B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?


Team Udayavani, Jul 18, 2024, 11:35 AM IST

B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?

ಮುಂಬಯಿ: ಬಾಲಿವುಡ್‌ ದಂಪತಿ ಅಭಿಷೇಕ್‌ ಬಚ್ಚನ್‌(Abhishek Bachchan) ಹಾಗೂ ಐಶ್ವರ್ಯಾ ರೈ (Aishwarya Rai) ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್‌ ಬಿ ಕುಟುಂಬದ ಸೊಸೆ ಐಶ್ವರ್ಯಾ ರೈ ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ಅವರೊಂದಿಗೆ ಹಾಗೂ ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.

ಇದಕ್ಕೆ ಇತ್ತೀಚೆಗಿನ ಉದಾಹರಣೆ ಅಂಬಾನಿ ಪುತ್ರನ ಮದುವೆ. ಅನಂತ್‌ – ರಾಧಿಕಾ ಮದುವೆಗೆ ಅಮಿತಾಭ್‌ ಬಚ್ಚನ್‌(Amitabh Bachchan) ಅವರ ಕುಟುಂಬ ಜೊತೆಯಾಗಿ ಬಂದಿತ್ತು. ಆದರೆ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಪ್ರತ್ಯೇಕವಾಗಿ ಫೋಟೋಗ್ರಾಫರ್‌ ಗಳಿಗೆ ಪೋಸ್‌ ಕೊಟ್ಟಿದ್ದಾರೆ. ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ರೈ ಫೋಟೋಗೆ ನಿಂತಿಲ್ಲ. ಈ ವಿಚಾರ ಅಭಿಷೇಕ್‌ – ಐಶ್ವರ್ಯಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾತಿಗೆ ಪುಷ್ಟಿ ನೀಡಿದೆ.

ಕೆಲವೊಂದು ವರದಿಗಳ ಪ್ರಕಾರ ಅಭಿಷೇಕ್‌ – ಐಶ್ವರ್ಯಾ ಅವರ ನಡುವಿನ ಅಂತರ ಹೆಚ್ಚಾಗಿದ್ದು, ವಿಚ್ಚೇದನದ (Divorce)ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಈ ಮಾತು ಸುದ್ದಿಯಲ್ಲಿರುವಾಗಲೇ ಅಭಿಷೇಕ್‌ ಬಚ್ಚನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಚ್ಚೇದನದ ಕುರಿತ ಪೋಸ್ಟ್‌ ವೊಂದಕ್ಕೆ ಲೈಕ್‌ ಕೊಟ್ಟಿರುವ ಸ್ಕ್ರೀನ್‌ ಶಾಟ್‌ ವೊಂದು ವೈರಲ್‌ ಆಗಿದೆ.

ಲೇಖಕಿಯೊಬ್ಬರು ʼವಿಚ್ಚೇದನ ಬಳಿಕದ ಸವಾಲುʼ ಎನ್ನುವ ವಿಚಾರದ ಬಗ್ಗೆ ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಗೆ ಅಭಿಷೇಕ್‌ ಬಚ್ಚನ್‌ ಅವರು ಲೈಕ್‌ ಕೊಟ್ಟಿದ್ದಾರೆ.

ಅಭಿಷೇಕ್‌ ಬಚ್ಚನ್‌ ಅವರು ಲೈಕ್‌ ಕೊಟ್ಟಿರುವ ಸ್ಕ್ರೀನ್‌ ಶಾಟ್‌ ನ್ನು ಬಳಕೆದಾರನೊಬ್ಬ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.

“ವಿಚ್ಛೇದನವು ಯಾರಿಗೂ ಸುಲಭವಲ್ಲ” ಎಂದು ಶುರುವಾಗುವ ಪೋಸ್ಟ್‌ ನಲ್ಲಿ  ವಿಚ್ಚೇದನದ ಬಳಿಕದ ಜೀವನ ಅಷ್ಟು ಸುಲಭವಲ್ಲ ಎನ್ನುವ ಸವಾಲುಗಳ ಬಗ್ಗೆ ಹೇಳಲಾಗಿದೆ.

ಸದ್ಯ ಅಭಿಷೇಕ್‌ ಬಚ್ಚನ್‌ ಈ ಪೋಸ್ಟ್‌ ಗೆ ಮೆಚ್ಚುಗೆ ಕೊಟ್ಟಿರುವುದು ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ಬಗ್ಗೆ ಮತ್ತಷ್ಟು ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಸಿನಿಮಾದ ವಿಚಾರಕ್ಕೆ ಬಂದರೆ ಅಭಿಷೇಕ್‌ ಬಚ್ಚನ್‌ ಶಾರುಖ್‌ ಖಾನ್‌ ಅವರ ʼಕಿಂಗ್‌ʼ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

Congress ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್‌ ಪಕ್ಷ ಶಕ್ತಿ ಪ್ರದರ್ಶನ

Congress ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್‌ ಪಕ್ಷ ಶಕ್ತಿ ಪ್ರದರ್ಶನ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

PM-JANDHAN

Modi Government: ಜನಧನ ಯೋಜನೆ: ಆರ್ಥಿಕ ಶಕ್ತಿಗೆ ಹೊಸ ಚೈತನ್ಯ!

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

CCb

CCB Police: ಎಸ್‌ಡಿಎ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿ: ಬೃಹತ್‌ ಜಾಲ ಪತ್ತೆ

GRUHA

Congress Government Scheme: ಬಡವರ ನಂದಾದೀಪ ಗೃಹಲಕ್ಷ್ಮಿಗೆ ವರ್ಷದ ಹರ್ಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-knag

Kangana Ranaut ‘ಎಮರ್ಜೆನ್ಸಿ’ಸೆನ್ಸಾರ್ ಮಂಡಳಿಯಲ್ಲೇ ಅಂಟಿಕೊಂಡಿದೆ: ಬಿಡುಗಡೆಗೆ ಸಂಕಷ್ಟ!

kanagana-parlime

Kangana Ranaut ‘ಎಮರ್ಜೆನ್ಸಿ’ ಸಿನೆಮಾಗೂ ತಟ್ಟುವುದೇ ಬಿಸಿ?

1-wqeewqe

Shocking;ರೇ*ಪ್ ಹೇಗೆ ನಡೆಯುತ್ತದೆ ಎನ್ನುವ ಅನುಭವ ಕಂಗನಾಗಿದೆ: ಸಿಮ್ರಂಜಿತ್ ಸಿಂಗ್ ವಿವಾದ

Stake In Swiggy: ನಟ ಅಮಿತಾಭ್‌ ಬಚ್ಚನ್‌ ಕುಟುಂಬದಿಂದ ಸ್ವಿಗ್ಗಿ ಕಂಪೆನಿ ಷೇರು ಖರೀದಿ…

Stake In Swiggy: ನಟ ಅಮಿತಾಭ್‌ ಬಚ್ಚನ್‌ ಕುಟುಂಬದಿಂದ ಸ್ವಿಗ್ಗಿ ಕಂಪೆನಿ ಷೇರು ಖರೀದಿ…

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

Congress ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್‌ ಪಕ್ಷ ಶಕ್ತಿ ಪ್ರದರ್ಶನ

Congress ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್‌ ಪಕ್ಷ ಶಕ್ತಿ ಪ್ರದರ್ಶನ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

PM-JANDHAN

Modi Government: ಜನಧನ ಯೋಜನೆ: ಆರ್ಥಿಕ ಶಕ್ತಿಗೆ ಹೊಸ ಚೈತನ್ಯ!

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.