Yuva Trailer: ಕೆಣಕಿದರೆ ಕೆಂಡ.. ಪಕ್ಕಾ ಲೋಕಲ್ ಆಗಿ ಆ್ಯಕ್ಷನ್ ಅವತಾರ ತಾಳಿದ ʼಯುವʼ
Team Udayavani, Mar 21, 2024, 2:39 PM IST
ಬೆಂಗಳೂರು: ರಾಜ್ ಕುಮಾರ್ ಕುಡಿ, ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಮಗ ಯುವರಾಜ್ ಅವರ ಚೊಚ್ಚಲ ಸಿನಿಮಾ ʼಯುವʼ ಚಿತ್ರದ ಟ್ರೈಲರ್ ಗುರುವಾರ(ಮಾ.21 ರಂದು) ರಿಲೀಸ್ ಆಗಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನ್ನಿಸಿಕೊಂಡಿರುವ ಸಂತೋಷ್ ಆನಂದರಾಮ್ ರಾಜ್ ಕುಮಾರ್ ಯುವರಾಜ್ ಕುಮಾರ್ ಅವರೊಂದಿಗೆ ಇದೇ ಮೊದಲ ಬಾರಿ ಸಿನಿಮ ಮಾಡುತ್ತಿದ್ದಾರೆ. ಆ ಮೂಲಕ ʼಯುವʼ ಅಪ್ಪು ಅಭಿಮಾನಿಗಳಿಗೂ ಸ್ಪೆಷೆಲ್ ಸಿನಿಮಾವೆಂದು ಹೇಳಿದರೆ ತಪ್ಪಾಗದು.
ಮಿಡಲ್ ಹುಡುಗನೊಬ್ಬ ಇಂಜಿನಿಯರ್ ಕಲಿಯುವ ಕನಸು ಕಾಣುತ್ತಾನೆ. ಕಾಲೇಜಿನಲ್ಲಿ ಒಂದು ಗಲಾಟೆ, ಆ ಗಲಾಟೆ ಗ್ಯಾಂಗ್ ವಾರ್ ಆಗಿ ಬದಲಾಗುತ್ತದೆ. ಲೋಕಲ್ ಡಾನ್ ನೊಬ್ಬನನ್ನು ಎದುರು ಹಾಕಿಕೊಳ್ಳುವ ಮಟ್ಟಿಗೆ ವಾರ್ ಮುಂದುವರೆಯುತ್ತದೆ. ನಿಯತ್ತೇ ಬದುಕೆಂದು ಬದುಕುತ್ತಿರುವ ಕುಟುಂಬಕ್ಕೆ ಮಗನ ಈ ವರ್ತನೆಯಿಂದ ಮುಜುಗರ ಉಂಟಾಗುತ್ತದೆ.
ಮೊದಲ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಯುವರಾಜ್ ಕುಮಾರ್, ನಟನೆ ಎಲ್ಲರ ಗಮನ ಸೆಳೆಯುತ್ತದೆ. ಮಸ್ತ್ ಆ್ಯಕ್ಷನ್, ಖಡಕ್ ಡೈಲಾಗ್ಸ್ ಗಳಿಂದ ʼಯುವʼ ಗಮನ ಸೆಳೆಯುತ್ತದೆ.
ಮಿಡಲ್ ಕ್ಲಾಸ್ ಕುಟುಂಬದ ಜವಬ್ದಾರಿ ಹೊತ್ತ ತಂದೆ, ಕಲಿತ ವಿದ್ಯೆಗೆ ಸಿಗದ ಸಮರ್ಪಕ ಕೆಲಸ, ದುಡಿಮೆ ಎಂದರೆ ಎಷ್ಟು ಕಷ್ಟವೆಂದು ಹೇಳುವ ಅಂಶಗಳನ್ನು ಟ್ರೈಲರ್ ನಲ್ಲಿ ಹೇಳಲಾಗಿದ್ದು, ಸೆಂಟಿಮೆಂಟ್ ವಿಚಾರವನ್ನು ಹೇಳಿದ್ದಾರೆ ನಿರ್ದೇಶಕರು.
ನಾಯಕಿಯಾಗಿ ಸಪ್ತಮಿ ಗೌಡ ಅವರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ತುಳು ಭಾಷೆಯೂ ಟ್ರೈಲರ್ ನಲ್ಲಿ ಕೇಳಿಸುತ್ತದೆ.
ಒಟ್ಟಿನಲ್ಲಿ ಮೊದಲ ಸಿನಿಮಾದಲ್ಲೇ ಭರವಸೆಯ ನಟನಾಗುವ ಎಲ್ಲಾ ಲಕ್ಷಣಗಳು ಟ್ರೈಲರ್ ನಲ್ಲಿ ಗೋಚರಿಸುತ್ತದೆ.
ಯುವರಾಜ್ ಕುಮಾರ್ , ಸಪ್ತಮಿ ಗೌಡ ಜೊತೆ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ಮಾ.29 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.