Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ


Team Udayavani, Jul 18, 2024, 3:28 PM IST

Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಬಂಧನರಾಗಿರುವ ನಟ ದರ್ಶನ್‌(Darshan) ಹಾಗೂ ಇತರರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

ನಟ ದರ್ಶನ್‌, ಪವಿತ್ರಾ ಗೌಡ (Pavitra Gowda) ಸೇರಿದಂತೆ ಇತರೆ ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳ ವಿಸ್ತರಣೆ ಮಾಡಿ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್‌ ಅವರು ಗುರುವಾರ(ಜು.18ರಂದು) ಆದೇಶ ನೀಡಿದ್ದಾರೆ.

ಆ ಮೂಲಕ ದರ್ಶನ್‌ & ಗ್ಯಾಂಗ್‌ ಆಗಸ್ಟ್‌ 1ರವರೆಗೆ ಮತ್ತೆ ಜೈಲಿನಲ್ಲಿ ದಿನ ಕಳೆಯಲಿದ್ದಾರೆ. ದರ್ಶನ್‌, ಪವಿತ್ರಾ ಗೌ ಡ ಸೇರಿ 17 ಮಂದಿಯನ್ನು ಗುರುವಾರ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇನ್ನು ದರ್ಶನ್‌ ಅವರಿಗೆ ಜೈಲೂಟ ಸೇವಿಸಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ತಮಗೆ ಮನೆಯೂಟ ಬೇಕು. ಮಲಗಲು ಹಾಸಿಗೆ ಬೇಕು, ಓದಲು ಪುಸ್ತಕಗಳನ್ನು ನೀಡಬೇಕೆಂದು ಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲು ಅಧಿಕಾರಿಗಳು, ಸರ್ಕಾರಕ್ಕೆ ನೊಟೀಸ್ ನೀಡಿ, ವಿಚಾರಣೆಯನ್ನು ಶುಕ್ರವಾರ (ಜು.19ಕ್ಕೆ) ಅಂದರೆ ನಾಳೆಗೆ ಮುಂದೂಡಿದೆ.

ಸದ್ಯಕ್ಕೆ ಬೇಲ್‌ ಕಷ್ಟವೆಂದಿದ್ದ ಕುಟುಂಬಸ್ಥರು: ಇತ್ತೀಚೆಗೆ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್‌ ಅವರು ಭೇಟಿ ಆಗಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್‌ ಜತೆ ಮಾತನಾಡಿದ ಪತ್ನಿ ಮತ್ತು ಸಹೋದರ ಜಾಮೀನು ವಿಚಾರ ಚರ್ಚಿಸಿದ್ದರು. ಈ ವೇಳೆ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ. ಸ್ವಲ್ಪ ದಿನಗಳ ಕಾಲ ಸಮಾಧಾನದಿಂದ ಇರುವಂತೆ ದರ್ಶನ್‌ಗೆ ಸಲಹೆ ನೀಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಜೈಲು ಸೇರಿ 25 ದಿನಗಳೇ ಕಳೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಇದು ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಟಾಪ್ ನ್ಯೂಸ್

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

PM-JANDHAN

Modi Government: ಜನಧನ ಯೋಜನೆ: ಆರ್ಥಿಕ ಶಕ್ತಿಗೆ ಹೊಸ ಚೈತನ್ಯ!

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

CCb

CCB Police: ಎಸ್‌ಡಿಎ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿ: ಬೃಹತ್‌ ಜಾಲ ಪತ್ತೆ

GRUHA

Congress Government Scheme: ಬಡವರ ನಂದಾದೀಪ ಗೃಹಲಕ್ಷ್ಮಿಗೆ ವರ್ಷದ ಹರ್ಷ

Omar Abdulla

Omar Abdullah ವಿಚ್ಛೇದನ ಕೇಸು: ಮಧ್ಯಸ್ಥಿಕೆಗೆ ಕರೆದ ಸುಪ್ರೀಂ ಕೋರ್ಟ್‌

1-kP

Tamil film industry; ಬಾಲ ನಟಿಯಾಗಿದ್ದಾಗ ಲೈಂಗಿಕ ಕಿರುಕುಳ:ಕುಟ್ಟಿ ಪದ್ಮಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dddd-3-aa

Darshan ಅಭಿಮಾನಿಗಳ ಮೇರೆ ಮೀರಿದ ಹುಚ್ಚಾಟ: ವ್ಯಾಪಕ ಆಕ್ರೋಶ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

my hero kannada movie

My Hero: ನೈಜ ಘಟನೆ ಆಧಾರಿತ ಮೈ ಹೀರೋ

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

PM-JANDHAN

Modi Government: ಜನಧನ ಯೋಜನೆ: ಆರ್ಥಿಕ ಶಕ್ತಿಗೆ ಹೊಸ ಚೈತನ್ಯ!

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

mamata

Mamata Banerjee ಅವರಿಗೆ ಮಕ್ಕಳಿಲ್ಲ, ಹಾಗಾಗಿ ದುಃಖ ತಿಳಿಯದು: ಟ್ರೈನಿ ವೈದ್ಯೆ ತಾಯಿ

CCb

CCB Police: ಎಸ್‌ಡಿಎ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿ: ಬೃಹತ್‌ ಜಾಲ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.