4 ವರ್ಷದ ಬಳಿಕ ರಿಲೀಸ್ ಆಗಲಿದೆ ಅಜಯ್ ದೇವಗನ್ ಅವರ ‘Maidaan’: ವಿಳಂಬಕ್ಕೆ ಕಾರಣವೇನು?
Team Udayavani, Jan 21, 2024, 6:16 PM IST
ಮುಂಬಯಿ: ಅಜಯ್ ದೇವಗನ್ ಸಿನಿ ಕೆರಿಯರ್ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಮೈದಾನ್ʼ ಕೊನೆಗೂ ರಿಲೀಸ್ ಆಗುವ ಹಂತಕ್ಕೆ ಬಂದಿದ್ದು, ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಅಜಯ್ ದೇವಗನ್ ಅಭಿನಯದ ‘ಮೈದಾನ್’ ಸಿನಿಮಾ ನಾಲ್ಕು ವರ್ಷಗಳಿಂದ ರಿಲೀಸ್ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರ ರಿಲೀಸ್ ಡೇಟ್ ಮುಂದೂಡಿಕೆಯಾಗಿತ್ತು.
ಇದಾದ ಬಳಿಕ 2022 ರಲ್ಲಿ ಅಜಯ್ ದೇವಗನ್ ʼಮೈದಾನ್ʼ ಸಿನಿಮಾ 2023 ರ ಫೆಬ್ರವರಿ 17 ರಂದು ರಿಲೀಸ್ ಆಗಲಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿತ್ತು.
ʼಮೈದಾನ್ʼ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆದ ವೇಳೆ ಮತ್ತೊಂದು ಸಿನಿಮಾ ಕೂಡ ರಿಲೀಸ್ ಆಗುವುದಿತ್ತು. ಪ್ರತಿ ಬಾರಿಯೂ ಬಾಕ್ಸ್ ಆಫೀಸ್ ದಂಗಲ್ ತಪ್ಪಿಸಲು ಹೋಗಿ ಸಿನಿಮಾ ರಿಲೀಸ್ ಆಗಲು ಇಷ್ಟು ತಡವಾಗುತ್ತಿತ್ತು ಎನ್ನುವುದು ಸಿನಿವಲಯದಲ್ಲಿ ಕೇಳಿ ಬಂದ ಮಾತು.
ಇದೀಗ ʼಮೈದಾನ್ʼ ಸಿನಿಮಾದ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ವರ್ಷದ ಏಪ್ರಿಲ್ ನಲ್ಲಿ ಬರುವ ಈದ್ ಹಬ್ಬದ ಸಂದರ್ಭದಲ್ಲಿ ʼಮೈದಾನ್ʼ ರಿಲೀಸ್ ಆಗಲಿದೆ ಎಂದು ಫಿಲ್ಮ್ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ʼಮೈದಾನ್ʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಮಿತ್ ಶರ್ಮಾ ನಿರ್ದೇಶನದ ʼಮೈದಾನ್ʼ ಭಾರತದ ಫುಟ್ ಬಾಲ್ ದಿಗ್ಗಜ ಸೈಯದ್ ಅಬ್ದುಲ್ ರಹೀಮ್ ಅವರ ಕಥೆ ಹಾಗೂ 1952 ರಿಂದ 1962 ಭಾರತದ ಫುಟ್ ಬಾಲ್ ತಂಡ ಸಾಗಿ ಬಂದ ಸಾಧನೆಯ ಹಾದಿಯ ಕಥೆಯನ್ನು ಒಳಗೊಂಡಿದೆ.
ಈ ಬಾರಿಯೂ ʼಮೈದಾನ್ʼ ಸಿನಿಮಾದೊಂದಿಗೆ ಬಹು ನಿರೀಕ್ಷಿತ ಸಿನಿಮಾವಾಗಿರುವ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅವರ ‘ಬಡೆ ಮಿಯಾನ್ ಛೋಟೆ ಮಿಯಾನ್ʼ ಸಿನಿಮಾದೊಂದಿಗೆ ತೆರೆ ಕಾಣಲಿದೆ.
AJAY DEVGN: ‘MAIDAAN’ TO ARRIVE THIS EID… #Maidaan – starring #AjayDevgn – gets a new release date: April 2024 #Eid… Directed by Amit Sharma.#BoneyKapoor #ZeeStudios pic.twitter.com/0ijkWfUzsF
— taran adarsh (@taran_adarsh) January 21, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.