Bollywood: ಗೆಳೆಯನೊಂದಿಗೆ ಗುಟ್ಟಾಗಿ ಮದುವೆಯಾದ್ರಾ ಶ್ರುತಿ ಹಾಸನ್?‌ ಓರಿ ಹೇಳಿದ್ದೇನು


Team Udayavani, Dec 26, 2023, 3:42 PM IST

Bollywood: ಗೆಳೆಯನೊಂದಿಗೆ ಗುಟ್ಟಾಗಿ ಮದುವೆಯಾದ್ರಾ ಶ್ರುತಿ ಹಾಸನ್?‌ ಓರಿ ಹೇಳಿದ್ದೇನು

ಮುಂಬಯಿ: ಬಾಲಿವುಡ್‌ ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುವ  ಓರಿ (ಓರ್ಹಾನ್ ಅವತ್ರಾಮನ್)ನಟಿ ಶ್ರುತಿ ಹಾಸನ್‌ ಬಗ್ಗೆ ಕಮೆಂಟ್‌ ವೊಂದರಲ್ಲಿ ಹೇಳಿರುವ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಓರಿ ಬಿಟೌನ್‌ ಸೆಲೆಬ್ರಿಟಿಗಳ ಬೆಸ್ಟ್‌ ಫ್ರೆಂಡ್ಸ್‌ ಗಳಲ್ಲಿ ಒಬ್ಬರು. ಎಲ್ಲಿ ಹೋದರು ಫೋಟೋ ಕ್ಲಿಕ್ಕಿಸಿಕೊಂಡು, ತನ್ನ ಭಿನ್ನ – ವಿಭಿನ್ನ ಸ್ಟೈಲ್‌ ಗಳಿಂದ  ಗಮನ ಸೆಳೆಯುವ ಓರಿ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ರೆಡ್ಡಿಟ್‌ ನಲ್ಲಿ ʼಆಸ್ಕ್‌ ಮಿ ಎನಿಥಿಂಗ್‌ʼ ಸೆಷನ್‌ ನಲ್ಲಿ ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ನಟಿ ಶ್ರುತಿ ಹಾಸನ್‌ ಅವರ ಬಗ್ಗೆ ಹೇಳಿರುವ ಮಾತು ನೆಟ್ಟಿಗರ ಗಮನ ಸೆಳೆದಿದೆ.

ʼಸಲಾರ್‌ʼ ಬೆಡಗಿ ಶ್ರುತಿ ಕಳೆದ ಕೆಲ ಸಮಯದಿಂದ ಶಂತಾನು ಹಜಾರಿಕಾ ಅವರೊಂದಿಗೆ ಡೇಟಿಂಗ್‌ ನಲ್ಲಿದ್ದಾರೆ. ಆದರೆ ಮದುವೆ ಬಗ್ಗೆ ಯೋಚನೆ ಸದ್ಯಕ್ಕಿಲ್ಲ ಎಂದು ಶ್ರುತಿ ಹಾಸನ್‌ ಈ ಹಿಂದೊಮ್ಮೆ ಹೇಳಿದ್ದರು. ಮದುವೆ ಎನ್ನುವ ಪದ ಕೇಳಿದರೆ ಭೀತಿಯಾಗುತ್ತದೆ. ಹೀಗೆಯೇ ಇರುವುದು ತಮ್ಮಗಿಬ್ಬರಿಗೂ ಇಷ್ಟ ಶ್ರುತಿ ಹಾಸನ್‌ ಹೇಳಿದ್ದರು.

“ಹಾಯ್ ಓರಿ, ಫೋಟೋಗೆ ಪೋಸ್ ನೀಡುವಾಗ ನಿಮಗೆ ಅನಗತ್ಯ ವರ್ತನೆ ತೋರಿದ ಸೆಲೆಬ್ರಿಟಿಗಳು ಇದ್ದಾರಾ? ನಿಮಗೆ ಹೆಸರು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಸುಳಿವು ನೀಡಿ” ಎಂದು ಬಳಕೆದಾರರೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಓರಿ ನೇರವಾಗಿಯೇ ಶ್ರುತಿ ಹಾಸನ್‌ ಎಂದು ಹೇಳಿದ್ದಾರೆ.

“ಶ್ರುತಿ ಹಾಸನ್. ಪೋಸ್‌ ನೀಡದಕ್ಕಾಗಿ ಅಲ್ಲ. ಒಂದು ಕಾರ್ಯಕ್ರಮದಲ್ಲಿ ನಾನು ಅವರಿಗೆ ಮಾತನಾಡಿಲು ಪ್ರಯತ್ನಿಸಿದೆ ಆದರೆ ನಾನೊಂದಿಗೆ ಅವರು ತುಂಬಾ ಅತಿರೇಕದಿಂದ ವರ್ತಿಸಿದರು. ನನಗಾಗ ತುಂಬಾ ಬೇಜಾರ್‌ ಆಗಿತ್ತು. ಬಹುಶಃ ಏನೋ ತಪ್ಪುಗ್ರಹಿಕೆ ಆಗಿರಬಹುದು. ನನಗೆ ಅವರ ಪತಿ(ಶಂತಾನು) ಒಳ್ಳೆಯ ಪರಿಚಯವಿದೆ. ಮುಂದೆ ಇದು ಸರಿಯಾಗಬಹುದು. ನಾನು ಎಲ್ಲೋ ಒಂದು ಕಡೆಯಿಂದ ಶ್ರುತಿ ಹಾಸನ್‌ ನನ್ನನ್ನು ಸ್ಪಾಟ್ ಬಾಯ್ ಎಂದು ಕರೆದಿರುವುದಾಗಿ ಕೇಳಿದ್ದೆ” ಎಂದು ಉತ್ತರಿಸಿದ್ದಾರೆ.

ಶ್ರುತಿ ಹಾಸನ್‌ ಬಾಯ್‌ ಫ್ರೆಂಡ್‌ ಶಾಂತನು ಅವರೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಮಾತುಗಳು ಓರಿ ಅವರು ʼಪತಿʼ ಎನ್ನುವ ಪದವನ್ನು ಬಳಸಿದ ಬಳಿಕ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಟಾಪ್ ನ್ಯೂಸ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.