ್‌ ರೋಲ್‌ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.

ರಾಜ್‌ ಬಿ ಶೆಟ್ಟಿ ಅವರು ನಿರ್ದೇಶನ ಮಾಡುವ ಸಿನಿಮಾಗಳಿಗೆ ಪ್ರತ್ಯೇಕ ಪ್ರೇಕ್ಷಕರಿರುತ್ತಾರೆ. 2017 ರಲ್ಲಿ ಅವರ ಚೊಚ್ಚಲ ನಿರ್ದೇಶನದ ʼಒಂದು ಮೊಟ್ಟೆಯ ಕಥೆʼ ಚಿತ್ರ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಅಭಿಪ್ರಾಯ ಎಲ್ಲೆಡಯಿಂದ ಕೇಳಿ ಬಂದಿತ್ತು. ಇದಾದ ಬಳಿಕ 2021 ರಲ್ಲಿ ʼಗರುಡ ಗಮನ ವೃಷಭ ವಾಹನʼ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದಲ್ಲಿನ ಅಭಿನಯ ಹಾಗೂ ನಿರ್ದೇಶನಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ರಾಜ್‌ ಬಿ ಶೆಟ್ಟಿ ಮತ್ತೆ ʼಒಂದು ಮೊಟ್ಟೆಯ ಕಥೆʼಯ  ತಂಡದೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ ಲೈವ್‌ ಬಂದು ಮಾಹಿತಿ ನೀಡಿದ್ದಾರೆ.

“ಮೊದಲಿಗೆ ನಾವು ಸಿನಿಮಾ ಮಾಡಲು ಶುರು ಮಾಡಿದ್ದು ಮಂಗಳೂರಿನಿಂದ. ʼಒಂದು ಮೊಟ್ಟೆಯ ಕಥೆʼ ಸಿನಿಮಾ ಮಾಡುವಾಗ ನಮಗೆ ಒಳ್ಳೆಯ ಕಥೆಯನ್ನು ತುಂಬಾ ಜನರಿಗೆ ತಲುಪಿಸಬೇಕೆನ್ನುವ ಉದ್ದೇಶವಿತ್ತು. ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನಾನು ಮತ್ತು ನನ್ನ ತಂಡ ಆ ಸಿನಿಮಾವನ್ನು ಮಾಡಿದ್ವೀವಿ. ಆ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್‌ ಕೊಟ್ಟಿತು. ಒಂದು ಒಳ್ಳೆಯ ಕಥೆಯನ್ನು ಹೇಳಬೇಕು. ಆ ಕಥೆಯನ್ನು ಪ್ರೇಕ್ಷಕರು ಒಪ್ಪುತ್ತಾರೆ ಎನ್ನುವುದು ನಾನು ಹಾಗೂ ನನ್ನ ತಂಡದ ಅಂದುಕೊಂಡಿರುವ ಸೂತ್ರ. ಅದೇ ನಿಟ್ಟಿನಲ್ಲಿ ಇನ್ನೊಂದು ಸಿನಿಮಾವನ್ನು ತರುತ್ತಿದ್ದೇವೆ.  ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಇದನ್ನು ನಿರ್ಮಾಣ ಮಾಡುತ್ತಿದೆ. ಈ ಬ್ಯಾನರ್‌ ಎರಡನೇ ಸಿನಿಮಾ ಇದು. ಈ ಸಿನಿಮಾದ ಪೋಸ್ಟರ್‌ ನ್ನು ನಾಳೆ ಹಂಚಿಕೊಳ್ಳುತ್ತೇನೆ. ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಹೆಮ್ಮೆಪಡಬಹುದಾದ ಸಿನಿಮಾ ಆಗಿರಲಿದೆ. ಕಮರ್ಷಿಯಲಿ ಒಂದು ಕಥೆ ಹೇಳಿ ದುಡ್ಡು ಮಾಡುವುದಕ್ಕಿಂತ, ಒಂದೊಳ್ಳೆ ಸಿನಿಮಾ ಮಾಡುತ್ತೇವೆ. ಆ ಮೇಲೆ ಅದರ ಗುಣಮಟ್ಟವನ್ನು ಅದು ಕಮರ್ಷಿಯಲಿ ಎಷ್ಟು ದುಡ್ಡು ಮಾಡಬೇಕೆನ್ನುವುದನ್ನು ಪ್ರೇಕ್ಷಕರು ನಿರ್ಧಾರ ಮಾಡಬೇಕು ಅಂಥ ನಂಬಿದಂತಹ ಸಿನಿಮಾ ಅದು. ಅದರ ಹೆಸರು ಹಾಗೂ ಪೋಸ್ಟರ್‌ ನ್ನು ನಾಳೆ ಸಂಜೆ 4 ಗಂಟೆಗೆ ಅನೌನ್ಸ್‌ ಮಾಡುತ್ತಿದ್ದೇವೆ. ಈ ಸಿನಿಮಾವನ್ನು ನಾನು ಮತ್ತು ನನ್ನ ತಂಡ ಪ್ರಸ್ತುತ ಪಡಿಸುತ್ತಿದ್ದೇವೆ. ಎಂದಿನಂತೆ ಪ್ರೀತಿ, ಪ್ರೋತ್ಸಾಹ ಇರಲಿ” ಎಂದು ಹೇಳಿದ್ದಾರೆ.

ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದರ ಬಗ್ಗೆ ರಾಜ್‌ ಬಿ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿಲ್ಲ.

ʼಒಂದು ಮೊಟ್ಟೆಯ ಕಥೆʼಯನ್ನು ಪವನ್ ಕುಮಾರ್ – ಸುಹಾನ್ ಪ್ರಸಾದ್ ನಿರ್ಮಾಣ ಮಾಡಿದ್ದರು. ರಾಜ್ ಬಿ ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು, ಶ್ರೇಯಾ ಅಂಚನ್, ದೀಪಕ್ ರೈ ಪಾಣಾಜೆ, ವಿಜೆ ವಿನಿತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು.

ಟಾಪ್ ನ್ಯೂಸ್

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್‌

Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್‌

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

rohit sharma

Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

raakha kannada movie

Sandalwood; ತಂದೆ ಮಕ್ಕಳ ಸಂಬಂಧದ ಸುತ್ತ ‘ರಾಖಾ’

ajagrata producer gave fortuner car gift to the director

Sandalwood; ನಿರ್ದೇಶಕರಿಗೆ ಫಾರ್ಚೂನರ್ ಗಿಫ್ಟ್ ನೀಡಿದ ಅಜಾಗ್ರತ ನಿರ್ಮಾಪಕ

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್‌

Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್‌

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.