ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ʼಟಗರುʼ2ʼ ಗೆ ರೆಡಿಯಾದ ಶಿವಣ್ಣ? ಪೋಸ್ಟರ್ ವೈರಲ್
Team Udayavani, Jul 12, 2023, 12:42 PM IST
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ರಾತ್ರಿಯಿಂದಲೇ ಅಭಿಮಾನಿಗಳು ಪಟಾಕಿ ಸಿಡಿಸಿ, ತನ್ನ ನೆಚ್ಚಿನ ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಅವರ ಹುಟ್ಟುಹಬ್ಬಕ್ಕೆ ಶ್ರೀನಿ ನಿರ್ದಶನದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಘೋಸ್ಟ್ʼ ಚಿತ್ರದ “ಬಿಗ್ ಡ್ಯಾಡಿʼ ವಿಡಿಯೋವನ್ನು ಬಿಡುಗಡೆ ಆಗಿದೆ. ಈಗಾಗಲೇ ಈ ಹಾಡು ಅಭಿಮಾನಿ ವಲಯದಲ್ಲಿ ಸಂಭ್ರಮದ ಕಿಚ್ಚು ಹೊತ್ತಿಸಿದೆ.
ಇದರೊಂದಿಗೆ ಭಾರತೀಯ ಚಿತ್ರರಂಗದ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ಕಲಾವಿದರು, ನಿರ್ದಶಕರು ಶಿವರಾಜ್ ಕುಮಾರ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಮುಂಬರುವ ಚಿತ್ರ ತಂಡದಿಂದ ಸ್ಪೆಷೆಲ್ ಪೋಸ್ಟ್ ಗಳು ರಿಲೀಸ್ ಆಗಿವೆ.
ಇದರಲ್ಲಿ 2018 ರಲ್ಲಿ ರಿಲೀಸ್ ಆದ ದುನಿಯಾ ಸೂರಿ ಅವರ ಸೂಪರ್ ಹಿಟ್ ʼಟಗರುʼ ಚಿತ್ರದ ಎರಡನೇ ಭಾಗವೆಂದು ಹೇಳಲಾಗುತ್ತಿರುವ ಪೋಸ್ಟರ್ ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಧನಂಜಯ ಅವರಿಗೆ ʼಡಾಲಿʼ ಫೇಮ್ ಕೊಟ್ಟು, ಚರಣ್ ರಾಜ್ ಅವರ ಮ್ಯೂಸಿಕ್ ನಲ್ಲಿ ಶಿವರಾಜ್ ಕುಮಾರ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ʼಟಗರುʼ ಸಿನಿಮಾಕ್ಕೆ ಆದರದೇ ಆದ ಫ್ಯಾನ್ ಬೇಸ್ ಇದೆ
ಇದೀಗ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಶುಭಾಶಯವನ್ನು ಕೋರುವ ಪೋಸ್ಟರ್ ವೊಂದು ʼಟಗರ್-2ʼ ಸಿನಿಮಾದ ಪೋಸ್ಟರ್ ಎಂದು ಗಾಂಧಿನಗರದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಪೋಸ್ಟರ್ ನಲ್ಲಿ ʼಟಗರುʼ ಹಿಡಿದು ಶಿವಣ್ಣ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೇಲೆ ಜಿ.ಮನೋಹರನ್ ಹಾಗೂ ಲಹರಿ ಫಿಲ್ಮ್ಸ್ ಸಿನಿಮಾವನ್ನು ಅರ್ಪಿಸುತ್ತಿದೆ ಎಂದು ಬರೆಯಲಾಗಿದೆ. “ಈಸ್ ಇಸ್ ಬ್ಯಾಕ್ʼ ಎಂದು ಬರೆಯಲಾಗಿದೆ.
ಈ ಪೋಸ್ಟರ್ ನ್ನು ನಿರ್ಮಾಪಕ ಶ್ರೀಕಾಂತ್ ಕೆಪಿ ಸೇರಿ ಅನೇಕರು ಹಂಚಿಕೊಂಡಿದ್ದಾರೆ. ಆದರೆ ಇದು ʼಟಗರು-2ʼ ಸಿನಿಮಾದ ಪೋಸ್ಟರ್ ವೋ ಅಥವಾ ಬೇರೆ ಸಿನಿಮಾವೋ, ನಿರ್ದೇಶಕರು ಯಾರು ಅನ್ನೋದು ಇದುವರೆಗೆ ರಿವೀಲ್ ಆಗಿಲ್ಲ.
Its celebration day everywhere in karunaadu # man with golden heart 💛 Big boss of all masses nd my inspiration one nd only @NimmaShivanna # Happy birthday 🎂 keep entertaining love uhttps://t.co/Q637hhJwrK pic.twitter.com/x3G3ZEruYZ
— Sreekanth KP (@kp_sreekanth) July 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.