Kangana Ranaut ‘ಎಮರ್ಜೆನ್ಸಿ’ ಸಿನೆಮಾಗೂ ತಟ್ಟುವುದೇ ಬಿಸಿ?
ಸಂಸದೆಗೆ ಬಿಜೆಪಿ ಬುಲಾವ್...ನಡ್ಡಾ ಎಚ್ಚರಿಕೆ
Team Udayavani, Aug 30, 2024, 6:58 AM IST
ಹೊಸದಿಲ್ಲಿ: ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ, ಬಿಜೆಪಿ(BJP) ಸಂಸದೆ ಕಂಗನಾ ರಣಾವತ್ಗೆ ಹೈಕಮಾಂಡ್ ಗುರುವಾರ ಬುಲಾವ್ ನೀಡಿದೆ. ಅದರಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಕಂಗನಾ ಭೇಟಿ ಯಾಗಿದ್ದು, ಇಲ್ಲಸಲ್ಲದ ಹೇಳಿಕೆ ನೀಡ ದಂತೆ ಕಂಗನಾಗೆ ನಡ್ಡಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ನಡ್ಡಾ ಅವರೊಂದಿಗೆ ಕಂಗನಾ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ. ಈ ವೇಳೆ ಪಕ್ಷಕ್ಕೆ ಮುಳ್ಳಾಗುವಂಥ ಹೇಳಿಕೆಗಳನ್ನು ನೀಡದಂತೆ ಕಂಗನಾರನ್ನು ಎಚ್ಚರಿಸಲಾಗಿದೆ. ಅಲ್ಲದೇ ಹರಿಯಾಣ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಂತೆಯೇ ಕಂಗನಾರ ಹೇಳಿಕೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ಪರಿಗಣಿಸಿ ಕಂಗನಾರನ್ನು ತರಾಟೆ ತೆಗೆದುಕೊಂಡಿದೆ ಎಂದೂ ಹೇಳಲಾಗಿದೆ.
ಎಮರ್ಜೆನ್ಸಿ ರಿಲೀಸ್ ರದ್ದಿಗೆ ಅರ್ಜಿ: ಕಂಗನಾ ನಟಿಸಿ, ನಿರ್ದೇಶಿಸಿರುವ ಎಮರ್ಜೆನ್ಸಿ ಸಿನೆಮಾ ಬಿಡುಗಡೆಯಾಗಬಾರದೆಂದು ಶಿರೋಮಣಿ ಅಕಾಲಿ ದಳದ ದಿಲ್ಲಿ ಘಟಕವು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಗೆ ಪತ್ರ ಬರೆದಿದೆ. ಈ ಚಿತ್ರದಿಂದ ಕೋಮುದ್ವೇಷ ಹೆಚ್ಚಿಸುವ ಹುನ್ನಾರವಿದೆ ಎಂದು ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ
Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ
Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ
Gyanvapi ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ : ಯೋಗಿ ಆದಿತ್ಯನಾಥ್
‘Nafrat Ki Dukaan..; ಅಮೆರಿಕ ಘಟನೆ ಕುರಿತು ರಾಹುಲ್ ವಿರುದ್ಧ ಮೋದಿ ಆಕ್ರೋಶ
MUST WATCH
ಹೊಸ ಸೇರ್ಪಡೆ
India vs Bangladesh: ನೆಟ್ಸ್ನಲ್ಲಿ ಭಾರತಕ್ಕೆ ಗುರ್ನೂರ್ ನೆರವು
Subramanya: ನಿಯಂತ್ರಣ ತಪ್ಪಿದ ಕಾರು ಪಲ್ಟಿ
Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್.ರಾಜಣ್ಣ
Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?
England vs Australia: ಲಿವಿಂಗ್ಸ್ಟೋನ್ ಅಬ್ಬರ; ಆಸೀಸ್, ಇಂಗ್ಲೆಂಡ್ ಟಿ20 ಸರಣಿ ಸಮಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.