ಮಹಾಭಾರತದಲ್ಲಿ ಶ್ರೀ ಕೃಷ್ಣನ ಪಾತ್ರವನ್ನೇ ನಿರಾಕರಿಸಿದ್ದರು ನಿತೀಶ್ ಭಾರಧ್ವಜ್ ; ಕಾರಣ?

ವಿದುರ ಅಥವಾ ಅಭಿಮನ್ಯು ಪಾತ್ರ ಬೇಕೆಂದು ಪಟ್ಟು ಹಿಡಿದಿದ್ದರಂತೆ ನಿತೀಶ್!

Team Udayavani, Apr 16, 2020, 6:43 PM IST

ಮಹಾಭಾರತದಲ್ಲಿ ಶ್ರೀ ಕೃಷ್ಣನ ಪಾತ್ರವನ್ನೇ ನಿರಾಕರಿಸಿದ್ದರು ನಿತೀಶ್ ಭಾರಧ್ವಜ್ ; ಕಾರಣ?

ಮುಂಬಯಿ: ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಜನರೆಲ್ಲಾ ಮನೆಯಲ್ಲೇ ಇರುವಂತ ಅನಿವಾರ್ಯ ಪರಿಸ್ಥಿತಿಯನ್ನು ಕೋವಿಡ್ 19 ವೈರಸ್ ನಿರ್ಮಾಣ ಮಾಡಿದೆ. ಮನೆಯಲ್ಲೇ ಕುಳಿತಿರುವ ಜನರನ್ನು ಮನರಂಜಿಸಲು ದೂರದರ್ಶನ ತನ್ನ ಸುವರ್ಣ ಯುಗವನ್ನು ಮತ್ತೆ ಪ್ರಾರಂಭಿಸಿದೆ. 80-90ರ ದಶಕದಲ್ಲಿ ದೇಶದೆಲ್ಲೆಡೆ ಮನೆಮಾತಾಗಿದ್ದ ಕ್ಲಾಸಿಕ್ ಧಾರಾವಾಹಿಗಳನ್ನು ಡಿಡಿ ಇದೀಗ ಮರು ಪ್ರಸಾರ ಮಾಡುತ್ತಿದೆ.

ಇದರಲ್ಲಿ ಬಿ.ಆರ್. ಛೋಪ್ರಾ ನಿರ್ಮಾಣದಲ್ಲಿ, ಬಿ.ಆರ್. ಛೋಪ್ರಾ ಹಾಗೂ ರವಿ ಛೋಪ್ರಾ ನಿರ್ದೇಶನದಲ್ಲಿ ಮೂಡಿಬಂದ ಭಾರತದ ಅತ್ಯದ್ಭುತ ಮಹಾಕಾವ್ಯ ‘ಮಹಾಭಾರತ’ವೂ ಒಂದು. ಇದರಲ್ಲಿ ಬರುವ ಒಂದೊಂದು ಪಾತ್ರಗಳೂ ಬಹಳಷ್ಟು ತೂಕದ್ದೇ ಆಗಿವೆ.

ಹೀಗೆ ಮಹಾಭಾರತದಲ್ಲಿ ಬಹಳ ತೂಕವಿರುವ ಪಾತ್ರಗಳಲ್ಲಿ ಶ್ರೀ ಕೃಷ್ಣನ ಪಾತ್ರವೂ ಒಂದಾಗಿದೆ. ಒಂದು ಹಂತದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲು ಪ್ರಮುಖ ಕಾರಣೀಕರ್ತನಾಗಿ ಧರ್ಮಸಂಸ್ಥಾಪನೆಯ ಜವಾಬ್ದಾರಿಯನ್ನು ಹೊತ್ತ ದೇವಮಾನವನಾಗಿ ಶ್ರೀಕೃಷ್ಣನ ಪಾತ್ರ ಮಹಾಭಾರತದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಈ ಪೌರಾಣಿಕ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದು ನಟ ನಿತೀಶ್ ಭಾರಧ್ವಜ್. ಅವರ ಆ ಹಸನ್ಮುಖಿ ಮುಖಭಾವ ಮತ್ತು ತುಂಟನಗುವಿನಿಂದ ಕೂಡಿದ ನಟನೆ ಅವರನ್ನು ಈ ಧಾರಾವಾಹಿ ಮುಗಿಯುವದರೊಳಗೆ ಸ್ಟಾರ್ ಪಟ್ಟಕ್ಕೇರಿಸಿತ್ತು.

