Shocking;ರೇ*ಪ್ ಹೇಗೆ ನಡೆಯುತ್ತದೆ ಎನ್ನುವ ಅನುಭವ ಕಂಗನಾಗಿದೆ: ಸಿಮ್ರಂಜಿತ್ ಸಿಂಗ್ ವಿವಾದ
Team Udayavani, Aug 29, 2024, 6:03 PM IST
ಅಮೃತಸರ: ರೈತರ ಕುರಿತು ಸಂಸದೆ ಕಂಗನಾ ರಣಾವತ್ ಹೇಳಿಕೆ ಖಂಡಿಸಿ ಪಂಜಾಬ್ ನಲ್ಲಿ ಆಪ್ ಸೇರಿ ವಿಪಕ್ಷಗಳು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಬಿಜೆಪಿ ಅವರನ್ನು ಪಕ್ಷ ದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿವೆ. ಪ್ರತಿಭಟನೆ ವೇಳೆ ಶಿರೋಮಣಿ ಅಕಾಲಿ ದಳದ ನಾಯಕ, ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ, ಪಂಜಾಬ್ನ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಕಂಗನಾಗೆ “ಅತ್ಯಾಚಾರದ ಸಾಕಷ್ಟು ಅನುಭವವಿದೆ” ಎಂದು ಹೇಳಿದ್ದಾರೆ.
ಸಿಮ್ರಂಜಿತ್ ಸಿಂಗ್ ಮಾನ್ “ಅತ್ಯಾಚಾರ ಹೇಗೆ ನಡೆಯುತ್ತದೆ ಎಂದು ನೀವು ಕಂಗನಾ ರಣಾವತ್ ಅವರನ್ನು ಕೇಳಬಹುದು, ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುದನ್ನು ಅವರು ವಿವರಿಸಬಹುದು. ಆಕೆಗೆ ಅತ್ಯಾಚಾರದ ಸಾಕಷ್ಟು ಅನುಭವವಿದೆ” ಎಂದು ಹೇಳಿದ್ದಾರೆ”ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
”ಭಾರತದ ನಾಯಕತ್ವ ಬಲವಾಗಿರದಿದ್ದರೆ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ರೈತರ ಆಂದೋಲನವು ಕಾರಣವಾಗಬಹುದು” ಎಂದು ಕಂಗನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹೇಳಿಕೆಯನ್ನು ಬಿಜೆಪಿ ವಿರೋಧಿಸಿ ಸಂಸದೆಗೆ ಎಚ್ಚರಿಕೆ ನೀಡಿತ್ತು.ಆ ಬಳಿಕವೂ ವಿಪಕ್ಷಗಳು ಕಂಗನಾ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ
Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ
Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ
Gyanvapi ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ : ಯೋಗಿ ಆದಿತ್ಯನಾಥ್
‘Nafrat Ki Dukaan..; ಅಮೆರಿಕ ಘಟನೆ ಕುರಿತು ರಾಹುಲ್ ವಿರುದ್ಧ ಮೋದಿ ಆಕ್ರೋಶ
MUST WATCH
ಹೊಸ ಸೇರ್ಪಡೆ
India vs Bangladesh: ನೆಟ್ಸ್ನಲ್ಲಿ ಭಾರತಕ್ಕೆ ಗುರ್ನೂರ್ ನೆರವು
Subramanya: ನಿಯಂತ್ರಣ ತಪ್ಪಿದ ಕಾರು ಪಲ್ಟಿ
Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್.ರಾಜಣ್ಣ
Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?
England vs Australia: ಲಿವಿಂಗ್ಸ್ಟೋನ್ ಅಬ್ಬರ; ಆಸೀಸ್, ಇಂಗ್ಲೆಂಡ್ ಟಿ20 ಸರಣಿ ಸಮಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.