![V.kageri](https://www.udayavani.com/wp-content/uploads/2024/07/V.kageri-415x249.jpg)
Swathi Mutthina Male Haniye: ತಣ್ಣಗೆ ಕಾಡುವ ಕವನದಂತೆ…
Team Udayavani, Nov 25, 2023, 10:54 AM IST
![Swathi Mutthina Male Haniye: ತಣ್ಣಗೆ ಕಾಡುವ ಕವನದಂತೆ…](https://www.udayavani.com/wp-content/uploads/2023/11/tdy-4-20-620x372.jpg)
ನಾಯಕ ತನ್ನ ಜೀವನದ ಕೊನೆಯ ಹಂತದಲ್ಲಿರುತ್ತಾನೆ. ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಮಧ್ಯ ವಯಸ್ಸಿನಲ್ಲಿಯೇ ಉಸಿರು ಚೆಲ್ಲುವ ಪರಿಸ್ಥಿತಿ ಆತನದ್ದು. ಸಾಯುವ ಮುನ್ನವಾದರೂ ನೆಮ್ಮದಿಗೆ ಕೈ ಚಾಚುತ್ತಾನೆ. ಸಾವಿನ ದವಡೆಗೆ ತಲುಪಿರುವುದರಿಂದ ತನ್ನೋರು ಅನ್ನೋರು ಯಾರೂ ಇರುವುದಿಲ್ಲ. ಹೀಗಾಗಿ ಈತ ಊರು ಬಿಟ್ಟು ಬಂದಿರುತ್ತಾನೆ. ನಾಯಕಿಗೆ ಮೊದ ಮೊದಲು ಈತನ ವರ್ತನೆ ಇಷ್ಟವಾಗದಿದ್ದರೂ, ಮುಂದೆ ಆತನಿಲ್ಲದೇ ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಾಂಧವ್ಯ ಬೇರೂರಿರುತ್ತದೆ. ಆದರೆ ಆಕೆ ಗೃಹಿಣಿ..!
ಇದು “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಕಥಾಸಾರಾಂಶ. ಒಟ್ಟಾರೆ ಸಿನಿಮಾವನ್ನು ಕವನದ ರೂಪಕದಂತೆ ಕಟ್ಟಿಕೊಟ್ಟಿದ್ದಾರೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ. ಯಾವುದೇ ಅಬ್ಬರವಿಲ್ಲದೇ ತಣ್ಣನೆಯ ಗಾಳಿಯಂತೆ ಕತೆಯನ್ನು ನಿರೂಪಿಸುತ್ತಾರೆ… ಪಾತ್ರ ಪೋಷಣೆಯಲ್ಲೂ ಅಷ್ಟೇ ಅಚ್ಚುಕಟ್ಟು. ಹೆಣ್ಣಿನ ಒಳಮನಸ್ಸು, ಆಕೆಯ ಸುಖ-ದುಃಖ, ಬೇಕು-ಬೇಡಗಳನ್ನು ಸಮರ್ಪಕವಾಗಿ ತೆರೆಯ ಮೇಲೆ ಹರಡಿದ್ದಾರೆ.
ಮಳೆಯ ಹನಿ, ಇಬ್ಬನಿ, ನಂದಿ ಬಟ್ಲು ಹೂ, ಗಿಡ, ಮರ, ಎಲೆ… ಎಲ್ಲವನ್ನೂ ಕತೆಯೊಳಗೆ ತಂದು ಕೂರಿಸಿದ್ದಾರೆ. ಹೀಗಾಗಿ ಪಾತ್ರಗಳು ಕೆಲವೊಮ್ಮೆ ಮಾತನಾಡದಿದ್ದರೂ, ಪ್ರತಿ ಫ್ರೇಮ್ನಲ್ಲೂ ಮಾತು ಧ್ವನಿಸುವಂತೆ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ರಾಜ್ ಸಫಲರಾಗಿದ್ದಾರೆ.
ನಟನೆ, ನಿರ್ದೇಶನ ಎರಡರಲ್ಲೂ ರಾಜ್ ನೀರು ಕುಡಿದಷ್ಟೇ ಸರಾಗವಾಗಿ ಸರಿದೂಗಿಸಿಕೊಂಡು ಹೋಗಿದ್ದಾರೆ. ಸಿರಿ ಸಿನಿಮಾ ಮುಗಿದ ಮೇಲೂ ಕಾಡುತ್ತಾರೆ. ಮಿದುನ್ ಸಂಗೀತ, ಪ್ರವೀಣ್ ಶ್ರೀಯಾನ್ ಕ್ಯಾಮೆರಾ ಕೆಲಸ ಮುತ್ತಿನಷ್ಟೇ ಹೊಳಪು ಮತ್ತು ಮೌಲ್ಯ ಕಾಪಾಡಿಕೊಂಡಿದೆ.
ಟಾಪ್ ನ್ಯೂಸ್
![V.kageri](https://www.udayavani.com/wp-content/uploads/2024/07/V.kageri-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಶೀಘ್ರದಲ್ಲೇ ಕಿಚ್ಚ ಸುದೀಪ್ ʼಹುಚ್ಚʼ, ಶಿವರಾಜ್ ಕುಮಾರ್ ʼಜೋಗಿʼ ಸಿನಿಮಾ ರೀ-ರಿಲೀಸ್](https://www.udayavani.com/wp-content/uploads/2024/07/15-2-150x90.jpg)
ಶೀಘ್ರದಲ್ಲೇ ಕಿಚ್ಚ ಸುದೀಪ್ ʼಹುಚ್ಚʼ, ಶಿವರಾಜ್ ಕುಮಾರ್ ʼಜೋಗಿʼ ಸಿನಿಮಾ ರೀ-ರಿಲೀಸ್
![“ದರ್ಶನ್ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್](https://www.udayavani.com/wp-content/uploads/2024/07/13-2-150x90.jpg)
“ದರ್ಶನ್ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್
![Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ](https://www.udayavani.com/wp-content/uploads/2024/07/12-3-150x90.jpg)
Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ
![ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್ ಮದುವೆ ಕುರಿತು ತಾಯಿ ಮಾಲತಿ ಮಾತು](https://www.udayavani.com/wp-content/uploads/2024/07/tharun-150x83.jpg)
ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್ ಮದುವೆ ಕುರಿತು ತಾಯಿ ಮಾಲತಿ ಮಾತು
![Divorce Case: ಯುವ ರಾಜ್ಕುಮಾರ್ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ](https://www.udayavani.com/wp-content/uploads/2024/07/9-3-150x90.jpg)
Divorce Case: ಯುವ ರಾಜ್ಕುಮಾರ್ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.