ʼಕೇಸರಿ ವಿವಾದʼದ ಸುತ್ತ ಗಾಯಕ ಅರ್ಜಿತ್ ಸಿಂಗ್ ಕಾರ್ಯಕ್ರಮ: ಜೋರಾಯಿತು ರಾಜಕೀಯ ಜಟಾಪಟಿ
Team Udayavani, Dec 29, 2022, 5:07 PM IST
ಪಶ್ಚಿಮ ಬಂಗಾಳ: ʼಕೇಸರಿʼ ಬಣ್ಣದ ವಿಚಾರದಲ್ಲಿ ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ಕುರಿತು ಎದ್ದಿರುವ ವಿವಾದದ ನಡುವೆಯೇ ಗಾಯಕ ಅರ್ಜಿತ್ ಸಿಂಗ್ ಅವರ ಸುತ್ತವೂ ಕೇಸರಿ ಬಣ್ಣದ ವಿವಾದ ಹುಟ್ಟಿದೆ.
ಬಾಲಿವುಡ್ ನ ಖ್ಯಾತ ಗಾಯಕ ಅರ್ಜಿತ್ ಸಿಂಗ್ ಅವರ ಸಂಗೀತ ಕಾರ್ಯಕ್ರಮವೊಂದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದ್ದು ರಾಜಕೀಯ ವಲಯದಲ್ಲಿʼಕೇಸರಿ ವಿವಾದʼ ಹುಟ್ಟಿಸಿದೆ.
ಇತ್ತೀಚೆಗೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರ್ಜಿತ್ ಸಿಂಗ್ ʼದಿಲ್ ವಾಲೆʼ ಚಿತ್ರದ ‘ರಂಗ್ ದೇ ತು ಮೋಹೆ ಗೆರುವಾ’ ಹಾಡಿನ ಎರಡು ಸಾಲನ್ನು ಹಾಡಿದ್ದು. ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ , ಶಾರುಖ್ ಖಾನ್, ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು.
‘ರಂಗ್ ದೇ ತು ಮೋಹೆ ಗೆರುವಾ’ ಎಂದರೆ ʼನನ್ನ ಮೇಲೆ ಕೇಸರಿ ಬಣ್ಣ ಹಾಕಿʼ ಎಂದರ್ಥ ಬರುತ್ತದೆ. ಈ ಕಾರಣದಿಂದ ಇದು ಮಮತಾ ಅವರಿಗೆ ಸಿಟ್ಟು ಬರಿಸಿದೆ. ಇದೇ ನೆಪವನ್ನಿಟ್ಟುಕೊಂಡು ಸರ್ಕಾರ ಅರ್ಜಿತ್ ಸಿಂಗ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಈ ಬಗ್ಗೆ ಮಾತನಾಡಿ, ಗಾಯಕ ಅರ್ಜಿತ್ ಸಿಂಗ್ ಅವರ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಜಿ-20 ಕಾರ್ಯಕ್ರಮ ನಡೆಯಲಿದೆ. ಅರ್ಜಿತ್ ಸಿಂಗ್ ಅವರ ಸಂಗೀತಕ್ಕೆ ಹೆಚ್ಚು ಜನರು ಬರಲಿದ್ದು, ಇತ್ತ ಜಿ-20 ಹತ್ತಾರು ದೇಶದ ಪ್ರಮುಖರು ಭಾಗಿಯಾಗಲಿದ್ದು, ಇದರಿಂದಾಗಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕಷ್ಟವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ.
ಕೆಲವೊಂದು ವರದಿಯ ಪ್ರಕಾರ ಅರ್ಜಿತ್ ಸಿಂಗ್ ಕಾರ್ಯಕ್ರಮವನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ ಎಂದು ವರದಿ ಮಾಡಿವೆ. ಇದರೊಂದಿಗೆ ಸಲ್ಮಾನ್ ಖಾನ್ ಅವರ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿವೆ ಎಂದು ವರದಿ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Panaji: ಮಲ್ಪೆಯ 2 ಮೀನುಗಾರಿಕಾ ಬೋಟ್ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.