ಕೆಜಿಎಫ್2-ಬೀಸ್ಟ್ ಎಫೆಕ್ಟ್ : ಕನ್ನಡದಲ್ಲಿ ಈ ವಾರ ಮೂರೇ ಚಿತ್ರ ರಿಲೀಸ್
Team Udayavani, Apr 5, 2022, 2:43 PM IST
ಕಳೆದ ವಾರ (01) ಬರೋಬ್ಬರಿ ಆರು ಸಿನಿಮಾಗಳು ತೆರೆಕಂಡಿದ್ದವು. ಹಾಗಾದರೆ ಈ ವಾರ ಎಷ್ಟು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಕೇಳಿದರೆ ಉತ್ತರ 3 ಸಿನಿಮಾ.
ಹೌದು, ಸದ್ಯ “ತ್ರಿಕೋನ’, “ವರ್ಣ ಪಟಲ’ ಹಾಗೂ ಹೊಸಬರ “ದಂಡಿ’ ಚಿತ್ರಗಳಷ್ಟೇ ಏ.08ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿವೆ. ಮಿಕ್ಕಂತೆ ಕನ್ನಡದಿಂದ ಯಾವ ಚಿತ್ರವೂ ಅನೌನ್ಸ್ ಆಗಿಲ್ಲ. ಇದಕ್ಕೆ ಕಾರಣವೇನೆಂದು ನೀವು ಕೇಳಿದರೆ ಮುಂದಿನ ವಾರ ತೆರೆಕಾಣುತ್ತಿರುವ”ಕೆಜಿಎಫ್-2′ ಹಾಗೂ ತಮಿಳಿನ “ಬೀಸ್ಟ್’ ಚಿತ್ರ ಎನ್ನಬಹುದು.
ಈ ಎರಡು ಚಿತ್ರಗಳು ಏ.13 ಹಾಗೂ 14ರಂದು ತೆರೆಕಾಣುತ್ತಿದೆ. ಬೀಸ್ಟ್ ಏ.13ಕ್ಕೆ ತೆರೆಕಂಡರೆ, ಕೆಜಿಎಫ್ 2 ಏ.14ರಂದು ತೆರೆಗೆ ಬರುತ್ತಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರುವ ಸಿನಿಮಾ ಎಂದರೆ ಅದು ಕನ್ನಡದಿಂದ ತಯಾರಾಗಿರುವ “ಕೆಜಿಎಫ್-2′ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ 250 ಪ್ಲಸ್ ಮಿಲಿಯನ್ ವೀವ್ಸ್ ನೊಂದಿಗೆ ಮುನ್ನುಗ್ಗುತ್ತಿದೆ. ಈ ಚಿತ್ರ ಏ.14ರಂದು ತೆರೆಗೆ ಅಪ್ಪಳಿಸಲಿದೆ.
ಇದನ್ನೂ ಓದಿ: ತೂತು ಮಡಿಕೆಯಲ್ಲಿ ಸ್ವಾರ್ಥ,ದುರಾಸೆ!
ಇದರ ಜೊತೆಗೆ ತಮಿಳಿನ ವಿಜಯ್ ನಟನೆಯ “ಬೀಸ್ಟ್’ ಚಿತ್ರ ಏ.13ರಂದು ಬಿಡುಗಡೆಯಾಗಲಿದೆ. ಈ ಎರಡು ಸ್ಟಾರ್ಗಳ ಮಧ್ಯೆ ಹೊಸಬರು ತಮ್ಮ ಸಿನಿಮಾ ಬಿಡುಗಡೆ ಮಾಡಿದರೆ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ.
ಇದೇ ಕಾರಣದಿಂದ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರ ಸಿನಿಮಾ ತೆರೆಕಾಣುತ್ತಿಲ್ಲ. ಸರಿಯಾಗಿ ಒಂದು ವಾರವೂ ಸಿಗದಿರುವಾಗ ಯಾಕಾಗಿ ಬಿಡುಗಡೆ ಮಾಡಬೇಕೆಂಬ ಲೆಕ್ಕಾಚಾರ ಹೊಸಬರದು. ಹಾಗಾಗಿ, ಸ್ಟಾರ್ಗಳ ಅಬ್ಬರದಿಂದ ಹೊಸಬರು ಈ ವಾರ ದೂರವಿದ್ದಾರೆ. ಆದರೆ, ಏ. 29ರಿಂದ ಮೇ ತಿಂಗಳು ಪೂರ್ತಿ ಹೊಸಬರದ್ದೇ ಜಾತ್ರೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.