![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-415x270.jpg)
Atlee Kumar: ಮತ್ತೆ ಶಾರುಖ್ ಜೊತೆ ಸಿನಿಮಾ.. ನಿಮ್ಮ ಪ್ರೀತಿಗೆ ಅಭಾರಿ ಎಂದ ಅಟ್ಲಿ
ಈ ಮೂರು ಬಾಲಿವುಡ್ ಸ್ಟಾರ್ ಗಳೊಂದಿಗೆ ಸಿನಿಮಾ ಮಾಡಲು ಇಷ್ಟವೆಂದ ಅಟ್ಲಿ
Team Udayavani, Sep 12, 2023, 11:33 AM IST
![ಈ ಮೂರು ಬಾಲಿವುಡ್ ಸ್ಟಾರ್ ಗಳೊಂದಿಗೆ ಸಿನಿಮಾ ಮಾಡಲು ಇಷ್ಟವೆಂದ ಅಟ್ಲಿ](https://www.udayavani.com/wp-content/uploads/2023/09/tdy-8-9-620x372.jpg)
ಮುಂಬಯಿ: ಬಾಲಿವುಡ್ ನಲ್ಲಿ ತನ್ನ ಮೊದಲ ಸಿನಿಮಾದ ಮೂಲಕ ಅಟ್ಲಿ ಮೋಡಿ ಮಾಡಿದ್ದಾರೆ. ಶಾರುಖ್ ಜೊತೆಗಿನ ಕಾಂಬಿನೇಷನ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿದೆ.
ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾ ಯಶಸ್ವಿಯಾಗಿ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 520 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆಗಳನ್ನು ʼಜವಾನ್ʼ ಉಡೀಸ್ ಮಾಡಿದೆ.
ಈ ನಡುವೆ ನಿರ್ದೇಶಕ ಅಟ್ಲಿ ಕುಮಾರ್ ಮುಂದಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಕೆಲಸ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಭಾರತೀಯ ಸೇನೆ, ಮುಂಬೈ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸರಿಗಾಗಿ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ.
“ತುಂಬಾ ಸಂತೋಷವಾಗುತ್ತಿದೆ. ಇದು ದೇವರ ಆಶೀರ್ವಾದವಾಗಿದೆ. ದೇವರು ನಮ್ಮ ಮೇಲೆ ಕರುಣೆ ತೋರಿಸಿದ್ದಾನೆ. ಪ್ರೇಕ್ಷಕರನ್ನು ರಂಜಿಸಲು ನಾವು ನಮ್ಮ ಜವಬ್ದಾರಿಯನ್ನು ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ʼಜವಾನ್ʼ ಥಿಯೇಟರ್ ಪರದೆಯ ಮೇಲೆ ಮನರಂಜನೆ ನೀಡಿದೆ ಎಂದು ಎಂದುಕೊಳ್ಳುತ್ತೇನೆ. ಜನರು ಸಿನಿಮಾ ನೋಡಿ ಸಂತೋಷಪಟ್ಟಿದ್ದಾರೆ. ಇದೆಲ್ಲದಕ್ಕೆ ಶಾರುಖ್ ಖಾನ್ ಅವರು ಕಾರಣ. ಶಾರುಖ್ ಸರ್ ಮತ್ತು ರೆಡ್ ಚಿಲ್ಲಿಸ್ ಮತ್ತು ಹಗಲು ರಾತ್ರಿ ಸಿನಿಮಾಕ್ಕಾಗಿ ದುಡಿದ ತಂಡಕ್ಕೆ ಧನ್ಯವಾದಗಳು” ಎಂದು ಅಟ್ಲಿ ಹೇಳಿದ್ದಾರೆ.
“ನಾನು ಈಗಾಗಲೇ ಶಾರುಖ್ ಖಾನ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವ ಯೋಜನೆಯಲ್ಲಿದ್ದೇನೆ. ಈ ಪ್ರಾಜೆಕ್ಟ್ ದೊಡ್ಡದಾಗಿರಲಿದೆ” ಎಂದು ಅಟ್ಲಿ ಹೇಳಿದ್ದಾರೆ.
“ನೀವು ತೋರಿಸಿದ ಅಪಾರ ಪ್ರೀತಿಯಿಂದ ಮತ್ತೊಮ್ಮೆ ನಾವು ದೊಡ್ಡದಾದ ಪ್ರಾಜೆಕ್ಟ್ ನೊಂದಿಗೆ ಬರುತ್ತೇವೆ. ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ನಾನು ಸಲ್ಮಾನ್, ಆಮಿರ್ ಹಾಗೂ ಹೃತಿಕ್ ಸರ್ ನೊಂದಿಗೆ ಕೆಲಸ ಮಾಡಲು ಬಯುಸುತ್ತೇನೆ. ಇದು ನನ್ನ ಮೊದಲ ಹಿಂದಿ ಚಿತ್ರ, ಹಾಗಾಗಿ ಪ್ರೀತಿಯನ್ನು ನೋಡಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು” ಎಂದು ಹೇಳಿದ್ದಾರೆ.
ʼಜವಾನ್ʼ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಸೆ. 7ರಂದು ಸಿನಿಮಾ ರಿಲೀಸ್ ಆಗಿದೆ.
ಟಾಪ್ ನ್ಯೂಸ್
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-415x270.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್](https://www.udayavani.com/wp-content/uploads/2024/07/14-1-150x90.jpg)
Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್
![ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು](https://www.udayavani.com/wp-content/uploads/2024/07/12-2-150x90.jpg)
ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-150x90.jpg)
Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…
![9](https://www.udayavani.com/wp-content/uploads/2024/06/9-19-150x90.jpg)
700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ
MUST WATCH
ಹೊಸ ಸೇರ್ಪಡೆ
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-150x98.jpg)
Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ
![Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್](https://www.udayavani.com/wp-content/uploads/2024/07/alok-1-150x83.jpg)
Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್
![11-honnavara](https://www.udayavani.com/wp-content/uploads/2024/07/11-honnavara-150x90.jpg)
Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು
![Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್ ರಾಜೀನಾಮೆ!](https://www.udayavani.com/wp-content/uploads/2024/07/Meena-150x84.jpg)
Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್ ರಾಜೀನಾಮೆ!
![Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ](https://www.udayavani.com/wp-content/uploads/2024/07/charmadi-150x83.jpg)
Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.