ಆದರೆ ಮಹಾಭಾರತ ಧಾರಾವಾಹಿಗೆ ನಟರ ಆಯ್ಕೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿತೀಶ್ ಅವರನ್ನು ನಿರ್ದೇಶಕ ರವಿ ಛೋಪ್ರಾ ಅವರು ಕೃಷ್ಣನ ಪಾತ್ರಕ್ಕೇ ಆಯ್ಕೆ ಮಾಡಿದ್ದರಂತೆ. ಅದಕ್ಕೆ ಮುಖ್ಯ ಕಾರಣ ನಿತೀಶ್ ಅವರ ಆಕರ್ಷಕ ನಗು. ಒಟ್ಟು 55 ಜನರನ್ನು ಸ್ಕ್ರೀನ್ ಟೆಸ್ಟ್ ನಡೆಸಿದ ಬಳಿಕ ನಿತೀಶ್ ಗೆ ಕೃಷ್ಣನ ಪಾತ್ರ ಒಲಿದು ಬಂದಿತ್ತು.

ಆದರೆ ಈ ಧಾರಾವಾಹಿಯಲ್ಲಿ ನಿತೀಶ್ ಮಾಡಲು ಬಯಸಿದ್ದು ವಿದುರನ ಪಾತ್ರವನ್ನಂತೆ. ಆದರೆ ನಿತೀಶ್ ಅವರ ಗೆಳೆಯರೂ ಆಗಿದ್ದ ಬಿ ಆರ್ ಛೋಪ್ರಾ ಅವರು ಈ ಪಾತ್ರ ನಿತೀಶ್ ಗೆ ಹೊಂದುವುದಿಲ್ಲ ಎಂದು ಹೇಳಿದ ಬಳಿಕ ನಿತೀಶ್ ಅಭಿಮನ್ಯು ಪಾತ್ರಕ್ಕೆ ಬೇಡಿಕೆ ಇಟ್ಟಿದ್ದರಂತೆ.

ಆದರೆ ಕೊನೆಗೂ ರವಿ ಛೋಪ್ರಾ ಅವರ ಒತ್ತಾಯದ ಮೇರೆಗೆ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೊಟ್ಟ ನಿತೀಶ್ ಗೆ ಈ ಪಾತ್ರವೇ ಸೆಟ್ ಆಗಿ ಅದರಲ್ಲಿ ಜನಪ್ರಿಯತೆ ಗಳಿಸಿದ್ದು ಮಾತ್ರ ಇದೀಗ ಇತಿಹಾಸ.

ಅಂದಹಾಗೆ ಶ್ರೀ ಕೃಷ್ಣನ ರೀತಿಯ ಬಹುತೂಕದ ಪಾತ್ರವನ್ನು ನಿಭಾಯಿಸಲು ಅನುಭವಿ ನಟನೇ ಆಗಬೇಕೆಂಬ ಕಾರಣಕ್ಕೆ ನಿತೀಶ್ ಅವರು ಈ ಪಾತ್ರವನ್ನು ಪ್ರಾರಂಭದಲ್ಲಿ ನಿರಾಕರಿಸಿದ್ದರು ಎಂಬುದನ್ನು ನಿತೀಶ್ ಇದೀಗ ನೆನಪಿಸಿಕೊಳ್ಳುತ್ತಾರೆ.

ಮಹಾಭಾರತ ಧಾರಾವಾಹಿ ನಿರ್ಮಾಣದ ಸಂದರ್ಭದಲ್ಲಿ ನಿತೀಶ್ ಅವರಿಗೆ 23 ವರ್ಷ ಪ್ರಾಯ. ಹಾಗಾಗಿ ಒಂದು ವೇಳೆ ಅವರು ವಿದುರನ ಪಾತ್ರ ನಿಭಾಯಿಸಿದರೆ ಆ ಪಾತ್ರ ಕೆಲವು ಕಂತುಗಳ ಬಳಿಕ ವೃದ್ಧನಾಗುವುದರಿಂದ ನಿತೀಶ್ ಅವರಿಗೆ ನಂತರ ಕೆಲಸ ಇಲ್ಲದಂತಾಗುತ್ತದೆ ಎಂದು ಯೋಚಿಸಿ ಅವರಿಗೆ ನಕುಲನ ಪಾತ್ರಕ್ಕೆ ಆಹ್ವಾನ ನೀಡಲಾಗಿತ್ತಂತೆ.

ಆದರೆ ನಿತೀಶ್ ಅದನ್ನು ನಿರಾಕರಿಸಿ, ಹಾಗಿದ್ದಲ್ಲಿ ತನಗೆ ಅಭಿಮನ್ಯುವಿನ ಪಾತ್ರವನ್ನು ಕೊಡುವಂತೆ ಕೇಳಿಕೊಂಡಿದ್ದರುಆದರೆ ಆ ಬಳಿಕ ಅವರಿಗೆ ಶ್ರೀ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡುವಂತೆ ಸೂಚಿಸಲಾಯಿತು ಎಂಬುದನ್ನು ನಿತೀಶ್ ಅವರು ಈ ಸಂದರ್ಭದಲ್ಲಿ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.