![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 8, 2022, 2:32 PM IST
ಮೂರು ದಶಕಗಳ ಹಿಂದೆ ಬೆಳ್ಳಿತೆರೆ ಮೇಲೆ ರಾರಾಜಿಸಿ, ಮ್ಯೂಸಿಕಲ್ ಹಿಟ್ ನೀಡಿದ ಚಿತ್ರ “ಬೆಳ್ಳಿ ಕಾಲುಂಗುರ’. ಇದೀಗ ಅದೇ ಶೀರ್ಷಿಕೆಯ ಚಿತ್ರ ಹೊಸ ಅವತಾರದಲ್ಲಿ ಮತ್ತೆ ಬರಲಿದ್ದು, “ತನು ಕ್ರಿಯೇಷÕನ್’ ಅಡಿ ಯಲ್ಲಿ ಸಾ.ರಾ ಗೋವಿಂದು ಚಿತ್ರ ನಿರ್ಮಾಣ ಮಾಡು ತ್ತಿದ್ದಾರೆ. ಇಂದಿನ ಬೆಳ್ಳಿಕಾಲುಂಗುರದ ಮೂಲಕ ನವ ನಟ ಸಮರ್ಥ್ ಅವರನ್ನು ಪರಿಚಯಿಸುತ್ತಿದ್ದಾರೆ ನಿರ್ಮಾಪಕ ಸಾ.ರಾ ಗೋವಿಂದು.
ಸಮರ್ಥ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ತಯಾರಿ ನಡೆಸಿದ್ದು, ಮುಂಬೈನ ಅನು ಪಮ್ ಖೇರ್ ನಟನಾ ತರಬೇತಿಯಲ್ಲಿ ಕಲಿತಿದ್ದಾರೆ. ನಂತರ ದಿನಗಳಲ್ಲಿ ಹಿಂದಿಯಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿ ಅನುಭವ ಹೊಂದಿದ್ದು, “ಬೆಳ್ಳಿ ಕಾಲುಂಗುರ’ ಚಿತ್ರದ ಮೂಲಕ ಸಂಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಲಿದ್ದಾರೆ.
ಇನ್ನು ತಮ್ಮ ಚೊಚ್ಚಲ ಚಿತ್ರದ ಕುರಿತು ಮಾತನಾಡುವ ನಟ ಸಮರ್ಥ್ “ಸಾ.ರಾ ಗೋವಿಂದು ಸರ್ “ಬೆಳ್ಳಿಕಾಲುಂಗುರ’ ಹೆಸರನ್ನಿಟ್ಟು ಮತ್ತೂಂದು ಚಿತ್ರ ಮಾಡಲು ಎಲ್ಲಾ ತಯಾರಿ ನಡೆಸಿದ್ದರು. ಈ ಸಮಯದಲ್ಲಿ ನನ್ನ ಅಣ್ಣನ ಮೂಲಕ ಆಫರ್ ಬಂತು. ನಟನೆಯಲ್ಲಿ ಆಸಕ್ತಿ ಇದ್ದ ನನಗೆ ಇದೊಂದು ಒಳ್ಳೆ ಅವಕಾಶ ಎಂದು ಆಡಿಷನ್ ಕೊಟ್ಟು ಚಿತ್ರಕ್ಕೆ ಆಯ್ಕೆ ಆಗಿದ್ದೇನೆ. ಮೊದಲ “ಬೆಳ್ಳಿಕಾಲುಂಗುರ’ ಚಿತ್ರದಂತೆ ಇದು ಕೂಡಾ ಲವ್ ಸ್ಟೋರಿ ಇರುವ ಚಿತ್ರ. ಜೊತೆಗೆ ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ನಾನು ಓರ್ವ ಪ್ರಾಚ್ಯಶಾಸ್ತ್ರದ ವಿದ್ಯಾರ್ಥಿಯಾಗಿ ಅಭಿನಯಿಸು ತ್ತಿದ್ದೇನೆ’ ಎನ್ನುತ್ತಾರೆ.
ತಮ್ಮ ಮೊದಲ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಸಮರ್ಥ್, “ಈ ಚಿತ್ರ ನನ್ನ ಪಾಲಿಗೆ ಒಂದು ಒಳ್ಳೆ ಅವಕಾಶ, ನನ್ನ ಕೆರಿಯರ್ಗೆ ಇದೊಂದು ಬೆಂಚ್ ಮಾರ್ಕ್ ಚಿತ್ರವಾಗುತ್ತೇ ಅನ್ನುವ ಭರವಸೆ ಇದೆ. ಈ ಚಿತ್ರದಲ್ಲಿ ಅಭಿನಯಿಸುವುದು ಒಂದು ಪ್ಲಸ್ ಪಾಯಿಂಟ್ ಮತ್ತು ನನ್ನ ಲಕ್’ ಎನ್ನುತ್ತಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.