Movie: ‘ಜೈಲರ್’ ಮೊದಲು ಬಂದಿದ್ದ ಕಾಲಿವುಡ್ ಆಫರ್ ರಿಜೆಕ್ಟ್ ಮಾಡಿದ ಶಿವಣ್ಣ: ಕಾರಣವೇನು?
Team Udayavani, Oct 17, 2023, 11:08 AM IST
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ʼಘೋಸ್ಟ್ʼ ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಶಿವಣ್ಣ ʼಜೈಲರ್ʼ ಬಳಿಕ ಪ್ಯಾನ್ ಇಂಡಿಯಾ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ರಜಿನಿಕಾಂತ್ ಸಿನಿಮಾದ ಬಳಿಕ ಅವರಿಗೆ ಅನೇಕ ಸಿನಿರಂಗದಿಂದ ಆಫರ್ ಬರುತ್ತಿದೆ. ಆದರೆ ʼಜೈಲರ್ʼ ಮೊದಲು ಕೂಡ ಸೆಂಚುರಿ ಸ್ಟಾರ್ ಗೆ ಬೇರೆ ಸಿನಿಮಾ ರಂಗದಿಂದ ಬಂದಿತ್ತು ಎನ್ನುವುದರ ಬಗ್ಗೆ ಸ್ವತಃ ಶಿವಣ್ಣ ಅವರೇ ಹೇಳಿದ್ದಾರೆ.
ʼ ಗಲಾಟ್ಟಾ ಪ್ಲಸ್ʼ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್ ʼಜೈಲರ್ʼ ಸಿನಿಮಾದಲ್ಲಿನ ʼನರಸಿಂಹʼ ಪಾತ್ರಕ್ಕೂ ಮೊದಲು ಅವರಿಗೆ ಬೇರೆ ಸಿನಿಮಾದ ಆಫರ್ ಬಂದಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
“ಈ ಹಿಂದೆ ಕೂಡ ಅಂದರೆ 7-8 ವರ್ಷಗಳ ಹಿಂದೆ ನನಗೆ ತಮಿಳು ಸಿನಿಮಾರಂಗದಿಂದ ಆಫರ್ ಬಂದಿತ್ತು. ಅಜಿತ್ ಸಿನಿಮಾದಲ್ಲಿ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸುವಂತೆ ನನ್ನನ್ನು ಸಂಪರ್ಕ ಮಾಡಲಾಗಿತ್ತು. ಅದು ಯಾವ ಸಿನಿಮಾ ಎನ್ನುವುದು ನೆನಪಿಲ್ಲ. ಆದರೆ ಆ ಸಮಯದಲ್ಲಿ ನಾನು ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಆಫರ್ ನ್ನು ಒಪ್ಪಿಕೊಳ್ಳಲು ಆಗಿಲ್ಲ. ಒಂದು ವೇಳೆ ನಾನು ಅಂದು ಬೇರೆ ಭಾಷೆಗೆ ಡೇಟ್ ಕೊಟ್ಟಿದರೆ, ನನ್ನ ಕನ್ನಡ ಸಹೋದ್ಯೋಗಿಗಳು ನನಗೆ ಯಾವುದೇ ನೈತಿಕತೆ ಇಲ್ಲ ಎಂದು ಭಾವಿಸುತ್ತಿದ್ದರೇನೋ. ವೈಯಕ್ತಿಕವಾಗಿ ನಾನು ತಮಿಳು ಭಾಷೆಯನ್ನು ಇಷ್ಟಪಡುತ್ತೇನೆ ಏಕೆಂದರೆ ನಾನು ಅಲ್ಲಿ ಹುಟ್ಟಿದ್ದೇನೆ.” ಎಂದು ನಟ ಹೇಳಿದರು.
“ನನಗೆ ನಿರ್ಮಾಪಕರನ್ನು ತೊಂದರೆಗೆ ಸಿಲುಕಿಸಲು ಇಷ್ಟವಿಲ್ಲ. ನನ್ನ ತಂದೆ ಯಾವಾಗಲೂ ನನಗೆ ನಿರ್ಮಾಪಕರು ಅನ್ನದಾತರು ಎಂದು ಹೇಳುತ್ತಿದ್ದರು. ಹಾಗಾಗಿ ನಾನು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ತಮಿಳು ಚಿತ್ರರಂಗದಲ್ಲಿ ಸಾಕಷ್ಟು ನಾಯಕರಿದ್ದಾರೆ. ತಮಿಳು ಇಂಡಸ್ಟ್ರಿಗೆ ಬರಬೇಕಾದರೆ ಏನಾದರೂ ವಿಶೇಷತೆ ಇರಬೇಕು” ಎಂದು ಶಿವಣ್ಣ ಹೇಳಿದರು.
ಇನ್ನು ಶಿವರಾಜ್ ಕುಮಾರ್ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಬಹುಕೋಟಿ ನಿರ್ಮಿತ ʼಕಣ್ಣಪ್ಪʼ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.