Actor Yash: ‘ಕೆಜಿಎಫ್-3ʼ ಬಗ್ಗೆ ಯಶ್ ಕೊಟ್ರು ಬಿಗ್ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?
Team Udayavani, Oct 23, 2024, 1:04 PM IST
ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Actor) ವೃತ್ತಿ ಬದುಕಿನ ಬಹುದೊಡ್ಡ ಪ್ರಾಜೆಕ್ಟ್ ಆಗಿರುವ ‘ಕೆಜಿಎಫ್’ ಸರಣಿ ಎಷ್ಟರ ಮಟ್ಟಿಗೆ ವಿಶ್ವ ಸಿನಿಮಾರಂಗದಲ್ಲಿ ರಾರಾಜಿಸಿತು ಎನ್ನುವುದು ಗೊತ್ತೇ ಇದೆ.
‘ಕೆಜಿಎಫ್’ 1,2 ಸಿನಿಮಾಗಳ ಬಹಳ ದೊಡ್ಡ ಯಶಸ್ಸು ಯಶ್ ಅವರಿಗ ‘ರಾಕಿಭಾಯ್’ ಇಮೇಜ್ ತಂದುಕೊಟ್ಟಿತು. ಅವರನ್ನು ಇಂದು ಜನ ‘ರಾಕಿಭಾಯ್’ ಎಂದೇ ಗುರುತಿಸುತ್ತಾರೆ.
‘ಕೆಜಿಎಫ್ -3ʼ (KGF-3) ಸಿನಿಮಾ ಬರಲಿದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತಿದೆ. ಆದರೆ ಆ ಸಿನಿಮಾ ಬರುವುದು ಬಹಳ ತಡವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್ ಬಜೆಟ್ ಚಿತ್ರದ ಬಗ್ಗೆ ಯಶ್ ಮಾತು
‘ದಿ ಹಾಲಿವುಡ್ ರಿಪೋರ್ಟರ್’ಗೆ ಕೊಟ್ಟಿರುವ ಸಂದರ್ಶನದಲ್ಲಿ ಯಶ್ ‘ಕೆಜಿಎಫ್-3’ ಬಗ್ಗೆ ಮಾತನಾಡಿದ್ದಾರೆ.
ಅನುಪಮಾ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟರ್ ಶುಭಮನ್ ಗಿಲ್ ‘ಕೆಜಿಎಫ್-3’ ಯಾವಾಗ ಬರುವುದು ಎಂದು ಕೇಳಿದ್ದಾರೆ ಇದಕ್ಕೆ ನಿವೇನು ಹೇಳ್ತೀರಾ ಎಂದು ಯಶ್ ಹತ್ರ ಕೇಳಿದ್ದಾರೆ. ‘ಕೆಜಿಎಫ್’- 3 ನನ್ನ ಲಿಸ್ಟ್ ನಲ್ಲಿದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ಅವರೊಂದಿಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಯಶ್ ಹೇಳಿದ್ದಾರೆ.
‘ಕೆಜಿಎಫ್’-3 ಬರುವುದು ಪಕ್ಕಾ ಇದನ್ನು ನಾನೇ ಭರವಸೆಯಿಂದ ಹೇಳುತ್ತೇನೆ. ‘ಟಾಕ್ಸಿಕ್’ , ‘ರಾಮಾಯಣ’ ಸಿನಿಮಾದ ಬಳಿಕ ‘ಕೆಜಿಎಫ್-3’ ಬರಲಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಜತೆ ಚರ್ಚೆ ಆಗುತ್ತಿದೆ. ಅದೊಂದು ಬಿಗ್ ಪ್ರಾಜೆಕ್ಟ್ ಆಗಿದೆ. ಹಾಗಾಗಿ ಎಲ್ಲರೂ ಎಫರ್ಟ್ ಹಾಕಬೇಕಿದೆ ಎಂದು ಅವರು ಹೇಳಿದ್ದಾರೆ.
ಕೆಜಿಎಫ್ ಸರಣಿ ಸೂಪರ್ ಹಿಟ್ ಆಗಿದೆ. ಜನ ರಾಕಿ ಭಾಯ್ ಯನ್ನು ಮೆಚ್ಚಿಕೊಂಡಿದ್ದಾರೆ. ಕೆಜಿಎಫ್- 3 ಯನ್ನು ನಾವು ಎಲ್ಲರೂ ಹೆಮ್ಮೆಪಡುವ ರೀತಿ ಮಾಡಲಿದ್ದೇವೆ ಎಂದು ಯಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?
Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್ ಬಜೆಟ್ ಚಿತ್ರದ ಬಗ್ಗೆ ಯಶ್ ಮಾತು
Tollywood: ‘ಪುಷ್ಪ-2ʼ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ
Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್ ಮಾಡಿದ್ದು ಅವನೇ.. ನಟಿ ಓವಿಯಾ
Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್ʼ?; ಇದುವರೆಗಿನ ಗಳಿಕೆ ಎಷ್ಟು?
MUST WATCH
ಹೊಸ ಸೇರ್ಪಡೆ
Bengaluru: ಕೆಲಸದ ಹೆಸರಲ್ಲಿ ವೇಶ್ಯಾವಾಟಿಕೆಗ ಅಪ್ರಾಪ್ತೆಯರ ಕಳ್ಳ ಸಾಗಣೆ
BBMP: ಬಿಬಿಎಂಪಿಗೆ ನನ್ನನ್ನೇ ಮೇಯರ್ ಮಾಡಿ: ವ್ಯಕ್ತಿಯಿಂದ ಅರ್ಜಿ!
Dandeli: ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಆಗ್ರಹಿಸಿ ಬಿಜೆಪಿ ನಗರಸಭಾ ಸದಸ್ಯರಿಂದ ಪ್ರತಿಭಟನೆ
MLA Araga Jnanendra: ಉಪಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲನ್ನೊಪ್ಪಿಕೊಂಡಿದೆ
Puttur: ನಿಧಾನಕ್ಕೆ ಹೋಗಿ, ಇಲ್ಲಿ ಕೆಲಸವೂ ನಿಧಾನಗತಿಯಲ್ಲಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.