![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 19, 2022, 1:01 PM IST
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ʼಲೈಗರ್ʼ ಎಷ್ಟು ಅಬ್ಬರದಿಂದ ರಿಲೀಸ್ ಆಗಿತ್ತೋ, ಅಷ್ಟೇ ವೇಗದಿಂದ ಥಿಯೇಟರ್ ನಿಂದ ದೂರ ಹೋಗಿದೆ. ನಿರೀಕ್ಷೆ ಹುಟ್ಟಿಸಿದ ಸಿನಿಮಾ ಎಷ್ಟೋ ಮಂದಿಗೆ ನಿರಾಸೆ ಮೂಡಿಸಿ, ಬಾಕ್ಸ್ ಆಫೀಸ್ ನಲ್ಲೂ ಸೋತಿದೆ.
ಆ.25 ರಂದು ರಿಲೀಸ್ ಆದ ಸಿನಿಮಾಕ್ಕೆ ಮೊದಲಿನಿಂದಲೂ ಹೈಪ್ ಇತ್ತು. ಭರ್ಜರಿ ಫೈಟ್ ಸೀನ್ ಗಳಿರುವ ಚಿತ್ರದಲ್ಲಿ ವಿಜಯ್ ಜಬರ್ ದಸ್ತ್ ಬಾಡಿ ಬಿಲ್ಡ್ ಮಾಡಿ ಚಿತ್ರಕ್ಕಾಗಿ ತಯಾರಿ ನಡೆಸಿದ್ದರು. ಆದರೆ ಚಿತ್ರ ರಿಲೀಸ್ ಆದ ಬಳಿಕ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆಯಿದ್ದ ನಿರೀಕ್ಷೆ ಹುಸಿಯಾಯಿತು. ನಿರ್ದೇಶಕ ಪುರಿ ಜಗನ್ನಾಥ್ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿ ಪ್ರೇಕಕ್ಷಕರಿಗೆ ಮೋಸ ಮಾಡಿದರು ಎನ್ನುವ ಮಾತುಗಳೂ ಕೇಳಿ ಬಂತು.
ವಿಜಯ್ ದೇವರಕೊಂಡ ಅವರಿಗೆ ʼಲೈಗರ್ʼ ಸೋಲು ದೊಡ್ಡ ಹಿನ್ನೆಡೆಯಾಗಿದೆ. ಈ ಹಿಂದಿನ ಚಿತ್ರಗಳಾದ ʼವರ್ಲ್ಡ್ ಫೇಮಸ್ ಲವರ್, ʼ ʼನೋಟʼ ಕೂಡ ಅಟ್ಟರ್ ಫ್ಲಾಫ್ ಸಾಲಿಗೆ ಸೇರಿತ್ತು. ಈ ಸರಣಿ ಸೋಲಿನ ಹಿಂದಿನ ಕಾರಣದ ಬಗ್ಗೆ ಟಿಟೌನ್ ನಲ್ಲಿ ಮಾತುಗಳು ಆರಂಭವಾಗಿದೆ.
ತೆಲಂಗಾಣದ ಜೋತ್ಯಿಷಿಯೊಬ್ಬರು ವಿಜಯ್ ದೇವರಕೊಂಡ ಬಗ್ಗೆ ಹೇಳಿದ ಮಾತುಗಳು ಸತ್ಯವೆಂದು ಜನರೀಗ ಮಾತಾನಾಡಿಕೊಳ್ಳುತ್ತಿದ್ದಾರೆ. ವೇಣುಸ್ವಾಮಿ ಎಂಬ ಜ್ಯೋತಿಷಿಯೊಬ್ಬರು ಈ ಹಿಂದೆ ವಿಜಯ್ ದೇವರಕೊಂಡ ಭವಿಷ್ಯವನ್ನು ನುಡಿದಿದ್ದರು. ವಿಜಯ್ ದೇವರಕೊಂಡ ಅವರಿಗೆ ಅಷ್ಟಮ ಶನಿ ವಕ್ಕರಿಸಿದೆ. ವಿಜಯ್ ನಟರಾದ ಅರವಿಂದ ಸ್ವಾಮಿ, ಉದಯ್ ಕಿರಣ್ ರಂತೆ ಮೊದಲು ಮಿಂಚಿ ನಂತರ ಬದಿಗೆ ಸರಿಯುತ್ತಾರೆ. ಅವರು ಮುಂದಿನ ನಿರ್ಧಾರಗಳನ್ನು ತುಂಬಾ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ಅವರು ದೊಡ್ಡ ಹೀರೋ ಆಗಲು ಸಾಧ್ಯ ವಿಲ್ಲ ಎಂದು ಹೇಳಿದ್ದರು.
ಈ ಹಳೆಯ ಮಾತು ಈಗ ʼಲೈಗರ್ʼ ಸೋಲಿನ ಬಳಿಕ ಮತ್ತೆ ವೈರಲ್ ಆಗುತ್ತಿದೆ. ಕೆಲವರು ಸ್ವಾಮೀಜಿ ಹೇಳಿದ ಮಾತುಗಳೇ ಸತ್ಯವೆಂದು ಮಾತಾನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ವೇಣು ಸ್ವಾಮಿ ಸಮಂತಾ – ನಾಗ ಚೈತನ್ಯ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಮೊದಲೇ ಹೇಳಿದ್ದರು. ರಶ್ಮಿಕಾ ಅವರ ಯಶಸ್ಸಿನ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದರು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.