ಇಂದು ಸಂಜೆ ಡ್ರಾಮಾ ಜೂನಿಯರ್ ಫಿನಾಲೆ

ಜೀ ವಾಹಿನಿಯಲ್ಲಿ ಪ್ರಸಾರ

Team Udayavani, Mar 24, 2019, 11:17 AM IST

Zee-Kannada

ಕಿರುತೆರೆ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಈಗಾಗಲೇ ಹಲವು ಧಾರಾವಾಹಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದೆ. ಈಗಾಗಲೇ “ಡ್ರಾಮಾ ಜೂನಿಯರ್’ ಸಾಕಷ್ಟು ಗಮನಸೆಳೆದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಾರಿ “ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ನಡೆದದ್ದು ತಿಪಟೂರಿನಲ್ಲಿ. ಗ್ರ್ಯಾಂಡ್‌ ಫಿನಾಲೆ ತಿಪಟೂರಿನಲ್ಲಿ ನಡೆಯಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿನ ಜನರು, ಪ್ರೀತಿಯಿಂದಲೇ ಪುಟಾಣಿಗಳನ್ನು ಸ್ವಾಗತಿಸಿದ ಖುಷಿ ಹೇಳತೀರದು.

ತಿಪಟೂರಿನ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಜನರ ನಡುವೆ “ಡ್ರಾಮಾ ಜೂನಿಯರ್ ಸೀಸನ್‌ 3′ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇಷ್ಟು ದಿನಗಳ ಕಾಲ ವಾಹಿನಿ ಆಯೋಜಿಸಿದ್ದ “ಡ್ರಾಮಾ ಜೂನಿಯರ್’ ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಮಕ್ಕಳು, ಗ್ರ್ಯಾಂಡ್‌ ಫಿನಾಲೆಯಲ್ಲಿ ಮತ್ತಷ್ಟು ಮನರಂಜನೆ ನೀಡಿದ್ದು ವಿಶೇಷ.

ಇನ್ನು, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಮಹಾದೇವಿ’, “ಕಮಲಿ’, “ಪಾರು’ ಧಾರಾವಾಹಿಗಳ ನಾಯಕ, ನಾಯಕಿಯರಾದ ಕಮಲಿ, ರಿಷಿ, ಪಾರು, ಆದಿತ್ಯ, ಹಿರಣ್ಮಯಿ ಹಾಗೂ ಸೂರ್ಯ ಅವರು ಆ ವೇದಿಕೆಯಲ್ಲಿ ಸ್ಟೆಪ್‌ ಹಾಕುವ ಮೂಲಕ ಮತ್ತಷ್ಟು ಮೆರುಗು ನೀಡಿದರು.

ಇದರೊಂದಿಗೆ “ಸರಿಗಮಪ ಸೀಸನ್‌15ರ ವಿಜೇತರಾದ ಕೀರ್ತನ್‌ ಹೊಳ್ಳ, ಹನುಮಂತ ಅವರು ಡ್ರಾಮಾ ಜೂನಿಯರ್ ಗ್ರ್ಯಾಂಡ್‌ ಫಿನಾಲೆ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ನಿರೂಪಕ ಮಾಸ್ಟರ್‌ ಆನಂದ್‌ ಮತ್ತು ತೀರ್ಪುಗಾರರಾದ ವಿಜಯ ರಾಘವೇಂದ್ರ, ಜೂಲಿ ಲಕ್ಷ್ಮೀ ಹಾಗು ಮುಖ್ಯಮಂತ್ರಿ ಚಂದ್ರು ಅವರು ವೇದಿಕೆಗೆ ಬಂದು ಮಕ್ಕಳಿಗೆ ಶುಭ ಕೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡದರು.

ಗ್ರ್ಯಾಂಡ್‌ ಫಿನಾಲೆಯಲ್ಲಿ ಗ್ರೂಪ್‌ ಆ್ಯಕ್ಟ್, ಜುಗಲ್ ಬಂಧಿ ಹಾಗು ಸೋಲೋ ರೌಂಡ್‌ ಹೀಗೆ 3 ಹಂತದಲ್ಲಿ ಕಾರ್ಯಕ್ರಮ ನಡೆಯಿತು. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿನಯವಿತ್ತು. ಅದನ್ನು ಕಂಡ ತಿಪಟೂರು ಮಂದಿ ಮೊಗದಲ್ಲಿ ಮತ್ತಷ್ಟು ಖುಷಿ. ಆದರೆ, ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರದರ್ಶನ ಕೊಟ್ಟರೂ, ಆ ಪೈಕಿ ಯಾರು ವಿಜೇತರು ಎಂಬುದು ಕೆಲ ಕಾಲ ಗೊಂದಲವಿತ್ತು.

ಕೊನೆಗೂ ತೀರ್ಪುಗಾರರು ಮತ್ತು ವಿನ್ನರ್ ಪ್ರಾಯೋಜಕರಾದ ಕಾನ್ಫಿಡೆಂಟ್ ಗ್ರೂಪ್‌ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಜೆ ರಾಯ್ ಅವರು “ಡ್ರಾಮಾ ಜೂನಿಯರ್ ಸೀಸನ್‌ 3′ ವಿನ್ನರ್‌ ಯಾರೆಂಬುದನ್ನು ಘೋಷಣೆ ಮಾಡಿದರು. ಆ ವಿಜೇತರು ಯಾರೆಂಬುದನ್ನು ಮಾ.24 ರ ಭಾನುವಾರ (ಇಂದು) ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ಶೋ ವೀಕ್ಷಿಸಬಹುದಾಗಿದೆ.

ಟಾಪ್ ನ್ಯೂಸ್

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

1-reeeeee

Udupi Shri Krishna Matha; 100 ಕಲಾವಿದರಿಂದ ನಿರಂತರ 14 ತಾಸು ನೃತ್ಯ ಪ್ರದರ್ಶನ

Finance

Direct Tax: ನೇರ ತೆರಿಗೆ ಸಂಗ್ರಹ 19.60 ಲಕ್ಷ ಕೋಟಿ ರೂ.ಗೆ ಏರಿಕೆ: ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bigg

BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Arjun Sarja announces new film Seetha Payana

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

police crime

Sullia; ಸ್ತ್ರೀಯರ ಬಗ್ಗೆ ತುತ್ಛ ಹೇಳಿಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ದೂರು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.