![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-415x222.jpg)
Tamannaah Bhatia: ಓಡೋಡಿ ಬಂದು ನಟಿ ತಮನ್ನಾರನ್ನು ಮುಟ್ಟಿದ ಅಭಿಮಾನಿ; ಮುಂದೆ ಆದದ್ದು..
Team Udayavani, Aug 9, 2023, 1:40 PM IST
![Tamannaah Bhatia: ಓಡೋಡಿ ಬಂದು ನಟಿ ತಮನ್ನಾರನ್ನು ಮುಟ್ಟಿದ ಅಭಿಮಾನಿ ಮುಂದೆ ಆದದ್ದು..](https://www.udayavani.com/wp-content/uploads/2023/08/tdy-13-6-620x372.jpg)
ಮುಂಬಯಿ: ಮಿಲ್ಕಿ ಬ್ಯೂಟಿ ತಮನ್ನಾ ಅವರಿಗೆ ಸೌತ್ ನಲ್ಲಿ ಮಾತ್ರವಲ್ಲದೆ, ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿಗಳ ವರ್ಗವಿದೆ. ಇತ್ತೀಚೆಗೆ ತಮನ್ನಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ತಮನ್ನಾ ʼ ಲಸ್ಟ್ ಸ್ಟೋರೀಸ್ 2ʼ ನಲ್ಲಿನ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಇತ್ತೀಚೆಗೆ ರಿಲೀಸ್ ಆಗಿರುವ ʼಜೈಲರ್-2ʼ ಚಿತ್ರದ ʼ ಕಾವಾಲಯ್ಯʼ ಹಾಡಿನಲ್ಲಿ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿರುವುದು ಪಡ್ಡೆ ಹುಡುಗರ ಗಮನ ಸೆಳೆದಿದೆ.
ಸಿನಿಮಾ ತಾರೆರೊಂದಿಗೆ ಅಲ್ಲಲ್ಲಿ ಅಭಿಮಾನಿಗಳು ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಕೆಲ ಕಲಾವಿದರು ಇದಕ್ಕೆ ಕೂಲ್ ಆಗಿಯೇ ಪೋಸ್ಟ್ ಕೊಟ್ಟು, ಅಭಿಮಾನಿಗಳನ್ನು ಖುಷಿಯಾಗಿಸುತ್ತಾರೆ. ಆದರೆ ಕೆಲವರು ಮಾತ್ರ ಉಡಾಫೆಯಾಗಿ ಮಾತನಾಡುವುದು ಅಥವಾ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಇರುವುದನ್ನು ನೋಡಿದ್ದೇವೆ.
ಇತ್ತೀಚೆಗೆ ನಟಿ ತಮನ್ನಾ ಅವರ ಅಭಿಮಾನಿಯೊಬ್ಬ ಓವರ್ ಎಕ್ಸೈಟ್ ಆಗಿ ವರ್ತಿಸಿದ ರೀತಿಯನ್ನು ನೋಡಿ ತಮನ್ನಾ ಆ ಸ್ಥಿತಿಯನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ತನ್ನ ಮೆಚ್ಚಿನ ನಟ- ನಟಿಯರನ್ನು ಮುಖತಃ ನೋಡಿ ಅವರೊಂದಿಗೆ ಫೋಟೋ ಕ್ಲಿಕ್ಕಿಸುವಾಗ ಕೆಲವೊಮ್ಮೆ ಅತೀ ಆನಂದಗೊಳ್ಳುತ್ತಾರೆ. ಇದು ಕೆಲವೊಮ್ಮೆ ಕಲಾವಿದರನ್ನು ಪೇಚಿಗೆ ಸಿಲುಕಿಸುತ್ತದೆ. ಇಂಥದ್ದೇ ಸನ್ನಿವೇಶ ತಮನ್ನಾ ಅವರೊಂದಿಗೆ ಇತ್ತೀಚೆಗೆ ನಡೆದಿದೆ.
