Bollywood: ʼಭೂತ್ ಬಂಗ್ಲʼಕ್ಕಾಗಿ 14 ವರ್ಷದ ಬಳಿಕ ಸೂಪರ್ ನಿರ್ದೇಶಕನ ಜತೆ ಅಕ್ಷಯ್ ಸಿನಿಮಾ
Team Udayavani, Sep 9, 2024, 12:37 PM IST
ಮುಂಬಯಿ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್(Akshay Kumar) ಅವರಿಗಿಂದು 57ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮ ಡಬಲ್ ಆಗುವಂತೆ ಅಕ್ಷಯ್ ತನ್ನ ಮುಂದಿನ ಹೊಸ ಸಿನಿಮಾದ ಕುರಿತು ಅಪ್ಡೇಟ್ ನೀಡಿದ್ದು ಫ್ಯಾನ್ಸ್ ಖುಷ್ ಆಗಿದ್ದಾರೆ.
ಒಂದು ಕಾಲದಲ್ಲಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್ ಇತ್ತೀಚೆಗಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದಾರೆ. ಮೊನ್ನೆ ಮೊನ್ನೆ ಬಂದ ಸರ್ಫಿರಾ (Sarfira), ಖೇಲ್ ಖೇಲ್ ಮೇ (Khel Khel Mein) ಕೂಡ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.
ಸತತ ಸೋಲು ಕಾಣುತ್ತಿದ್ದರೂ ಅಕ್ಷಯ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಅವರ ಹುಟ್ಟುಹಬ್ಬದಂದು(ಸೆ.9ರಂದು) ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದು, ಟೈಟಲ್ ಪೋಸ್ಟರನ್ನು ರಿಲೀಸ್ ಮಾಡಲಾಗಿದೆ.
ವಿಶೇಷವೆಂದರೆ ಅಕ್ಷಯ್ ಕುಮಾರ್ ಅವರೊಂದಿಗೆ ಈ ಹಿಂದೆ ʼಹೇರಾ ಫೇರಿʼ, ʼಗರಂ ಮಸಾಲಾ, ʼಭಾಗಂ ಭಾಗ್ʼ, ʼಭೂಲ್ ಭುಲೈಯಾʼ, ʼದೇ ದಾನ ದಾನ್ʼ ನಂತಹ ಸೂಪರ್ ಹಿಟ್ ಕಾಮಿಡಿ ಸಿನಿಮಾಗಳನ್ನು ನೀಡಿದ್ದ ಪ್ರಿಯದರ್ಶನ್ (Priyadarshan) ಅವರೊಂದಿಗೆ ಅಕ್ಷಯ್ 14 ವರ್ಷಗಳ ಬಳಿಕ ಕೈಜೋಡಿಸಲಿದ್ದು, ಚಿತ್ರಕ್ಕೆ ʼಭೂತ್ ಬಂಗ್ಲʼ (Bhooth Bangla) ಎಂದು ಟೈಟಲ್ ಇಡಲಾಗಿದೆ.
View this post on Instagram
ದೊಡ್ಡ ಬಂಗಲೆಯೊಂದರ ಮುಂದೆ ನಿಂತಿರುವ ಅಕ್ಷಯ್ ಅವರ ಬೆನ್ನ ಮೇಲೆ ಕಪ್ಪು ಬೆಕ್ಕು ನಿಂತಿದೆ. ಸ್ಟೀಲ್ ಕಪ್ ವೊಂದರಲ್ಲಿ ಹಾಲನ್ನು ಕುಡಿಯುತ್ತಿರುವ ಲುಕ್ ನಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಇದೊಂದು ಹಾರಾರ್ ಕಾಮಿಡಿ ಅಕ್ಷಯ್ ಮೂವರು ನಟಿಯರೊಂದಿಗೆ ಜಾದೂಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಆಧರಿತ ಸಿನಿಮಾ 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.