![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 15, 2019, 3:02 AM IST
ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸಿನಿಮಾಗಳು ಆರಂಭವಾಗುತ್ತಲೇ ಇರುತ್ತವೆ. ಇದರಲ್ಲಿ ಬಹುಪಾಲು ಹೊಸಬರದ್ದೇ ಇರುತ್ತದೆ ಎಂಬುದು ಕೂಡಾ ಸತ್ಯ. ಈಗ “ವೈಭವ್’ ಎಂಬ ಸಿನಿಮಾವೊಂದು ಮುಹೂರ್ತ ಆಚರಿಸುವ ಸಂಭ್ರಮದಲ್ಲಿದೆ. ಮಂಜುನಾಥ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಧರಣೇಂದ್ರ ಪದ್ಮಾವತಿದೇವಿ ಮಹಿಮೆ’ ಎಂಬ ಕಿರು ಚಿತ್ರದ ಜೊತೆಗೆ ಒಂದು ಕನ್ನಡ ಹಾಗು ತುಳು ಚಿತ್ರವೊಂದನ್ನು ನಿರ್ದೇಶಿಸಿರುವ ಮಂಜುನಾಥ್ ಈಗ “ವೈಭವ್’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ.
ಚಂದ್ರು ಕೆ ಗೌಡ ಈ ಚಿತ್ರದ ನಾಯಕ. ಈ ಹಿಂದೆ “ಹಫ್ತಾ’ ಎಂಬ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ಚಂದ್ರು ಅವರಿಗೆ ಈ ಚಿತ್ರದ ಮೂಲಕ ನಾಯಕರಾಗಿ ಬಡ್ತಿ ಸಿಗುತ್ತಿದೆ. ಎರಡು ಬಾರಿ ಮಿ.ಶಿವಮೊಗ್ಗ, ಮೂರು ಬಾರಿ ಮಿ.ಚಿಕ್ಕಮಗಳೂರು, ನಾಲ್ಕು ಬಾರಿ ಕರ್ನಾಟಕ ಮತ್ತು ಮಿಸ್ಟರ್ಇಂಡಿಯಾ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಚಂದ್ರು, ಈಗ “ವೈಭವ್’ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
“ವೈಭವ್’ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಆ್ಯಕ್ಷನ್ ಅಂಶವನ್ನು ಒಳಗೊಂಡಿದೆ. ಬೆಂಗಳೂರು, ಪುತ್ತೂರು, ಕಾರ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಶ್ರೀಧರ್ ದೀಕ್ಷಿತ್ ಸಂಗೀತ, ವಾಸು ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಸಂತೋಷ್ ಕುಮಾರ್ ಸಾಹಸವಿದೆ. ಈ ಚಿತ್ರವನ್ನು ಪ್ರವೀಣ್ ಕುಮಾರ್ ನಿರ್ಮಾಣವಿರುವ ಈ ಚಿತ್ರ ದೀಪಾವಳಿಯಂದು ಸೆಟ್ಟೇರುತ್ತಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.