![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 22, 2023, 9:36 AM IST
“ನನ್ನನ್ನು ಒಬ್ಬಳು ನಟಿಯಾಗಿ ಜನರಿಗೆ ಪರಿಚಯಿಸಿದ್ದು “ಜೊತೆ ಜೊತೆಯಲಿ’ ಸೀರಿಯಲ್. ಈ ಸೀರಿಯಲ್ನ ಮೊದಲ ಶಾಟ್ ನನ್ನ ಮೇಲೆ ಶುರುವಾಗಿ, ಕೊನೆಯ ಶಾಟ್ ನನ್ನಿಂದಲೇ ಮುಗಿದಿದೆ. ಪರಿಚಯವಿಲ್ಲದೆ, ಈ ತಂಡದ ಜೊತೆ ಸೇರಿಕೊಂಡ ನನಗೆ, ಅದೇ ತಂಡ ಇದೀಗ ಮತ್ತೂಂದು ಫ್ಯಾಮಿಲಿಯಂತಾಗಿತ್ತು. ಸುಮಾರು ನಾಲ್ಕು ವರ್ಷಗಳ ಈ ಧಾರಾವಾಹಿಯ ನಂಟು ಇದೀಗ ಕೊನೆಯಾಗಿದೆ. ತುಂಬ ಬೇಸರಿಂದಲೇ ಇದನ್ನು ಒಪ್ಪಿಕೊಳ್ಳಬೇಕಾಗಿದೆ’ ಇದು “ಜೊತೆ ಜೊತೆಯಲಿ…’ ಧಾರಾವಾಹಿಯ ಬಗ್ಗೆ ನಟಿ ಮೇಘಾ ಶೆಟ್ಟಿ ಮಾತು.
“ಇಡೀ ಧಾರಾವಾಹಿ ಮತ್ತು ಅದರ ತಂಡದ ಪ್ರತಿಯೊಬ್ಬರ ಜೊತೆಗೂ ಒಂದು ಭಾವನಾತ್ಮಕ ನಂಟಿದೆ. ನಿರ್ದೇಶಕರಿಂದ ಹಿಡಿದು ಕಲಾವಿದರು, ತಂತ್ರಜ್ಞರ ಜೊತೆ ಓಡಾಡಿದ್ದೇನೆ, ಒಟ್ಟಿಗೆ ಕುಳಿತು ಊಟ ಮಾಡಿದ್ದೇನೆ. ಅದೆಲ್ಲವನ್ನು ಎಂದಿಗೂ ಮರೆಯಲಾಗದು. ಅನು ಸಿರಿಮನೆ ಪಾತ್ರ ನನಗೆ ಎಲ್ಲವನ್ನು ನೀಡಿದೆ. ಹೆಸರು, ಅವಕಾಶ, ಜನರ ಪ್ರೀತಿ ಇವೆಲ್ಲದಕ್ಕೂ “ಜೊತೆ ಜೊತೆಯಲಿ…’ ಸೀರಿಯಲ್ ಮಾತ್ರ ಕಾರಣ’ ಎನ್ನುವುದು ಮೇಘಾ ಶೆಟ್ಟಿ ಅಭಿಪ್ರಾಯ.
ಇನ್ನು “ಜೊತೆ ಜೊತೆಯಲಿ…’ ಧಾರಾವಾಹಿ ನಂತರ ಮುಂದೇನು? ಎಂಬ ಪ್ರಶ್ನೆಗೆ ಮೇಘಾ ಶೆಟ್ಟಿ ಉತ್ತರ ಹೀಗಿದೆ. “ಸದ್ಯಕ್ಕೆ ಮುಂದೆ ಯಾವುದೇ ಸೀರಿಯಲ್ನಲ್ಲಿ ನಟಿಸದಿರಲು ನಿರ್ಧರಿಸಿದ್ದೇನೆ. ಸುಮಾರು ನಾಲ್ಕು ವರ್ಷಗಳ ಸೀರಿಯಲ್ ಸಾಕಷ್ಟು ಅನುಭವ ಕೊಟ್ಟಿದೆ. ಅದೇ ಅನುಭವವನ್ನು ಇಟ್ಟುಕೊಂಡು, ಮುಂದೆ ಸಿನಿಮಾಗಳತ್ತ ಮಾತ್ರ ಗಮನ ಹರಿಸುವ ಯೋಚನೆ ಮಾಡಿದ್ದೇನೆ’ ಎನ್ನುತ್ತಾರೆ. ಈಗಾಗಲೇ ಸಿನಿಮಾಕ್ಕೆ ಒಂದಷ್ಟು ತಯಾರಿಗಳನ್ನೂ ಮಾಡಿಕೊಳ್ಳುತ್ತಿರುವ ಮೇಘಾ ಶೆಟ್ಟಿ, “ಈಗ ಸಿನಿಮಾ ಮಾಡಬಹುದಾದ ಒಂದಷ್ಟು ಒಳ್ಳೆಯ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ ಇನ್ನೂ ಯಾವುದನ್ನೂ ಫೈನಲ್ ಮಾಡಿಲ್ಲ. ಸದ್ಯಕ್ಕೆ ನಾನು ಈಗಾಗಲೇ ಅಭಿನಯಿಸಿರುವ “ಕೈವ’ ಮತ್ತು “ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿಯೇ ಈ ಎರಡೂ ಸಿನಿಮಾಗಳು ಬಿಡುಗಡೆಯಾಗಲಿವೆ. ಇದರ ನಡುವೆ ಸಿನಿಮಾಗಳಿಂದಲೂ ಒಂದಷ್ಟು ಆಫರ್ ಬರುತ್ತಿದ್ದು, ಅವುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇನೆ’ ಎನ್ನುತ್ತಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.