Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..


ಸುಹಾನ್ ಶೇಕ್, Jun 29, 2024, 5:34 PM IST

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

ಮುಂಬಯಿ: ಕಲೆಗೆ ಗಡಿಗಳ ಹಂಗಿಲ್ಲ. ನಮ್ಮ ಭಾರತೀಯ ಕಲಾವಿದರು ನಮ್ಮಲ್ಲಿ ಮಾತ್ರವಲ್ಲದೆ, ಬೇರೆ ದೇಶಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇನ್ನು ಬೇರೆ ದೇಶ ಕಲಾವಿದರು ಕೂಡ ನಮ್ಮ ದೇಶದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಇಂದು ನಮ್ಮ ಬಾಲಿವುಡ್‌ ಸಿನಿಮಾಗಳಿಗೆ ಜಗತ್ತಿನೆಲ್ಲೆಡ ವೀಕ್ಷಕರಿದ್ದಾರೆ. ಹಿಂದಿ ಭಾಷೆಯ ಸಿನಿಮಾಗಳಿಗೆ ಪಕ್ಕದ ಪಾಕಿಸ್ತಾನ ದೇಶದಲ್ಲೂ ಅನೇಕ ವೀಕ್ಷಕರಿದ್ದಾರೆ. ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌ ಸೇರಿದಂತೆ ಹಲವು ಖ್ಯಾತ ಕಲಾವಿದರ ಸಿನಿಮಾಗಳಿಗೆ ಪಾಕಿಸ್ತಾನದಲ್ಲೂ ವೀಕ್ಷಕರಿದ್ದಾರೆ.

ನಮ್ಮ ಭಾರತದ ಕಲಾವಿದರು ಪಾಕಿಸ್ತಾನ ಸಿನಿಮಾ ಲೋಕದಲ್ಲೂ ನಟಿಸಿದ್ದಾರೆ ಎಂದರೆ ನಂಬುತ್ತೀರಾ? ಒಂದು ಕಾಲದಲ್ಲಿ ನಮ್ಮ ಕಲಾವಿದರು ಪಾಕಿಸ್ತಾನದ ಸಿನಿಮಾದಲ್ಲೂ ನಟಿಸಿದ್ದರು. ಯಾರು ಅವರು ಎನ್ನುವುದರ ಕುರಿತು ಪಟ್ಟಿ ಇಲ್ಲಿದೆ..

ಶ್ವೇತಾ ತಿವಾರಿ: ಶ್ವೇತಾ ತಿವಾರಿ ಏಂದರೆ ಭಾರತೀಯ ಕಿರುತೆರೆ ಪ್ರಿಯರಿಗೆ ಬಹುತೇಕರಿಕೆ ಗೊತ್ತಿರುತ್ತದೆ. ಹತ್ತಾರು ಹಿಂದಿ ಧಾರವಾಹಿಗಳಲ್ಲಿ ನಟಿಸಿರುವ ಅವರು, ಬಾಲಿವುಡ್‌ ಸಿನಿಮಾಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ.

ಅವರ ಕಲೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಭಾರತೀಯರ ಮನಗೆದ್ದಿರುವ ಶ್ವೇತಾ ಅವರು ಪಾಕಿಸ್ತಾನದ ಸಿನಿಮಾದಲ್ಲೂ ನಟಿಸಿದ್ದರು. ಹೌದು 2014 ರಲ್ಲಿ ತೆರೆಕಂಡ ‘ಸುಲ್ತಾನತ್’ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.

ನೇಹಾ ಧೂಪಿಯಾ: ಬಾಲಿವುಡ್‌ ನಲ್ಲಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ನೇಹಾ ಧೂಪಿಯಾ ಪಾಕಿಸ್ತಾನದ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. 2008ರಲ್ಲಿ ಬಂದ ʼಕಭಿ ಪ್ಯಾರ್ ನಾ ಕರ್ನಾʼ ಸಿನಿಮಾದ ಐಟಂ ಸಾಂಗ್‌ ನಲ್ಲಿ ನೇಹಾ ಹೆಜ್ಜೆ ಹಾಕಿದ್ದರು.

