ಸುದೀಪ್ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ
Team Udayavani, Jan 25, 2021, 8:21 AM IST
ನಟ ಸುದೀಪ್ ಸದ್ಯ “ಕೋಟಿಗೊಬ್ಬ-3′ ಮತ್ತು “ವಿಕ್ರಾಂತ್ ರೋಣ’ ಚಿತ್ರಗಳ ಮೂಲಕ ಈ ವರ್ಷ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ಸುದೀಪ್ ಮತ್ತೆ ನಿರ್ದೇಶನ ಯಾವಾಗ ಮಾಡುತ್ತಾರೆ? ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಈಗ ಸ್ವತಃ ಸುದೀಪ್ ಅವರೇ ಉತ್ತರಿಸಿದ್ದಾರೆ.
ಈಗಾಗಲೇ ಸುದೀಪ್ ನಿರ್ದೇಶನ ಮಾಡಲಿರುವ ಹೊಸಚಿತ್ರದ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ರೆಡಿಯಾಗಿದ್ದು, “ವಿಕ್ರಾಂತ್ ರೋಣ’ ಚಿತ್ರ ಮುಗಿಯು ತ್ತಿದ್ದಂತೆ, ಸುದೀಪ್ ತಮ್ಮ ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳಲಿ ದ್ದಾರಂತೆ. ಹೌದು, ಈ ಬಗ್ಗೆ ಮಾತನಾಡಿ ರುವ ಸುದೀಪ್, “ಈಗಾಗಲೇ ನಾನು ನಿರ್ದೇಶನ ಮಾಡಲಿ ರುವ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಆಗಿದ್ದು, “ವಿಕ್ರಾಂತ್ ರೋಣ’ ಸಿನಿಮಾ ಮುಗಿಯುತ್ತಿದ್ದಂತೆ, ಈ ಸಿನಿಮಾ ಶುರು ಮಾಡುವ ಯೋಚನೆ ಇದೆ. ಶೀಘ್ರದಲ್ಲಿಯೇ ಅದರ ಬಗ್ಗೆ ಉಳಿದ ಮಾಹಿತಿ ನೀಡುತ್ತೇನೆ’ ಎಂದಿದ್ದಾರೆ.
ಇನ್ನು “ಫ್ಯಾಂಟಮ್’ ಚಿತ್ರದ ಟೈಟಲ್ ಬದಲಾದ ಬಗ್ಗೆಯೂ ಮಾತನಾಡಿರುವ ಸುದೀಪ್, “3 ವರ್ಷದ ಹಿಂದೆಯೇ ಈ ಸಿನಿಮಾಕ್ಕೆ “ವಿಕ್ರಾಂತ್ ರೋಣ’ ಎನ್ನುವ ಟೈಟಲ್ ಇಡಬಹುದು ಎಂದು ಹೇಳಿದ್ದೆ. ಆದ್ರೆ ಚಿತ್ರದ ನಿರ್ದೇಶಕರು, ನಿರ್ಮಾಪಕರು “ಫ್ಯಾಂಟಮ್’ ಟೈಟಲ್ ಕಡೆಗೆ ಒಲವು ಹೊಂದಿದ್ದರಿಂದ ಅದೇ ಟೈಟಲ್ ಇಟ್ಟಿದ್ದೆವು. ಈಗ ಟೈಟಲ್ ಬದಲಾಯಿ ಸಬೇಕಾಗಿದ್ದ ರಿಂದ, ಎಲ್ಲರ ಆಸೆಯಂತೆ, “ವಿಕ್ರಾಂತ್ ರೋಣ’ ಟೈಟಲ್ ಇಟ್ಟಿದ್ದೇವೆ’ಎಂದಿದ್ದಾರೆ.
ಫ್ಯಾಂಟಮ್ಗಿಂತ ವಿಕ್ರಾಂತ್ ರೋಣ ಫೇಮಸ್ ಆಗಿತ್ತು!
ಸುದೀಪ್ ಅಭಿನಯದ “ಫ್ಯಾಂಟಮ್’ ಚಿತ್ರದ ಟೈಟಲ್ ಈಗ “ವಿಕ್ರಾಂತ್ ರೋಣ’ ಎಂದು ಬದಲಾಗಿದೆ. ಆದರೆ, ಅಭಿಮಾನಿಗಳಲ್ಲಿ ಮಾತ್ರ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಏಕಾಏಕಿ ಟೈಟಲ್ ಬದಲಾಗಲು ಕಾರಣ ವೇನೆಂದು. ಈ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಅನೂಪ್ ಭಂಡಾರಿ, “ವಿಕ್ರಾಂತ್ ರೋಣ ಎಂಬ ಪಾತ್ರದ ಬಗ್ಗೆ ಹೇಳಿದ ದಿನದಿಂದಲೇ ಅಭಿಮಾನಿಗಳಲ್ಲಿ ಅದರ ಕ್ರೇಜ್ ಹುಟ್ಟಿಕೊಂಡಿತು. ಫ್ಯಾಂಟಮ್ಗಿಂತ ವಿಕ್ರಾಂತ್ ರೋಣವೇ ಫೇಮಸ್ ಆಗುತ್ತಾ ಹೋಯಿತು. ಆ ಕಾರಣದಿಂದ ಈಗ ಟೈಟಲ್ “ವಿಕ್ರಾಂತ್ ರೋಣ’ ಎಂದಿಟ್ಟಿದ್ದೇವೆ’ ಎಂದಿದ್ದಾರೆ. ಅಂದಹಾಗೆ, ಚಿತ್ರದ ಟೈಟಲ್ ಲೋಗೋ ಜ.31 ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.