![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 12, 2023, 2:44 PM IST
ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ- ಸೈಡ್-ಬಿ’ ಚಿತ್ರ ನ.17ರಂದು ತೆರೆಕಾಣುತ್ತಿದೆ. ಈಗಾಗಲೇ ಸಿನಿಮಾದ ನಿರೀಕ್ಷೆ ಹೆಚ್ಚಿದ್ದು, ಪಾಟ್-1 ನೋಡಿದವರು ಈಗ ಪಾರ್ಟ್-2ಗೆ ಕಾಯುತ್ತಿದ್ದಾರೆ. ಈಗ ಚಿತ್ರತಂಡ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದೆ. ಟೈಟಲ್ ಟ್ರ್ಯಾಕ್ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಇತ್ತೀಚೆಗಷ್ಟೇ “ಸಪ್ತಸಾಗರದಾಚೆ ಎಲ್ಲೋ- ಸೈಡ್-ಬಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ, ಹಿಟ್ಲಿಸ್ಟ್ ಸೇರಿದೆ. ಟ್ರೇಲರ್ ನೋಡಿದವರಿಗೆ “ಸೈಡ್-ಬಿ’ ಮತ್ತಷ್ಟು ಇಂಟೆನ್ಸ್ ಆಗಿರುವುದು ಎದ್ದು ಕಾಣುತ್ತದೆ. ಪ್ರೀತಿ ಕಳೆದುಕೊಂಡ ಮನುವಿನ ಒದ್ದಾಟ, ಅಲೆದಾಟ, ನೋವು ಎಲ್ಲವೂ ಇಲ್ಲಿ ಪ್ರೇಕ್ಷಕರನ್ನು “ದಟ್ಟ’ವಾಗಿ ಆವರಿಸುವ ಸುಳಿವು ನೀಡಿದೆ. ಜೊತೆಗೆ ಹೊಸ ಪ್ರೀತಿಯೊಂದು ಚಿಗುರೊಡೆದ ಸಣ್ಣ ಸೂಚನೆಯೂ ಟ್ರೇಲರ್ನಲ್ಲಿ ಸಿಕ್ಕಿದೆ. ಇಲ್ಲಿ ನಾಯಕನಿಂದ ಯಾವುದೇ ಮಾತಿಲ್ಲ. ಆಗಾಗ ಕಾಡುವ ಫ್ಲ್ಯಾಶ್ ಬ್ಯಾಕ್ಗಳು, ನೀಲಿ ಸಮುದ್ರ, ಅದರ ಪಕ್ಕ ಮನೆ ಮಾಡುವ ಆಸೆ, ಯಾರು ಅಂದ್ರೆ ಯಾರೂ ಇಲ್ಲದ ಕನಸು… ಹೀಗೆ ಹಲವು ಅಂಶಗಳು ಟ್ರೇಲರ್ ಅನ್ನು ಆವರಿಸಿಕೊಳ್ಳುವ ಮೂಲಕ ಸಿನಿಮಾದೊಳಗೊಂದು ಗಟ್ಟಿ ಕಂಟೆಂಟ್ ಇರುವ ಭರವಸೆ ನೀಡಿದೆ.
ಹೇಮಂತ್ ರಾವ್ ನಿರ್ದೇಶನದ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ್ದಾರೆ. ಮೊದಲ ಭಾಗ ಹಿಟ್ ಆಗುವ ಮೂಲಕ ಈ ಚಿತ್ರದ ಬಗ್ಗೆ ಪರಭಾಷೆಗಳಲ್ಲೂ ಮಾತು ಆರಂಭವಾಗಿತ್ತು. ಮೊದಲ ಭಾಗವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿ, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ “ಸೈಡ್-ಬಿ’ ಯನ್ನು ಏಕಕಾಲಕ್ಕೆ ಸೌತ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಚಿತ್ರದಲ್ಲಿ ರಕ್ಷಿತ್, ರುಕ್ಮಿಣಿ ವಸಂತ್, ಗೋಪಾಲ ದೇಶಪಾಂಡೆ, ಚೈತ್ರಾ ಸೇರಿದಂತೆ ಅನೇಕರು ನಟಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.