![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Sep 21, 2022, 7:52 PM IST
ಮುಂಬಯಿ: ಆಶ್ಲೀಲ ಚಿತ್ರ ನಿರ್ಮಾಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ (ಸೆ.21) ಒಂದು ವರ್ಷವಾಗಿದೆ. ಈ ಬಗ್ಗೆ ಟ್ವೀಟ್ ವೊಂದನ್ನು ಮಾಡಿ ರಾಜ್ ಕುಂದ್ರಾ ಮೌನ ಮುರಿದಿದ್ದಾರೆ.
ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್ಗಳ ಮೂಲಕ ಅವುಗಳ ಬಿಡುಗಡೆ ಆರೋಪದಡಿ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ (2021) ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದರು.
ಹಲವು ಬಾರಿ ಜಾಮೀನು ಪಡೆಯಲು ಮುಂದಾದ ಅವರಿಗೆ ಸೆ.21 (2021) ರಂದು ಮುಂಬೈ ಕೋರ್ಟ್ 50,000 ಶ್ಯೂರಿಟಿಯೊಂದಿಗೆ ಬೇಲ್ ಮಂಜೂರು ಮಾಡಿತ್ತು.
ಜೈಲಿನಿಂದ ಬಿಡುಗಡೆ ಆದ ಬಳಿಕ ರಾಜ್ ಕುಂದ್ರಾ ಎಲ್ಲೂ ಕೂಡ ಮುಖ ತೋರಿಸಿ ಕಾಣಿಸಿಕೊಂಡಿಲ್ಲ. ಎಲ್ಲಿ ಹೋದರೂ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದಾರೆ.
ಇಂದಿಗೆ ( ಸೆ.21 ರಂದು) ರಾಜ್ ಕುಂದ್ರಾ ಜೈಲಿನಿಂದ ಹೊರ ಬಂದು ಒಂದು ವರ್ಷವಾಗಿದೆ. ಇದುವರೆಗೂ ಎಲ್ಲೂ ಬಹಿರಂಗವಾಗಿ ಮಾತಾನಾಡದ ಅವರು, ಟ್ವೀಟ್ ಮೂಲಕ ವಿರೋಧಿಗಳಿಗೆ, ಟೀಕಿಸುವವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.
“ಆರ್ಥರ್ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಇದು ನ್ಯಾಯವನ್ನು ಸಲ್ಲಿಸುವ ಸಮಯ. ಶೀಘ್ರದಲ್ಲೇ ಸತ್ಯ ಹೊರ ಬೀಳಲಿದೆ. ಎಲ್ಲರಿಗೂ ಧನ್ಯವಾದಗಳು, ವಿಶೇಷವಾಗಿ ನನ್ನನ್ನು ಬಲಪಡಿಸುತ್ತಿರುವ ಟ್ರೋಲರ್ ಗಳಿಗೆ ದೊಡ್ಡ ಧನ್ಯವಾದಗಳೆಂದು” ಹೇಳಿದ್ದಾರೆ. #enquiry #word #mediatrial #trollers ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
‘ನಿಮಗೆ ಸಂಪೂರ್ಣ ಕಥೆ ತಿಳಿದಿಲ್ಲದಿದ್ದರೆʼ ಸುಮ್ಮನಿರಿ ಎಂದು ಮಾಸ್ಕ್ ಹಾಕಿಕೊಂಡ ಫೋಟೋದ ಕೆಳೆಗೆ ಬರೆದುಕೊಂಡಿದ್ದಾರೆ.
One Year Today released from #ArthurRoad Its a matter of time Justice will be served! The truth will be out soon! Thank you well wishers and a bigger thank you to the trollers you make me stronger ? #enquiry #word #mediatrial #trollers pic.twitter.com/KVSpJoNAKo
— Raj Kundra (@TheRajKundra) September 21, 2022
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.