Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Team Udayavani, Oct 3, 2024, 5:54 PM IST
ಬೆಂಗಳೂರು: ನಟ ಸನ್ನಿ ಡಿಯೋಲ್ (Sunny Deol) ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿ ʼಬಾರ್ಡರ್ʼ ಕೂಡ ಒಂದು. ದೇಶ ಪ್ರೇಮವನ್ನು ಸಾರಿದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬಗ್ಗೆ ಸುದ್ದಿ ಬಿಟೌನ್ ವಲಯದಲ್ಲಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ.
1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ 1997 ರಲ್ಲಿ ತೆರೆಗೆ ಬಂದ ʼಬಾರ್ಡರ್ʼ ಸಿನಮಾ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾದ ಸೀಕ್ವೆಲ್ ಬರುವುದು ಅಧಿಕೃತವಾಗಿದ್ದು, ಇದನ್ನು ಸ್ವತಃ ಸನ್ನಿ ಡಿಯೋಲ್ ಅವರೇ ಕೆಲ ಸಮಯದ ಹಿಂದಷ್ಟೇ ಟೀಸರ್ ತುಣುಕುವೊಂದನ್ನು ಹಂಚಿಕೊಂಡು ಹೇಳಿದ್ದರು.
ʼಬಾರ್ಡರ್-2ʼ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದರ ಬಗ್ಗೆ ಒಂದೊಂದೇ ಅಪ್ಡೇಟ್ ಗಳು ಹೊರ ಬೀಳುತ್ತಿದೆ.
ಇದನ್ನೂ ಓದಿ: BBK11:ಬಿಗ್ಬಾಸ್ ಸ್ಪರ್ಧಿ ಜಗದೀಶ್ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್ ಸಂಬರಗಿ
ಆಯುಷ್ಮಾನ್ ಖುರಾನಾ (Ayushmann Khurrana) ಇರಲಿದ್ದಾರೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಎಲ್ಲೂ ಬಹಿರಂಗವಾಗಿ ಹೇಳಿಲ್ಲ. ಇನ್ನುಳಿದಂತೆ ವರುಣ್ ಧವನ್ (Varun Dhawan) ಮತ್ತು ದಿಲ್ಜಿತ್ ದೋಸಾಂಜ್ (Diljit Dosanjh) ಇರುವುದು ಅಧಿಕೃತವಾಗಿದೆ.
ಇದೀಗ ಸಿನಿಮಾಕ್ಕೆ ಮತ್ತೊಬ್ಬ ʼಫೌಜಿʼಯ ಎಂಟ್ರಿ ಆಗಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ (Suniel Shetty) ಅವರ ಪುತ್ರ ಅಹಾನ್ ಶೆಟ್ಟಿ (Ahan Shetty) ʼಬಾರ್ಡರ್-2ʼಗೆ ʼಫೌಜಿʼಯಾಗಿ ಎಂಟ್ರಿ ಕೊಟ್ಟಿದ್ದಾರೆ.
View this post on Instagram
“ಯಾವುದನ್ನೂ ಶತ್ರು ದಾಟುದಿಲ್ಲವೂ ಅದ್ಯಾವುದೋ ಗೆರೆಯೂ ಅಲ್ಲ, ಗೋಡೆಯೂ ಅಲ್ಲ, ಹಳ್ಳವು ಅಲ್ಲ. ಹಾಗಾದರೆ ಈ ಬಾರ್ಡರ್ ಯಾವುದು? ಒಬ್ಬ ಫೌಜಿ ಹಾಗೂ ಅವನ ಸಹೋದರರು” ಎಂದು ಅಹಾನ್ ಅವರ ಪವರ್ ಫುಲ್ ಡೈಲಾಗ್ಸ್ ಮೂಲಕ ಅವರ ಪಾತ್ರದ ಪರಿಚಯವನ್ನು ಮಾಡಲಾಗಿದೆ.
ʼಕೇಸರಿʼ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಅನುರಾಗ್ ಸಿಂಗ್ ʼಬಾರ್ಡರ್ -2ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 2026ರ ಜನವರಿ 23, 2026 ರಂದು ಸಿನಿಮಾ ತೆರೆಗೆ ಬರಲಿದೆ.
1997ರಲ್ಲಿ ತೆರೆಕಂಡಿದ್ದʼಬಾರ್ಡರ್ʼ ಸಿನಿಮಾದಲ್ಲಿ ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಜಾಕಿ ಶ್ರಾಫ್, ಪುನೀತ್ ಇಸ್ಸಾರ್ ಮುಂತಾದವರು ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!
ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.