![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 19, 2019, 3:04 AM IST
ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸುತ್ತಿರುವ “ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್ ಅವರು ಗೆಸ್ಟ್ ಅಪಿಯರೆನ್ಸ್ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆದರೆ, ಆ ಚಿತ್ರದಲ್ಲಿ ಸುದೀಪ್ ಯಾವ ಪಾತ್ರ ಮಾಡುತ್ತಾರೆಂಬುದು ಪಕ್ಕಾ ಆಗಿರಲಿಲ್ಲ. ಈಗ ಎಲ್ಲವೂ ಪಕ್ಕಾ ಆಗಿದ್ದು, ಸುದೀಪ್ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಹಾಗಾದರೆ ಸುದೀಪ್ “ರವಿ ಬೋಪಣ್ಣ’ದಲ್ಲಿ ಯಾವ ಪಾತ್ರ ಮಾಡುತ್ತಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಲಾಯರ್. ಹೌದು, “ರವಿ ಬೋಪಣ್ಣ’ದಲ್ಲಿ ಸುದೀಪ್ ಲಾಯರ್ ಆಗಿ ನಟಿಸಿದ್ದಾರೆ. ನಿರ್ದೇಶಕ ರವಿಚಂದ್ರನ್ ಹೇಳುವಂತೆ, ಒಳ್ಳೆಯ ದಿನದಲ್ಲೇ ಸುದೀಪ್ ಅವರ ಭಾಗದ ಚಿತ್ರೀಕರಣ ಮಾಡಲಾಗಿದೆ. ಅವರ ದೃಶ್ಯ ಕ್ಲೈಮ್ಯಾಕ್ಸ್ನಲ್ಲಿ ಬಂದರೂ ಚಿತ್ರೀಕರಣವನ್ನು ಮೊದಲು ಮಾಡಲಾಗಿದೆ.
ತಮ್ಮ ಚಿತ್ರದಲ್ಲಿ ಸುದೀಪ್ ಪಾತ್ರ ಮಾಡಿದ ಬಗ್ಗೆ ಹೇಳುವ ರವಿಚಂದ್ರನ್, “ಸುದೀಪ್ ಅವರನ್ನು ನಿರ್ದೇಶಿಸೊದೇ ಒಂದು ಖುಷಿ. ಬೆಳಗ್ಗೆ ಬೇಗನೇ ಬಂದು ತಮ್ಮ ಸೀನ್ಪೇಪರ್ ತೆಗೆದು, ಅದಕ್ಕೆ ಅವರದೇ ಆದ ಒಂದಷ್ಟು ಮ್ಯಾನರೀಸಂ ಸೇರಿಸಿ ಸಿದ್ಧರಾಗಿರುತ್ತಾರೆ. ಈ ಪಾತ್ರವನ್ನು ಸುದೀಪ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಕೇಳಿಕೊಂಡಾಗ ಸುದೀಪ್ ಪ್ರೀತಿಯಿಂದ ಬಂದು ನಟಿಸಿದ್ದಾರೆ’ ಎಂದರು.
ರವಿಚಂದ್ರನ್ ಅವರ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಎರಡನೇ ಬಾರಿ ನಟಿಸುತ್ತಿರೋದು. “ಪಾತ್ರ ಸಣ್ಣದೋ, ದೊಡ್ಡದೋ ರವಿಚಂದ್ರನ್ ಅವರ ನಿರ್ದೇಶನದ ಸಿನಿಮಾದಲ್ಲಿ ಎರಡನೇ ಬಾರಿ ನಟಿಸುತ್ತಿದ್ದೇನೆ. ಈ ಅವಕಾಶ ಅವರ ಮಕ್ಕಳಿಗೂ ಸಿಕ್ಕಿಲ್ಲ, ಆದರೆ, ನನಗೆ ಸಿಕ್ಕಿದೆ. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸೋದು ಒಂದು ಖುಷಿ.
ಚಿತ್ರರಂಗದಲ್ಲಿ ಕಾಸಿದೆ, ಆಡಿಯೋದಿಂದ ಕಾಸು ತೆಗೆಯಬಹುದು, ಒಂದು ಹಾಡನ್ನು ಹೀಗೂ ತೆಗೆಯಬಹುದೆಂದು ತೋರಿಸಿಕೊಟ್ಟವರು. ಒಂದು ಸಮಯದಲ್ಲಿ ನಾನು ಸೇರಿದಂತೆ ಅನೇಕ ಕಲಾವಿದರು ರವಿಚಂದ್ರನ್ ಅವರ ಸಿನಿಮಾದಲ್ಲಿ ಅವಕಾಶ ಸಿಗಲಿ, ಅವರಿಂದ ಕರೆಬರಲಿ ಎಂದು ಕಾಯುತ್ತಿದ್ದವರು. ನಾನು ಈಗಲೂ ಅವರ ಕರೆಬಂದಾಗ, ಬಂದು ನಟಿಸುತ್ತೇನೆ’ ಎಂದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.