![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Nov 4, 2023, 6:34 PM IST
ಜೈಲಿನಿಂದ ಹೊರಬಂದ ಮನು, ಮುಖದ ಮೇಲೆ ಹೊಡೆದಾಟದ ಕಲೆಗಳು, ನೋವಿನ ಛಾಯೆ, ಎದೆಯ ಮೇಲೆ ನೆನಪಿನ ಭಾರ, ಪ್ರಿಯಾ ಧ್ವನಿ, ಮತ್ತೆ ಮತ್ತೆ ಕೇಳುವ ಟೇಪ್, ಹೊಸ ಪ್ರೀತಿ, ಬೇಕು ಬೇಕಂತಲೆ ಹಿಂಬಾಲಿಸಿಕೊಂಡು ಹೋಗುವ ಹಳೆಯ ನೆನಪು, ಮತ್ತೆ ಹೊಡೆದಾಟ… ಇದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದ ಕೆಲ ತುಣುಕುಗಳು.
ಹೌದು, ನವೆಂಬರ್ 17ರಂದು ಬಿಡುಗಡೆಯಾಗಲಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವು ತನ್ನ ಮೊದಲ ಭಾಗಕ್ಕಿಂತಲೂ ಇನ್ನಷ್ಟು ತೀವ್ರವಾಗಿ ಕಾಡುವ ಸೂಚನೆ ನೀಡಿದೆ ಈ ಟ್ರೇಲರ್.
ಚಿತ್ರದಲ್ಲಿ ಮನು ಆಗಿ ನಟಿಸಿರುವ ರಕ್ಷಿತ್ ಶೆಟ್ಟಿ ಈ ಭಾಗದಲ್ಲಿ ದೇಹತೂಕ ಹೆಚ್ಚಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಜೈಲಿನೊಳಗೆ ಸಿಕ್ಕಿಹಾಕಿಕೊಂಡಿದ್ದ ಮನು ಅಲ್ಲಿಂದ ಹೊರಬಂದ ಬಳಿಕ ಏನು ಮಾಡುತ್ತಾನೆ ಎನ್ನುವುದನ್ನು ಈ ಭಾಗದಲ್ಲಿ ಕಾಣಬಹುದು.
ರಕ್ಷಿತ್ ಜತೆ ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್, ಅಚ್ಯುತ್ ಕುಮಾರ್, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಜೈಲಿನ ಖೈದಿಯಾಗಿ ನಟಿಸಿದ್ದ ರಮೇಶ್ ಇಂದಿರಾ ಅವರ ಪಾತ್ರವು ಇಲ್ಲಿಯೂ ಮುಂದುವರಿದಿದೆ
ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ನಟ ರಕ್ಷಿತ್ ಶೆಟ್ಟಿ ಅವರೇ ತಮ್ಮ ಪರಂವಾ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ನೀಡಿರುವ ಚಿತ್ರದಲ್ಲಿ ಅದ್ವೈತ್ ಗುರುಮೂರ್ತಿ ಕ್ಯಾಮರಾ ಕೈಚಳಕವಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.