![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 25, 2019, 3:09 AM IST
ನಟ ವಿನಯ್ ರಾಜಕುಮಾರ್ ಅವರು ಸದ್ಯಕ್ಕೆ “ಗ್ರಾಮಾಯಣ’ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಹೊಸದೊಂದು ಚಿತ್ರಕ್ಕೆ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರವನ್ನು ರವಿಬಸ್ರೂರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರ ಪಿಆರ್ಕೆ ಬ್ಯಾನರ್ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಅಶ್ವಿನಿ ಪುನೀತ್ ಅವರ ಜೊತೆ ಎನ್.ಎಸ್.ರಾಜ್ಕುಮಾರ್ ಅವರು ಜೊತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯಕ್ಕೆ ಚಿತ್ರದ ಶೀರ್ಷಿಕೆ ಪಕ್ಕಾ ಆಗಿಲ್ಲ. ಮೇ.7 ರಂದು ಸಿನಿಮಾ ಕುರಿತು ಮಾಹಿತಿ ಹೊರಬೀಳಲಿದೆ. ಅಂದು ವಿನಯ್ರಾಜಕುಮಾರ್ ಅವರ ಹುಟ್ಟುಹಬ್ಬ. ಹಾಗಾಗಿ, ಅಂದೇ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ಲುಕ್ ಬಿಡುಗಡೆಯಾಗಲಿದೆ. “ಉಗ್ರಂ’ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ರವಿಬಸ್ರೂರು, “ಕೆಜಿಎಫ್’ ಚಿತ್ರದಲ್ಲೂ ಸಾಕಷ್ಟು ಸುದ್ದಿಯಾದರು.
ಇದಕ್ಕೂ ಮೊದಲು “ಕಟಕ’ ಚಿತ್ರ ನಿರ್ದೇಶಿಸಿದ್ದ ಅವರು, ಆ ನಡುವೆಯೂ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ನಡುವೆ ರವಿಬಸ್ರೂರು ಅವರು ವಿನಯ್ರಾಜಕುಮಾರ್ ಅವರಿಗೆ ಒನ್ಲೈನ್ ಕಥೆ ಹೇಳಿದ್ದಾರೆ. ಆ ಕಥೆ ವಿನಯ್ ಮತ್ತು ಅವರ ಕುಟುಂಬದವರಿಗೂ ಇಷ್ಟವಾಗಿದೆ.
ಅದೊಂದು ಮಾಸ್ ಎಂಟರ್ಟೈನರ್ ಸಿನಿಮಾ ಆಗಿದ್ದು, “ಗ್ರಾಮಾಯಣ’ ಚಿತ್ರದ ಬಳಿಕ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯಕ್ಕೆ “ಕೆಜಿಎಫ್ ಚಾಪ್ಟರ್ 2′ ಚಿತ್ರದ ಚಟುವಟಕೆಯಲ್ಲಿ ಬಿಜಿಯಾಗಿರುವ ರವಿಬಸ್ರೂರು, ವಿನಯ್ರಾಜಕುಮಾರ್ ಅವರಿಗೆ ಹೇಳಿರುವ ಕಥೆ ಮೇಲೆ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇರುವ ಕೆಲಸಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ,
ಸ್ಕ್ರಿಪ್ಟ್ ಕೆಲಸಕ್ಕೆ ಕೈ ಹಾಕುವ ನಿರ್ಧಾರ ಮಾಡಿದ್ದಾರೆ ರವಿಬಸ್ರೂರು. ಈ ಹಿಂದೆ ರವಿಬಸ್ರೂರು ನಿರ್ದೇಶಿಸಿದ್ದ “ಕಟಕ’ ಚಿತ್ರಕ್ಕೂ ರಾಜ್ಕುಮಾರ್ ಅವರೇ ಹಣ ಹಾಕಿದ್ದರು. ಈಗ ವಿನಯ್ರಾಜಕುಮಾರ್ ಚಿತ್ರವನ್ನು ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ವಿನಯ್ ಅಭಿನಯಿಸಲಿರುವ ಹೊಸ ಚಿತ್ರ ಈ ವರ್ಷ ಶುರುವಾಗಿ, 2020 ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.