![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 21, 2023, 1:17 PM IST
ಬೆಂಗಳೂರು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ಗ್ಲೋಬಲ್ ಲೆವೆಲ್ ನಲ್ಲಿ ಹವಾ ಎಬ್ಬಿಸಿದ ʼಕಾಂತಾರʼ ಸ್ಯಾಂಡಲ್ ವುಡ್ ನಲ್ಲಿ ದಂತ ಕಥೆಯಾಗಿ ಉಳಿದಿದೆ. ಸಿನಿಮಾ ಯಶಸ್ಸಿಗೆ ಹರಕೆ ಹೇಳಿಕೊಂಡಿದ್ದ ಸಿನಿಮಾ ತಂಡ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.
ಬಾಕ್ಸ್ ಆಫೀಸ್ ನಲ್ಲಿ ಸಮಾರು 400 ಕೋಟಿ ಗಳಿಕೆ ಕಂಡ ʼಕಾಂತಾರʼ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನ ಎರಡಕ್ಕೂ ಫೇಮ್ ತಂದಕೊಟ್ಟಿತು. ʼಕಾಂತಾರ-2ʼ ತೆರೆಗೆ ಬರುತ್ತದೆ ಎನ್ನುವ ಸುದ್ದಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುವಾಗ ವೈರಲ್ ಆಗಿತ್ತು. ಆದರೆ ಇದುವರೆಗೆ ಎಲ್ಲೂ ಆ ಬಗ್ಗೆ ಚಿತ್ರ ತಂಡ ಮಾಹಿತಿ ಕೊಟ್ಟಿರಲಿಲ್ಲ. ʼಕಾಂತಾʼರ ಬಂದ ಮೇಲೆ ದೈವದ ವೇಷವನ್ನು ಹಾಕಿ ಕೆಲಕಡೆ ತುಳುನಾಡಿನ ಸಂಪ್ರದಾಯವನ್ನು ಅಪಮಾನಿಸುತ್ತಿದ್ದಾರೆ ಎಂದು ಕರಾವಳಿಯ ಕಡೆ ʼಕಾಂತಾರ-2ʼ ಸಿನಿಮಾ ಮಾಡೋದು ಬೇಡ ಎನ್ನುವ ಮಾತು ಕೇಳಿಬಂದಿತ್ತು.
ʼಕಾಂತಾರʼಕ್ಕಾಗಿ ರಿಷಬ್ ಶೆಟ್ಟಿ ಸಾಕಷ್ಟು ತಯಾರಿ ನಡೆಸಿಕೊಂಡಿದ್ದರು. ದೈವದ ಇಚ್ಛೆಯಂತೆಯೇ ಸಿನಿಮಾ ಮೂಡಿಬಂದಿದೆ. ಮತ್ತೆ ದೈವದ ಕಥೆಯನ್ನು ʼಕಾಂತಾರ-2ʼ ಆಗಿ ತರುವುದು ಅಷ್ಟು ಸುಲಭವಲ್ಲ. ಆದರೆ ʼಕಾಂತಾರ-2ʼ ಸಿನಿಮಾ ಬರುವುದು ಖಚಿತವೆಂದು ಸ್ವತಃ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರೇ ಹೇಳಿದ್ದಾರೆ.
ʼಡೆಡ್ ಲೈನ್ʼ ಜೊತೆ ಮಾತನಾಡಿರುವ ಅವರು “ರಿಷಬ್ ಶೆಟ್ಟಿ ಅವರು ʼಕಾಂತಾರ-2” ಸಿನಿಮಾದ ಕಥೆ ಬರೆಯುತ್ತಿದ್ದಾರೆ. ಅದರ ತಯಾರಿಗಾಗಿ, ಚಿತ್ರಕ್ಕಾಗಿ ಸಂಶೋಧನೆ ನಡೆಸಲು ಎರಡು ತಿಂಗಳು ತಮ್ಮ ರೈಟಿಂಗ್ ಟೀಮ್ ನೊಂದಿಗೆ ರಿಷಬ್ ಕರಾವಳಿ ಕರ್ನಾಟಕದ ಕಾಡುಗಳನ್ನು ಸುತ್ತಲಿದ್ದಾರೆ” ಎಂದಿದ್ದಾರೆ.
ರಿಷಬ್ ಅವರು ಜೂನ್ ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ. ಮಳೆಯ ದೃಶ್ಯಗಳು ಸಿನಿಮಾದಲ್ಲಿ ಬೇಕಾಗಿರುವುದರಿಂದ ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ಸಿನಿಮಾವನ್ನು 2024 ರ ಏಪ್ರಿಲ್ ಅಥವಾ ಮೇ ವೇಳೆಗೆ ರಿಲೀಸ್ ಮಾಡುವ ಯೋಜನೆ ನಮ್ಮದು ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ಸದ್ಯ ವಿಜಯ್ ಕಿರಗಂದೂರು ಹೇಳಿಕೆ ವೈರಲ್ ಆಗಿದ್ದು, ಟ್ವಿಟರ್ ನಲ್ಲಿ ʼಕಾಂತಾರ-2ʼ ಟ್ರೆಂಡ್ ಆಗಿದೆ. ಇತ್ತೀಚೆಗೆ ಕಾಂತಾರ ಆಸ್ಕರ್ ಗೆ ನಾಮಿನೇಟ್ ಆಗಲು ಅರ್ಹತೆಯನ್ನು ಪಡೆದುಕೊಂಡಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.