![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 26, 2023, 3:42 PM IST
ಮುಂಬಯಿ: ಬಾಲಿವುಡ್ ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುವ ಓರಿ (ಓರ್ಹಾನ್ ಅವತ್ರಾಮನ್)ನಟಿ ಶ್ರುತಿ ಹಾಸನ್ ಬಗ್ಗೆ ಕಮೆಂಟ್ ವೊಂದರಲ್ಲಿ ಹೇಳಿರುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಓರಿ ಬಿಟೌನ್ ಸೆಲೆಬ್ರಿಟಿಗಳ ಬೆಸ್ಟ್ ಫ್ರೆಂಡ್ಸ್ ಗಳಲ್ಲಿ ಒಬ್ಬರು. ಎಲ್ಲಿ ಹೋದರು ಫೋಟೋ ಕ್ಲಿಕ್ಕಿಸಿಕೊಂಡು, ತನ್ನ ಭಿನ್ನ – ವಿಭಿನ್ನ ಸ್ಟೈಲ್ ಗಳಿಂದ ಗಮನ ಸೆಳೆಯುವ ಓರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರೆಡ್ಡಿಟ್ ನಲ್ಲಿ ʼಆಸ್ಕ್ ಮಿ ಎನಿಥಿಂಗ್ʼ ಸೆಷನ್ ನಲ್ಲಿ ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ನಟಿ ಶ್ರುತಿ ಹಾಸನ್ ಅವರ ಬಗ್ಗೆ ಹೇಳಿರುವ ಮಾತು ನೆಟ್ಟಿಗರ ಗಮನ ಸೆಳೆದಿದೆ.
ʼಸಲಾರ್ʼ ಬೆಡಗಿ ಶ್ರುತಿ ಕಳೆದ ಕೆಲ ಸಮಯದಿಂದ ಶಂತಾನು ಹಜಾರಿಕಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಆದರೆ ಮದುವೆ ಬಗ್ಗೆ ಯೋಚನೆ ಸದ್ಯಕ್ಕಿಲ್ಲ ಎಂದು ಶ್ರುತಿ ಹಾಸನ್ ಈ ಹಿಂದೊಮ್ಮೆ ಹೇಳಿದ್ದರು. ಮದುವೆ ಎನ್ನುವ ಪದ ಕೇಳಿದರೆ ಭೀತಿಯಾಗುತ್ತದೆ. ಹೀಗೆಯೇ ಇರುವುದು ತಮ್ಮಗಿಬ್ಬರಿಗೂ ಇಷ್ಟ ಶ್ರುತಿ ಹಾಸನ್ ಹೇಳಿದ್ದರು.
“ಹಾಯ್ ಓರಿ, ಫೋಟೋಗೆ ಪೋಸ್ ನೀಡುವಾಗ ನಿಮಗೆ ಅನಗತ್ಯ ವರ್ತನೆ ತೋರಿದ ಸೆಲೆಬ್ರಿಟಿಗಳು ಇದ್ದಾರಾ? ನಿಮಗೆ ಹೆಸರು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಸುಳಿವು ನೀಡಿ” ಎಂದು ಬಳಕೆದಾರರೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಓರಿ ನೇರವಾಗಿಯೇ ಶ್ರುತಿ ಹಾಸನ್ ಎಂದು ಹೇಳಿದ್ದಾರೆ.
“ಶ್ರುತಿ ಹಾಸನ್. ಪೋಸ್ ನೀಡದಕ್ಕಾಗಿ ಅಲ್ಲ. ಒಂದು ಕಾರ್ಯಕ್ರಮದಲ್ಲಿ ನಾನು ಅವರಿಗೆ ಮಾತನಾಡಿಲು ಪ್ರಯತ್ನಿಸಿದೆ ಆದರೆ ನಾನೊಂದಿಗೆ ಅವರು ತುಂಬಾ ಅತಿರೇಕದಿಂದ ವರ್ತಿಸಿದರು. ನನಗಾಗ ತುಂಬಾ ಬೇಜಾರ್ ಆಗಿತ್ತು. ಬಹುಶಃ ಏನೋ ತಪ್ಪುಗ್ರಹಿಕೆ ಆಗಿರಬಹುದು. ನನಗೆ ಅವರ ಪತಿ(ಶಂತಾನು) ಒಳ್ಳೆಯ ಪರಿಚಯವಿದೆ. ಮುಂದೆ ಇದು ಸರಿಯಾಗಬಹುದು. ನಾನು ಎಲ್ಲೋ ಒಂದು ಕಡೆಯಿಂದ ಶ್ರುತಿ ಹಾಸನ್ ನನ್ನನ್ನು ಸ್ಪಾಟ್ ಬಾಯ್ ಎಂದು ಕರೆದಿರುವುದಾಗಿ ಕೇಳಿದ್ದೆ” ಎಂದು ಉತ್ತರಿಸಿದ್ದಾರೆ.
ಶ್ರುತಿ ಹಾಸನ್ ಬಾಯ್ ಫ್ರೆಂಡ್ ಶಾಂತನು ಅವರೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಮಾತುಗಳು ಓರಿ ಅವರು ʼಪತಿʼ ಎನ್ನುವ ಪದವನ್ನು ಬಳಸಿದ ಬಳಿಕ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.