ನಸೀರುದ್ದೀನ್ ಷಾ: ಹಿರಿಯ ನಟ ನಸೀರುದ್ದೀನ್ ಷಾ ಇಂದು ಬಾಲಿವುಡ್‌ ನ ದಿಗ್ಗಜ ನಟರಲ್ಲಿ ಒಬ್ಬರು. ತನ್ನ ಮನರಂಜನಾ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿರುವ ಇವರು ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಪಾಕಿಸ್ತಾನದ ಸಿನಿಮಾಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ‘ಖುದಾ ಕೇ ಲಿಯೇ’(2007), ʼಜಿಂದಾ ಭಾಗ್ʼ (2013) ಸಿನಿಮಾದಲ್ಲಿ ನಟಿಸಿದ್ದರು.

ಓಂ ಪುರಿ : ನಟ ಓಂ ಪುರಿ ಅವರು ಹಿಂದಿಯ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಳೆಯ ಚಿತ್ರಗಳಲ್ಲಿನ ಅವರ ಅಭಿನಯ ಇಂದಿಗೂ ಎವರ್‌ ಗ್ರೀನ್‌ ಆಗಿದೆ. 2016 ರಲ್ಲಿ ಬಂದ ಆ್ಯಕ್ಟರ್‌ ಇನ್ ಲಾʼ ಎನ್ನುವ ಪಾಕಿಸ್ತಾನಿ ಚಿತ್ರದಲ್ಲಿ ಅವರು ನಟಿಸಿದ್ದರು.

ಕಿರಣ್ ಖೇರ್: ಹಿರಿಯ ನಟಿ  ಕಿರಣ್‌ ಖೇರ್‌ 2003ರಲ್ಲಿ ಬಂದ ‘ಖಾಮೋಶ್ ಪಾನಿ’ ಎನ್ನುವ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಕ್ಕೆ ಅಂತಾರಾಷ್ಟ್ತೀಯ ಮನ್ನಣೆ ಸಿಗುವುದರ ಜೊತೆಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು.

 ಪಾಕಿಸ್ತಾನದ ʼಗಾಡ್‌ ಫಾದರ್‌ʼ ನಲ್ಲಿ ಹಲವು ಭಾರತೀಯ ಕಲಾವಿದರು: ಹಾಲಿವುಡ್‌ ರಿಮೇಕ್‌ ಸಿನಿಮಾವಾಗಿ ಪಾಕಿಸ್ತಾನದಲ್ಲಿ 2007ರಲ್ಲಿ ಬಂದ ʼಗಾಡ್‌ ಫಾದರ್ – ದಿ ಲೆಜೆಂಡ್ ಕಂಟಿನ್ಯೂಸ್‌ʼ ಸಿನಿಮಾದಲ್ಲಿ ಭಾರತದ ನಟ ವಿನೋದ್‌ ಖನ್ನಾ ನಟಿಸಿದ್ದರು.‌ ಇವರಷ್ಟೇ ಅಲ್ಲದೆ ಸಲ್ಮಾನ್‌ ಖಾನ್‌ ಅವರ ಸಹೋದರ ಅರ್ಬಾಜ್‌ ಖಾನ್‌ , ಹೃಷಿತಾ ಭಟ್, ಮಲೈಕಾ ಆರೋರಾ ಸಹೋದರಿ ಅಮೃತಾ ಅರೋರಾ ಕೂಡ ಸಣ್ಣ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದರು.

ಜಾನಿ ಲಿವರ್: ಭಾರತದ ಖ್ಯಾತ ಹಾಸ್ಯ ನಟ ಜಾನಿ ಲಿವರ್‌ ಕೂಡ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸಿದ್ದರು. 2011ರಲ್ಲಿ ಬಂದ ಮ್ಯೂಸಿಕಲ್‌ ಲವ್‌ ಸ್ಟೋರಿ ʼಲವ್ ಮೇ ಘುಮ್ʼ ಚಿತ್ರದಲ್ಲಿ  ಜಾನಿ ಶುಕ್ಲಾ ಎನ್ನುವವರ ಪಾತ್ರವನ್ನು ಮಾಡಿದ್ದರು.

 

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.