![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 23, 2024, 3:01 PM IST
ಮುಂಬಯಿ: ಸದಾ ಒಂದಲ್ಲ ಒಂದು ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ನಿರ್ದೇಶಕ ಅನುರಾಗ್ ಕಶ್ಯಪ್ ಈ ಬಾರಿ ತನ್ನನ್ನು ಭೇಟಿ ಆಗುವವರು ಹಣ ಕೊಟ್ಟು ಬರಬೇಕೆಂದು ಹೇಳಿರುವ ಪೋಸ್ಟ್ ವೊಂದು ಗಮನ ಸೆಳೆದಿದೆ.
‘ಗ್ಯಾಂಗ್ಸ್ ಆಫ್ ವಾಸೇಪುರ್’ ಮೂಲಕ ಬಿಟೌನ್ ನಲ್ಲಿ ಸದ್ದು ಮಾಡಿರುವ ಅನುರಾಗ್ ನವ ಪ್ರತಿಭೆಗಳನ್ನು ಹುಡುಕಿ, ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ. ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಹಲವಾರು ಪ್ರತಿಭೆಗಳನ್ನು ಬಿಟೌನ್ ಪರಿಚಯಿಸಿದ ಕೀರ್ತಿ ಅನುರಾಗ್ ಅವರದು.
ಇದೀಗ ಅವರು, ತಮ್ಮನ್ನು ಭೇಟಿ ಆಗಲು ಬರುವವರು ಹಣ ಕೊಟ್ಟು ಬನ್ನಿಯೆಂದು ಪೋಸ್ಟ್ ವೊಂದನ್ನು ಮಾಡಿದ್ದಾರೆ.
“ಹೊಸಬರಿಗೆ ಸಹಾಯ ಮಾಡಲು ಸಾಕಷ್ಟು ಸಮಯವನ್ನು ವ್ಯರ್ಥಮಾಡಿದೆ. ಈಗ ನಾನು ಸೃಜನಶೀಲ ಪ್ರತಿಭೆ ಎಂದು ತಮ್ಮನ್ನು ತಾವು ಭಾವಿಸುವ ಜನರನ್ನು ಭೇಟಿಯಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಹಾಗಾಗಿ ನಾನು ಈಗ ದರಗಳನ್ನು ನಿಗದಿ ಮಾಡಿದ್ದೇನೆ. ಯಾರಾದರೂ ನನ್ನನ್ನು 10-15 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದರೆ ನಾನು 1 ಲಕ್ಷ, ಅರ್ಧ ಗಂಟೆಗೆ 2 ಲಕ್ಷ ಮತ್ತು 1 ಗಂಟೆ 5 ಲಕ್ಷ ಶುಲ್ಕ ವಿಧಿಸುತ್ತೇನೆ. ಜನರನ್ನು ಭೇಟಿ ಮಾಡಲು ಸಮಯ ವ್ಯರ್ಥ ಮಾಡುವುದರಿಂದ ನನಗೆ ಬೇಸರವಾಗಿದೆ. ನೀವು ಅದನ್ನು ನಿಭಾಯಿಸಬಹುದು ಎಂದು ನೀವು ನಿಜವಾಗಿಯೂ ಭಾವಿಸಿದರೆ, ನನಗೆ ಕರೆ ಮಾಡಿ ಅಥವಾ ದೂರದಲ್ಲಿರಿ. ಎಲ್ಲವನ್ನೂ ಮುಂಚಿತವಾಗಿ ಪಾವತಿಸಿ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅನುರಾಗ್ ಕಶ್ಯಪ್ ಇತ್ತೀಚೆಗೆ ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದರು. ಶೀಘ್ರದಲ್ಲಿ ಅವರು ತಮಿಳು – ಹಿಂದಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಕ್ಕೆ ಜಿ.ವಿ.ಪ್ರಕಾಶ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.