Vinay Rajkumar: ‘ಪೆಪೆ’ ಸರಳವಲ್ಲ, ವಿಭಿನ್ನ…


Team Udayavani, Aug 27, 2024, 11:58 AM IST

Vinay Rajkumar: ‘ಪೆಪೆ’ ಸರಳವಲ್ಲ, ವಿಭಿನ್ನ…

ಇತ್ತೀಚೆಗೆ ತನ್ನ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ವಿನಯ್‌ ರಾಜ್‌ಕುಮಾರ್‌ ನಟನೆಯ “ಪೆಪೆ’ ಸಿನಿಮಾ ಆ. 30ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಶ್ರೀಲೇಶ್‌ ನಾಯರ್‌ ಮಾತನಾಡಿದ್ದಾರೆ.

“ಇದು ಸರಳ ಕಥೆಯಲ್ಲ, ಸಂಕೀರ್ಣ ಕಥೆ’ ಎನ್ನುತ್ತಾ ಸಿನಿಮಾ ಬಗ್ಗೆ ಮಾತು ಆರಂಭಿಸಿದ ಶ್ರೀಲೇಶ್‌, “ಚಿತ್ರದ ಕಥಾನಾಯಕನ ಹೆಸರು ಪ್ರದೀಪ್‌. ಎಲ್ಲರೂ ಅವನನ್ನು ಪೆಪೆ ಎಂದು ಕರೆಯುತ್ತಾರೆ. ನಾನು ಮೂಲ ಕೇರಳದವನು ಅಲ್ಲಿ ಈ ಹೆಸರು ಸಾಮಾನ್ಯ. ಇಲ್ಲಿ ನಾಯಕನ ಪಾತ್ರದ ಹೆಸರೇ ಚಿತ್ರದ ಶೀರ್ಷಿಕೆ. ಇದು ನನ್ನ ಮೊದಲ ಕಮರ್ಷಿಯಲ್‌ ದೊಡ್ಡಮಟ್ಟದ ಸಿನಿಮಾ. ನಾನು ಮೊದಲು ಕಥೆ ಹೇಳಿದ್ದೇ ವಿನಯ್‌ ಅವರಿಗೆ. ಒಂದೇ ಬಾರಿ ಕೇಳಿ, ಇಷ್ಟಪಟ್ಟು ಸಿನಿಮಾ ಒಪ್ಪಿಕೊಂಡ್ರು’ ಎನ್ನುತ್ತಾರೆ ಶ್ರೀಲೇಶ್‌.

ಈವರೆಗೆ ಕೌಟುಂಬಿಕ, ಸಾಫ್ಟ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ವಿನಯ್‌ ಅವರನ್ನು ಆ ಚೌಕಟ್ಟಿನಿಂದಾಚೆಗೆ ಶ್ರೀಲೇಶ್‌ ಕರೆತಂದಿದ್ದಾರೆ.

ಪೆಪೆಯಲ್ಲಿ ವಿನಯ್‌ ಅವರ ಹೊಸ ಅವತಾರ ಹಾಗೂ ಚಿತ್ರದ ಬಗ್ಗೆ ಮತ್ತಷ್ಟು ಹೇಳುವ ಶ್ರೀಲೇಶ್‌, “ನಿಜ, ವಿನಯ್‌ ಅವರು ಮೊದಲು ಈ ರೀತಿ ಪಾತ್ರ ಮಾಡಿರಲಿಲ್ಲ. ಅವರನ್ನು ನಿರ್ದೇಶಿಸುವುದು ಬಹಳ ಸುಲಭ. ಕಥೆ, ಸನ್ನಿವೇಶ ಕೇಳಿದ ಮೇಲೆ ಅದರಲ್ಲೇ ಮುಳುಗಿಬಿಡ್ತಾ ಇದ್ದರು. ಪಾತ್ರಕ್ಕೆ  ಅವರ ಮಾನಸಿಕ ತಯಾರಿ ಹೆಚ್ಚಾಗಿರುತ್ತಿತ್ತು. ಪೆಪೆಯದ್ದು ಸೇಡು ತೀರಿಸಿಕೊಳ್ಳುವ ಕಥಾಹಂದರ. ಇಲ್ಲಿ ಕಾಮಿಡಿ ಇಲ್ಲ. ಮಾಸ್‌ ಅಂಶಗಳನ್ನು ಕಲಾತ್ಮಕವಾಗಿ, ಕೆಲವು ಗಾಢ ವಿಚಾರಗಳನ್ನು ನೇರವಾಗಿ ಹೇಳಲಾಗಿದೆ. ಚಿತ್ರದ ಕಥೆ ಜತೆಗೆ ಇದರ ಪಾತ್ರಗಳೂ ಪ್ರಮುಖ. ಹಾಗೆ ಬಂದು ಹೋಗುವ ಪಾತ್ರ ಇಲ್ಲಿಲ್ಲ. ಪ್ರತಿ ಪಾತ್ರ ತಮ್ಮದೇ ಭಾವನೆ ಪ್ರದರ್ಶಿಸುತ್ತದೆ’ ಎಂಬುದು ನಿರ್ದೇಶಕ ಶ್ರೀಲೇಶ್‌ ಮಾತು.

ಟಾಪ್ ನ್ಯೂಸ್

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

aatishi

Anti-national;ಅಫ್ಜಲ್ ಗುರು ವಿಚಾರದಲ್ಲಿ ಆತಿಷಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ

1

Vishnuvardhan Birthday: ವಿಷ್ಣುವರ್ಧನ್‌ ಜನ್ಮದಿನ ಆಚರಿಸಲು ಫ್ಯಾನ್ಸ್‌  ರೆಡಿ

1-pti

Army;ಕಮರಿಗೆ ಬಿದ್ದ ವಾಹನ: ಪ್ಯಾರಾಟ್ರೂಪರ್ ಮೃ*ತ್ಯು,5 ಕಮಾಂಡೋಗಳಿಗೆ ಗಾಯ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

1

Vishnuvardhan Birthday: ವಿಷ್ಣುವರ್ಧನ್‌ ಜನ್ಮದಿನ ಆಚರಿಸಲು ಫ್ಯಾನ್ಸ್‌  ರೆಡಿ

16

JHONTY SON OF JAYRAJ: ಜಯರಾಜ್‌ ಸುತ್ತ ಮತ್ತೊಂದು ಚಿತ್ರ

Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ

Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

3-thirthahalli

Thirthahalli: ಕಾರ್ಮಿಕರಿಗೆ ಕಿಟ್ ವಿತರಿಸಿದ ಆರಗ ಜ್ಞಾನೇಂದ್ರ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

1-dde

Edneer ಶ್ರೀ ಚಾತುರ್ಮಾಸ್ಯ; ಪದಯಾನ ತಂಡದ ಭರತನಾಟ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.