Brahmastra ರಿಲೀಸ್ ಆಗಿ 1 ವರ್ಷ: ಪಾರ್ಟ್ 2 & 3 ಬಗ್ಗೆ ಅಪ್ಡೇಟ್ ಕೊಟ್ಟ ನಿರ್ದೇಶಕ
Team Udayavani, Sep 9, 2023, 3:33 PM IST
ಮುಂಬಯಿ: ರಣಬೀರ್ ಕಪೂರ್ – ಆಲಿಯಾ ಭಟ್ ಸೇರಿದಂತೆ ಬಹುಭಾಷಾ ಕಲಾವಿದರು ನಟಿಸಿದ್ದ ʼಬ್ರಹ್ಮಾಸ್ತ್ರʼ (ಪಾರ್ಟ್ -1 ಶಿವ) ಸಿನಿಮಾ ಬಿಡುಗಡೆಯಾಗಿ ಇಂದು (ಸೆ.9 ರಂದು) ಒಂದು ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಸಿನಿಮಾದ ನಿರ್ದೇಶಕರು ಮುಂದಿನ ಭಾಗದ ಕುರಿತು ಹೊಸ ಅಪ್ಡೇಟ್ ವೊಂದನ್ನು ನೀಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಂಡಿದ್ದ ʼಬ್ರಹ್ಮಾಸ್ತ್ರʼಕ್ಕೆ ಆರಂಭಿಕವಾಗಿ ಬಾಯ್ಕಟ್ ಕೂಗು ಕೇಳಿ ಬಂದಿತ್ತು. ಸಿನಿಮಾದಲ್ಲಿನ ವಿಎಫ್ ಎಕ್ಸ್ ವಿಚಾರಕ್ಕೆ ಒಂದಷ್ಟು ಮಂದಿ ನೆಗೆಟಿವ್ ರಿವ್ಯೂ ನೀಡಿದ್ದರು. ಈ ಎಲ್ಲದರ ನಡುವೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. 100 ಕೋಟಿ ಕ್ಲಬ್ ಸೇರುವುದರ ಜೊತೆಗೆ ಸಿನಿಮಾ ಬಾಲಿವುಡ್ ನಲ್ಲಿ ಹಿಟ್ ಸಾಲಿಗೆ ಸೇರಿತ್ತು.
ಇದೀಗ ಸಿನಿಮಾ ತೆರೆಕಂಡು 1 ವರ್ಷ ಪೂರ್ತಿಗೊಂಡಿದ್ದು, ಈ ಸಂದರ್ಭದಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ ಮುಂದಿನ ಭಾಗಗಳ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
“9ನೇ ಸೆಪ್ಟೆಂಬರ್ 2022 ರಂದು, ನಾವು ನಿಮಗೆ ಅಸ್ತ್ರಗಳ ಜಗತ್ತನ್ನು ಪರಿಚಯಿಸಿದ್ದೇವೆ. 1ನೇ ಜನ್ಮದಿನದ ಶುಭಾಶಯಗಳು ಬ್ರಹ್ಮಾಸ್ತ್ರ! ಎಲ್ಲಾ ಸೃಜನಶೀಲತೆ, ಎಲ್ಲಾ ಕಠಿಣ ಪರಿಶ್ರಮ ಮತ್ತು ಚಲನಚಿತ್ರ ತಯಾರಿಕೆಯಲ್ಲಿ ಮತ್ತು ಜೀವನದಲ್ಲಿ ಎಲ್ಲಾ ಪಾಠಗಳಿಗಾಗಿ ಧನ್ಯವಾದಗಳು!” ಎಂದು ಅಯಾನ್ ಮುಖರ್ಜಿ ಬರೆದುಕೊಂಡಿದ್ದಾರೆ.
“ಬ್ರಹ್ಮಾಸ್ತ್ರ” (ಪಾರ್ಟ್ -2 ದೇವ್) ಇದರ ಆರಂಭಿಕ ಪರಿಕಲ್ಪನೆಯ ಕಲಾಕೃತಿಯನ್ನು ಅವರು ಹಂಚಿಕೊಂಡಿದ್ದಾರೆ. ಬ್ರಹ್ಮಾಸ್ತ್ರ 2 ಮತ್ತು 3 ಗಾಗಿ ದೃಷ್ಟಿ ಮತ್ತು ಕಥೆಯಲ್ಲಿನ ಕೆಲಸಕ್ಕಾಗಿ ಕೆಲವು ತಿಂಗಳುಗಳೇ ಕಳೆದಿದೆ ಎಂದು ನಿರ್ದೇಶಕರು ಬರೆದುಕೊಂಡಿದ್ದಾರೆ.
ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದರು. ಶಾರುಖ್ ಖಾನ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು.
View this post on Instagram
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ ಪಾಕ್ ಸಿನಿಮಾ ದ ಲೆಜೆಂಡ್ ಆಫ್ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ
Emergency;ಕೆಲವು ದೃಶ್ಯಕ್ಕೆ ಕತ್ತರಿ ಬಿದ್ದರಷ್ಟೇ ಅನುಮತಿ: ಕೋರ್ಟ್ಗೆ ಸಿಬಿಎಫ್ಸಿ
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
‘Stree 2’ OTT release: ಓಟಿಟಿಗೆ ಬಂತು ಸೂಪರ್ ಹಿಟ್ ʼಸ್ತ್ರೀ-2ʼ; ಎಲ್ಲಿ ನೋಡಬಹುದು?
Veer Savarkar ಚಿತ್ರ ಆಸ್ಕರ್ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್ ಹೇಳಿದ್ದೇನು…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.