![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 19, 2023, 5:23 PM IST
ಮುಂಬಯಿ: 22 ವರ್ಷಗಳ ಬಳಿಕ ಸನ್ನಿ ಡಿಯೋಲ್ ಅವರಿಗೆ ʼಗದರ್-2ʼ ಮೂಲಕ ದೊಡ್ಡ ಬ್ರೇಕ್ ಸಿಗುವ ಸಾಧ್ಯತೆಯಿದೆ. 2001 ರಲ್ಲಿ ಬಂದ ʼಗದರ್ʼ ಸಿನಿಮಾದ ಸೀಕ್ವೆಲ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ.
ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಕಾಣಿಸಿಕೊಂಡಿರುವ ʼಗದರ್-2ʼ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್ ಅವರು ಬಹು ಸಮಯದ ನಂತರ ಒಂದು ಹಿಟ್ ಕೊಟ್ಟಿದ್ದಾರೆ. ಅಪಾರ ಪ್ರೇಕ್ಷಕರನ್ನು ಥಿಯೇಟರ್ ಗೆ ʼಗದರ್-2ʼ ಕರೆದುಕೊಂಡು ಬರುತ್ತಿದೆ. ವೀಕೆಂಡ್ ಮಾತ್ರವಲ್ಲದೆ, ವೀಕ್ ಡೇಸ್ ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇದೀಗ ಸನ್ನಿ ಡಿಯೋಲ್ ಅವರ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾವಾಗಿರುವ ದೇಶ ಪ್ರೇಮವನ್ನು ಸಾರಿದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿಯೊಂದು ಬಿಟೌನ್ ವಲಯದಲ್ಲಿ ಹಬ್ಬಿದೆ.
1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ 1997 ರಲ್ಲಿ ತೆರೆಗೆ ಬಂದ ʼಬಾರ್ಡರ್ʼ ಸಿನಮಾ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಜೆಪಿ ದತ್ತಾ ಮತ್ತು ನಿಧಿ ದತ್ತಾ ಅವರು ನಿರ್ಮಾಣ ಮಾಡಿದ್ದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವುದನ್ನು ಮೂಲಗಳು ತಿಳಿಸಿವೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಇದನ್ನೂ ಓದಿ: Raj B Shetty: ʼಮಾರಿʼ ಅವತಾರದ ʼಟೋಬಿʼಗೆ ಸೆನ್ಸಾರ್ ಬೋರ್ಡ್ನಿಂದ ʼಯು/ಎʼ ಸರ್ಟಿಫಿಕೇಟ್
“ʼಬಾರ್ಡರ್-2ʼ ಗಾಗಿ ಪಿ ದತ್ತಾ ಮತ್ತು ನಿಧಿ ದತ್ತಾ ಖ್ಯಾತ ಸ್ಟುಡಿಯೋಸ್ ಚರ್ಚೆಯನ್ನು ಆರಂಭವಾಗಿದೆ. ಸಿನಿಮಾದ 2ನೇ ಭಾಗವನ್ನು ತೆರೆಗೆ ತರುವ ಬಗ್ಗೆ ಮೊದಲ ಹಂತದ ಮಾತುಕತೆಗಳು ನಡೆಯುತ್ತಿವೆ. ಭಾರತೀಯ ಸೇನೆಯ ಇತಿಹಾಸದ ಕಥೆಯೊಂದು ಸಿನಿಮಾದಲ್ಲಿರಲಿದೆ. ಆ ಕಥೆ ಯಾವುದು ಎನ್ನುವುದು ಈಗಾಗಲೇ ಅಧಿಕೃತಗೊಳಿಸಲಾಗಿದೆ. ಬರವಣಿಗೆ ಹಂತ ಶೀಘ್ರದಲ್ಲಿ ಶುರುವಾಗಲಿದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
“ಸನ್ನಿ ಡಿಯೋಲ್ ಸಿನಿಮಾದಲ್ಲಿರಲಿದ್ದಾರೆ. ʼಬಾರ್ಡರ್ʼ ಸಿನಿಮಾದಲ್ಲಿದ್ದ ಹಳೆಯ ನಟರು ಇದರಲ್ಲಿ ಇರುವುದಿಲ್ಲ. ಇದರಲ್ಲಿ ತುಂಬಾ ಆ್ಯಕ್ಷನ್ ಇರಲಿದ್ದು, ಇದಕ್ಕಾಗಿ, ಈಗಿನ ಜನರೇಷನ್ ನ ಯುವ ನಟರನ್ನು ಆಯ್ದುಕೊಳ್ಳಲಾಗುತ್ತದೆ. ಹಳೆಯ ʼಬಾರ್ಡರ್ʼ ನಿಂದ ಸನ್ನಿ ಡಿಯೋಲ್ ಅವರು ಮಾತ್ರ ಇದರಲ್ಲಿ ಇರಲಿದ್ದಾರೆ. ʼಬಾರ್ಡರ್-2ʼ ಮಾತುಕತೆ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ” ಎಂದು ಮೂಲಗಳು ʼಪಿಂಕ್ ವಿಲ್ಲಾʼಗೆ ತಿಳಿಸಿದೆ.
ಸದ್ಯ ಸನ್ನಿ ಡಿಯೋಲ್ ʼಗದರ್-2ʼ ಯಶಸ್ಸಿನ ಸಂತಸದಲ್ಲಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.