Angus Cloud: 25 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ: ವಾರದ ಹಿಂದಷ್ಟೇ ತಂದೆಯ ಸಾವು
Team Udayavani, Aug 1, 2023, 12:37 PM IST
ವಾಷಿಂಗ್ಟನ್: ಹಾಲಿವುಡ್ ಸಿನಿಮಾರಂಗದ ಯುವನಟ 25 ರ ಹರೆಯದಲ್ಲೇ ಇಹಲೋಹ ತ್ಯಜಿಸಿದ್ದಾರೆ. ʼಎಚ್ ಬಿಒʼ ನಲ್ಲಿ ಸರಣಿಯಾಗಿ ಪ್ರಸಾರ ಕಾಣುತ್ತಿದ್ದ ‘ಯುಫೋರಿಯಾʼ ದಲ್ಲಿ ನಟಿಸಿ ಸಣ್ಣ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದ ಆಂಗಸ್ ಕ್ಲೌಡ್ ಸೋಮವಾರ(ಜು.31 ರಂದು) ನಿಧನರಾಗಿದ್ದಾರೆ.
ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ನಲ್ಲಿರುವ ಅವರ ನಿವಾಸದಲ್ಲಿ ಆಂಗಸ್ ಕ್ಲೌಡ್ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ನಿಧನ ಯಾವ ಕಾರಣದಿಂದ ಆಗಿದೆ ಎನ್ನುವುದರ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗೆ ನಿಧನರಾಗಿದ್ದ ತಂದೆ: ಕಳೆದ ವಾರ ಅವರ ತಂದೆ ನಿಧನರಾದರು. ಈ ನೋವಿನಲ್ಲಿ ಅವರು ಇದ್ದರು. ಅವರಿಗೆ ಅವರ ತಂದೆಯೇ ಉತ್ತಮ ಸ್ನೇಹಿತರಾಗಿದ್ದರು. ನಮಗಿರುವ ಒಂದೇ ಸಮಾಧಾನವೆಂದರೆ ಅವರೀಗ ಅವರ ತಂದೆಯೊಂದಿಗೆ ಸೇರಿಕೊಂಡಿದ್ದಾರೆನ್ನುವುದು. ಆಂಗಸ್ ಮಾನಸಿಕ ಆರೋಗ್ಯದೊಂದಿಗಿನ ಹೋರಾಟದ ಬಗ್ಗೆ ಹೇಳಿಕೊಂಡಿದ್ದರು. ಅವರ ನಿಧನವು ಇತರರಿಗೆ ಯಾರೂ ಒಬ್ಬಂಟಿಯಾಗಿಲ್ಲ ಮತ್ತು ಮೌನವಾಗಿ ತಮ್ಮದೇ ಆದ ಹೋರಾಟವನ್ನು ಮಾಡಬಾರದು ಎಂಬುದನ್ನು ನೆನಪಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಹಾಸ್ಯ, ನಗು ಮತ್ತು ಎಲ್ಲರರೊಂದಿಗಿನ ಪ್ರೀತಿಗಾಗಿ ಜಗತ್ತು ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ಭಾವಿಸುತ್ತೇವೆ” ಎಂದು ನಟನ ಕುಟುಂಬಸ್ಥರು ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ʼಎಚ್ ಬಿಒʼ ನಲ್ಲಿ ಸರಣಿಯಾಗಿ ಪ್ರಸಾರ ಕಾಣುತ್ತಿದ್ದ ‘ಯುಫೋರಿಯಾʼ ದಲ್ಲಿ ಆಂಗಸ್ ಕ್ಲೌಡ್ ಡ್ರಗ್ ಡೀಲರ್ ಫೆಜ್ಕೊ ‘ಫೆಜ್’ ಒ’ನೀಲ್ ಆಗಿ ನಟಿಸಿದ್ದರು.
ಒಂದು ದಿನ ಆಂಗಸ್ ಕ್ಲೌಡ್ ನ್ಯೂಯಾರ್ಕ್ ನ ಬೀದಿಯಲ್ಲಿ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಕಾಸ್ಟಿಂಗ್ ಡೈರೆಕ್ಟರ್ ಯೊಬ್ಬರು ಅವರನ್ನು ನಟನೆಗೆ ಬರುವಂತೆ ಹೇಳಿದ್ದರು. ಅದರಂತೆ 2019 ರಲ್ಲಿ ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ಲೋಕಕ್ಕೆ ಪರಿಚಿತರಾದರು. ನಟನೆಗೆ ಬರುವ ಮುನ್ನ ಅವರು ಹೊಟೇಲ್ ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು.
ಯುವ ನಟನ ನಿಧನಕ್ಕೆ ಹಿರಿಯ ನಟಿ ಕೆರ್ರಿ ವಾಷಿಂಗ್ಟನ್,ನಟಿ ರಾಚೆಲ್ ಜೆಗ್ಲರ್, ಸ್ಟಾರ್ಮ್ ರೀಡ್ ಸೇರಿದಂತೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.