![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 2, 2018, 11:09 AM IST
ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್ ಚಿತ್ರ ಇದೇ 18ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಹಾಗೂ ಶಿವಣ್ಣ ಇಬ್ಬರು ಮೊದಲ ಬಾರಿ ನಟಿಸಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಶಿವರಾಜಕುಮಾರ್, “ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಬೇಕು.
ಯಾವುದೇ ಕಾರಣಕ್ಕೂ ನಾನಾ-ನೀನಾ, ಅವರಿಗೆ ಹೆಚ್ಚು ಪ್ರಾಮುಖ್ಯತೆ-ಇವರಿಗೆ ಕೊಟ್ಟಿಲ್ಲ ಎಂಬ ಲೆಕ್ಕಾಚಾರಕ್ಕೆ ಹೋಗಬಾರದು. ಯಾವ ಜಾಗದಲ್ಲಿ ಯಾವ ನಟ ಸ್ಕೋರ್ ಮಾಡಬೇಕೋ ಅವರು ಮಾಡಿರ್ತಾರೆ. ಅದು ಬಿಟ್ಟು ಅಭಿಮಾನಿಗಳು ಥಿಯೇಟರ್ಗೆ ಬಂದು ಏನಾದ್ರೂ ಗಲಾಟೆ ಮಾಡೋದಾದ್ರೆ, ನಾನು ನಮ್ಮ ತಾಯಾಣೆಗೂ ಥಿಯೇಟರ್ಗೆ ಬರೋದಿಲ್ಲ. ನಾನು ತಾಯಿ ಆಣೆ ಇಟ್ರೆ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತೇನೆ.
ಒಂದು ವೇಳೆ ಗಲಾಟೆ ಮಾಡ್ತೀರಂತಾದ್ರೆ ಖಂಡಿತ ಬರೋದಿಲ್ಲ. ಈ ಸಿನಿಮಾವನ್ನು ಒಂದು ಕಾಂಬಿನೇಷನ್ ಸಿನಿಮಾವಾಗಿ ಎಂಜಾಯ್ ಮಾಡಿ. ಈ ಥರದ ಸಿನಿಮಾಗಳನ್ನು ಅಭಿಮಾನಿಗಳು ಪ್ರೋತ್ಸಾಹಿಸಬೇಕೇ ವಿನಾ, ಅವರೇ ವಿಲನ್ಗಳಾಗಬಾರದು. ಒಂದುವೇಳೆ ಆ ರೀತಿ ಏನಾದ್ರೂ ಅಡ್ಡಿ ಮಾಡೋದಾದ್ರೆ ಇನ್ನೊಮ್ಮೆ ಹೇಳ್ತಿದ್ದೀನಿ, ಖಂಡಿತಾ ನಾನು ಥಿಯೇಟ್ರಿಗೆ ಬರೋದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
ಮುಂದೆ ಮಾತನಾಡಿದ ಶಿವಣ್ಣ, “ನನ್ನ ಅಭಿಮಾನಿಗಳಾಗಲಿ, ಸುದೀಪ್ ದಿ ವಿಲನ್ ಬಿಡುಗಡೆ ಹಿನ್ನೆಲೆಯಲ್ಲಿ ಶಿವರಾಜ್ಕುಮಾರ್ ಖಡಕ್ ನುಡಿ ಅಭಿಮಾನಿಗಳಾಗಲಿ, ಪುನೀತ್ ಅಭಿಮಾನಿಗಳಾಗಲೀ… ದರ್ಶನ್ ಅಭಿಮಾನಿಗಳಾಗಲಿ… ಯಾರದೇ ಅಭಿಮಾನಿಗಳಾಗಲಿ, ಸಿನಿಮಾವನ್ನು ಸಿನಿಮಾವಾಗೇ ನೋಡಬೇಕು. ನಾವೆಲ್ಲರೂ ಒಂದಾಗೇ ಇದ್ದೇವೆ. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ವಿವಾದಕ್ಕೆಡೆ ಮಾಡಿಕೊಡಬಾರದು’ ಎಂದರು ಶಿವಣ್ಣ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.