GHOST; ನನಗೆ ಹೊಸ ಅನುಭವ ಕೊಟ್ಟ ಸಿನಿಮಾವಿದು: ಘೋಸ್ಟ್ ಮೇಲೆ ಶಿವಣ್ಣ ನಿರೀಕ್ಷೆ
Team Udayavani, Oct 19, 2023, 11:35 AM IST
ಶಿವರಾಜ್ ಕುಮಾರ ನಟನೆಯ “ಘೋಸ್ಟ್’ ಚಿತ್ರ ಇಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್, ಟ್ರೇಲರ್ ಹಿಟ್ ಆಗುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ಚಿತ್ರತಂಡ ಕೂಡಾ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬ ವಿಶ್ವಾಸದಲ್ಲಿದೆ. ತಮ್ಮ ಪಾತ್ರ, ಸಿನಿಮಾದ ಬಗ್ಗೆ ಶಿವಣ್ಣ ಇಲ್ಲಿ ಮಾತನಾಡಿದ್ದಾರೆ.
1 ಇಂದು ನಿಮ್ಮ ಘೋಸ್ಟ್ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಏನು ಹೇಳುತ್ತೀರಿ?
ನನ್ನ ಸಿನಿಕೆರಿಯರ್ನಲ್ಲಿ ವಿಭಿನ್ನವಾಗಿ ನಿಲ್ಲುವ ಸಿನಿಮಾವಿದು. ಕಥೆ ಕೇಳಿದ ಕೂಡಲೇ ಈ ಸಿನಿಮಾವನ್ನು ಮಾಡಬೇಕೆನಿಸಿತು. ತಿಂಗಳಿಗೆ 15 ದಿನ ತರಹ ಡೇಟ್ ಕೊಟ್ಟೆ. ನಾನು ಮಾಡಿರುವ ಸಿನಿಮಾಗಳಿಗಿಂತ ಈ ಕಥೆ ಬೇರೆ ತರಹ ಇತ್ತು. ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಮಾಡಿರುವ ಸಿನಿಮಾವಿದು. ಮೂರು ಶೇಡ್ನಲ್ಲಿ ನನ್ನ ಪಾತ್ರ ಸಾಗುತ್ತದೆ.
2 ಕಥೆ ಬಗ್ಗೆ ಹೇಳುವುದಾದರೆ?
ಇದು ಬುದ್ಧಿವಂತಿಕೆಯ ಮೇಲೆ ಸಾಗುವ ಸಿನಿಮಾ. ಜೊತೆಗೆ ಸಮಾಜದಲ್ಲಿ ಒಂದು ಭಯ ಇರಬೇಕು. ಅದು ನಮ್ಮ ವ್ಯವಸ್ಥೆ ಕಾಪಾಡುವುದಕ್ಕಾಗಿ ಬೇಕು ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಆ ಭಯವನ್ನು ಹೇಗೆ ಹುಟ್ಟಿಸುತ್ತಾನೆ ಎಂಬುದು ಸಿನಿಮಾದ ಕುತೂಹಲದ ಅಂಶ.
3 ಸಿನಿಮಾದಲ್ಲಿನ ನಿಮ್ಮ ಯಂಗ್ಲುಕ್ ಗಮನ ಸೆಳೆಯುತ್ತಿದೆ?
ಮೊದಲು ನನಗೂ ಭಯವಿತ್ತು. ಹೇಗೆ ಕಾಣಿಸುತ್ತೇನೋ ಎಂದು. ಆ ಗೆಟಪ್ ಅನ್ನು ತುಂಬಾ ಪ್ಲ್ರಾನ್ ಮಾಡಿ ಮಾಡಿದ್ದರು. ಚಿತ್ರಮಂದಿರದಲ್ಲಿ ಜನರ ಪ್ರತಿಕ್ರಿಯೆ ಹೇಗಿರುತ್ತದೋ ಕಾದು ನೋಡಬೇಕು.
4 ನಿಮ್ಮ ಮ್ಯಾನರಿಸಂ ಬೇರೆ ತರಹ ಇದೆಯಲ್ಲಾ?
ಹೌದು, ಇಲ್ಲಿನ ನನ್ನ ಲುಕ್, ಬಾಡಿ ಲಾಂಗ್ವೇಜ್, ಸ್ಟೈಲ್ ಎಲ್ಲವೂ ಬೇರೆ ತರಹ ಇದೆ. ಚಿತ್ರದಲ್ಲಿ ಡೈಲಾಗ್ಸ್ ಕಡಿಮೆ ಇದೆ. ಚಿತ್ರದ ಬಿಗ್ ಡ್ಯಾಡಿ ಪಾತ್ರಕ್ಕೆ ತಕ್ಕಂತೆ ಸಿಂಕ್ ಆಗಿದೆ.
5 ಘೋಸ್ಟ್ 2 ಬರುತ್ತಾ?
ಚಿತ್ರ ಮುಂದುವರೆಯುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಅದೇ ರೀತಿ ಮಾಡಿದ್ದೇವೆ. ಮೊದಲ ಭಾಗದಲ್ಲಿನ ಪ್ರಶ್ನೆಗಳಿಗೆ ಎರಡನೇ ಭಾಗದಲ್ಲಿ ಉತ್ತರ ಸಿಗುತ್ತದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.