ನಟಿ ತಮನ್ನಾ ಗ್ರೀನ್ ಸೀರೆಯಲ್ಲಿ ಬಂದು, ನೆರೆದಿದದ್ದ ಅಭಿಮಾನಿಗಳತ್ತ ಕೈ ಮಾಡಿದ್ದಾರೆ. ಇದೇ ವೇಳೆ ಒಬ್ಬ ಅಭಿಮಾನಿ ಹಾಕಿದ ಬ್ಯಾರಿಕೇಡ್ ನ್ನು ದೂಡಿಕೊಂಡು ಓಡಿ ಬಂದು ನೇರವಾಗಿ ತಮನ್ನಾ ಅವರ ಕೈಯನ್ನೇ ಹಿಡಿದಿದ್ದಾನೆ. ತಮನ್ನಾ ಅವರು ಅಭಿಮಾನಿಯ ಓವರ್ ಎಕ್ಸೈಟ್ ಮೆಂಟ್ ನ್ನು ನೋಡಿ ವಿಚಲಿತರಾಗದೆ ಕೂಲ್ ಆಗಿಯೇ ಆತನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಸೆಕ್ಯೂರಿಟಿಗಳನ್ನು ಅಭಿಮಾನಿಯನ್ನು ಬದಿ ತಂದಿದ್ದಾರೆ.
ಕೊನೆಗೆ ತಮನ್ನಾ ಅವರು ಆ ಅಭಿಮಾನಿಯೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ಆತನನ್ನು ಖುಷಿಯಾಗಿಸಿದ್ದಾರೆ. ತಮನ್ನಾ ಅವರ ಈ ವರ್ತನೆಗೆ ನೆಟ್ಟಿಗರು ಶ್ಲಾಫಿಸಿದ್ದಾರೆ.
ಅಭಿಮಾನಿಗಳನ್ನು ನೋಡಿ ಕೆಲ ಬಿಟೌನ್ ಸ್ಟಾರ್ ಗಳು ಪೇಚಿಗೆ ಸಿಲುಕಿದ್ದುಂಟು. ಮಲೈಕಾ ಆರೋರಾ ಅವರು ಮುಂಬಯಿ ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬರಿಂದ ಪೇಚಿಗೆ ಸಿಲುಕಿದ್ದರು. ಇನ್ನು ನಟ ಆದಿತ್ಯ ರಾಯ್ ಕಪೂರ್ ಅವರಿಗೆ ಯುವತಿಯೊಬ್ಬಳು ಮುತ್ತು ನೀಡಲು ಬಂದಿದ್ದಾಗ, ಅವರು ಪೇಚಿಗೆ ಸಿಲುಕಿದ್ದ ಸನ್ನಿವೇಶ ನಡೆದಿತ್ತು.
ಟಾಪ್ ನ್ಯೂಸ್
![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-415x222.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![samanta](https://www.udayavani.com/wp-content/uploads/2024/07/samanta-150x95.jpg)
Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು
![Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್](https://www.udayavani.com/wp-content/uploads/2024/07/14-1-150x90.jpg)
Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್
![ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು](https://www.udayavani.com/wp-content/uploads/2024/07/12-2-150x90.jpg)
ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-150x90.jpg)
Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…
MUST WATCH
ಹೊಸ ಸೇರ್ಪಡೆ
![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-150x80.jpg)
Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…
![Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್ ಕೊಟ್ಟ ಜಿಂಬಾಬ್ಬೆ](https://www.udayavani.com/wp-content/uploads/2024/07/5-4-150x90.jpg)
Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್ ಕೊಟ್ಟ ಜಿಂಬಾಬ್ಬೆ
![Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ](https://www.udayavani.com/wp-content/uploads/2024/07/pune-1-150x84.jpg)
Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ
![Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/SURATH-150x84.jpg)
Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ
![Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ](https://www.udayavani.com/wp-content/uploads/2024/07/4-4-150x90.jpg)
Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.