Bollywood:‌ ಮತ್ತೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಶಾರುಖ್‌,ಅಜಯ್,ಅಕ್ಷಯ್; ಗರಂ ಆದ ಫ್ಯಾನ್ಸ್

ಪ್ಯಾನ್‌ ಇಂಡಿಯವಲ್ಲ, ಇವರು ಪಾನ್ ಇಂಡಿಯಾ ಸ್ಟಾರ್ ಎಂದ ಫ್ಯಾನ್ಸ್

Team Udayavani, Oct 9, 2023, 1:45 PM IST

Bollywood:‌ ಮತ್ತೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಶಾರುಖ್‌,ಅಜಯ್,ಅಕ್ಷಯ್; ಗರಂ ಆದ ಫ್ಯಾನ್ಸ್

ಮುಂಬಯಿ: ಕಲಾವಿದರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸದಲ್ಲ. ಆದರೆ ಕೆಲವೊಮ್ಮೆ ಈ ಜಾಹೀರಾತಿನಿಂದಲೇ ಕಲಾವಿದರಿಗೆ ವಿರೋಧ ವ್ಯಕ್ತವಾಗುದುಂಟು.ಇದೀಗ ಮತ್ತೆ ಖ್ಯಾತ ಬಾಲಿವುಡ್‌ ಸ್ಟಾರ್‌ ಗಳು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಫ್ಯಾನ್ಸ್‌ ಗಳ ಕೆಂಗಣ್ಣಿಗೆ ಕಾರಣವಾಗಿದೆ.

ಅಕ್ಷಯ್ ಕುಮಾರ್ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಪಾನ್ ಮಸಾಲ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಭಾನುವಾರ (ಅಕ್ಟೋಬರ್‌ 8 ರಂದು) ಅಭಿಮಾನಿಯೊಬ್ಬರು ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪಾನ್ ಮಸಾಲದ ಹೊಸ ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?:

ಶಾರುಖ್‌, ಅಜಯ್‌ ಕಾರಿನಲ್ಲಿ ಕೂತಿದ್ದಾರೆ. ಅಕ್ಷಯ್‌ ಕುಮಾರ್ ಹಾಡು ಕೇಳುತ್ತಾ ಮನೆಯಲ್ಲಿ ಕೂತಿದ್ದಾರೆ. ಕಾರಿನ ಹಾರ್ನ್‌ ಹೊಡೆದರೂ ಅಕ್ಷಯ್‌ ಹೊರ ಬರದೇ ಇದ್ದಾಗ, ಶಾರುಖ್‌ ಬಾಲ್‌ ವೊಂದನ್ನು ಅಕ್ಷಯ್‌ ನಿವಾಸದ ಕಿಟಕಿಗೆ ಎಸೆಯುತ್ತಾರೆ. ಆದರೆ ಈ ಚೆಂಡು ಅಕ್ಷಯ್‌ ನಿವಾಸದ ಬದಲು ಬೇರೆಯವರ ಮನೆಗೆ( ನಟಿ-ರೂಪದರ್ಶಿ ಸೌಂದರ್ಯ ಶರ್ಮಾ) ಅವರ ಮನೆಗೆ ಹೋಗಿ ಬೀಳುತ್ತದೆ. ಆಗ ಅಜಯ್‌ ಪಾನ್ ಮಸಾಲ ತೆಗೆದು ಸೇವಿಸುತ್ತಾರೆ. ಈ ವೇಳೆ ಅದರ ಪರಿಮಳ ಸೆಳೆದು ಅಕ್ಷಯ್‌ ಬರುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Bigg Boss: ಮಾನಸಿಕ ಒತ್ತಡ, ಅನಾರೋಗ್ಯದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಸ್ಪರ್ಧಿ

ಅಭಿಮಾನಿಗಳ ಆಕ್ರೋಶ:  ಸದ್ಯ ಈ ಪಾನ್‌ ಮಸಾಲ ಜಾಹೀರಾತಿಗೆ ಫ್ಯಾನ್ಸ್‌ ಗಳು ಕಿಡಿಕಾಡಿದ್ದಾರೆ. “ಇವರು ಪ್ಯಾನ್‌ ಇಂಡಿಯಾ ಸ್ಟಾರ್‌ ಗಳಲ್ಲ, ಪಾನ್‌ ಇಂಡಿಯಾ ಸ್ಟಾರ್‌ ಗಳು” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಹಣಕ್ಕಾಗಿ ಅಕ್ಷಯ್‌ ಏನಾದರೂ ಮಾಡುತ್ತಾರೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಹಣ ಮಾಡುವ ಚಟದಿಂದಲೇ ಅಕ್ಷಯ್‌ ಸಿನಿಮಾಗಳು ಸೋಲುತ್ತಿವೆ” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಮಾತು ಮುರಿದ ಅಕ್ಷಯ್..‌

ಅಕ್ಷಯ್ ಕುಮಾರ್ 2022 ರಲ್ಲಿ ಇನ್ಮುಂದೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲ ಎಂದು ಅಭಿಮಾನಿಗಳ ಬಳಿ ಹೇಳಿದ್ದರು. ಈ ಕಾರಣದಿಂದ ಅವರು ಪಾನ್‌ ಮಸಲಾ ಬ್ರ್ಯಾಂಡ್‌ ವೊಂದರ ಅಂಬಾಸಿಡರ್ ಸ್ಥಾನದಿಂದ ಕೆಳಗಿಳಿದಿದ್ದರು. ತಂಬಾಕು ಬ್ರ್ಯಾಂಡ್‌ ನಲ್ಲಿ ಕಾಣಿಸಿಕೊಂಡದ್ದಕ್ಕಾಗಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು. ಆದರೆ ಇದೀಗ ಅವರು ಮಾತು ಮುರಿದ್ದಕ್ಕಾಗಿ ಅಭಿಮಾನಿಗಳು ಗರಂ ಆಗಿದ್ದಾರೆ.

 

View this post on Instagram

 

A post shared by Shah Rukh Khan (@srkking555)

 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.