![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 21, 2023, 11:05 AM IST
ಮುಂಬಯಿ: ಪಬ್ ಜೀ ಮೂಲಕ ಪರಿಚಯವಾಗಿ ತನ್ನ ಪ್ರಿಯಕರ ಸಚಿನ್ ಗಾಗಿ ಅಕ್ರಮವಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ನ ಸೀಮಾ ಹೈದರ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೀಮಾ ಹೈದರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಕ್ಕಾಗಿ ಅಡಿಷನ್ ನೀಡಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು.
ಸೀಮಾ ಹೈದರ್ – ಸಚಿನ್ ಪ್ರೇಮ ಕಥೆ ಆಧಾರಿತ ಸಿನಿಮಾಕ್ಕೆ ʼ ಕರಾಚಿ ಟು ನೋಯ್ಡಾʼ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಸಿನಿಮಾದ ಮೊದಲ ಹಾಡಿನ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ʼ ಚಲ್ ಪಡೆ ಹೇ ಹಮ್ʼ (Chal Pade Hain Hum) ವಿಡಿಯೋ ಹಾಡು ರಿಲೀಸ್ ಆಗಿದೆ.
ಹಾಡಿನಲ್ಲಿ ಸೀಮಾ ಹೈದರ್ ಅವರ ಪಾತ್ರವನ್ನು ಫರ್ಹೀನ್ ಫಲಕ್ ಅವರು ನಿಭಾಯಿಸಿದ್ದಾರೆ. ಪಾಕ್ ನ ತನ್ನ ಗಂಡನ ಮನೆಯಲ್ಲಿ ಪಬ್ ಜೀ ಆಡುತ್ತಾ ಭಾರತದ ನೋಯ್ಡಾದ ಸಚಿನ್ ಗಾಗಿ ಅಕ್ರಮವಾಗಿ ಗಡಿದಾಡಿ ಬರುವ ಕಥೆಯನ್ನು ದೃಶ್ಯವಾಗಿ ತೋರಿಸಲಾಗಿದೆ.
ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬರುವ ಮುನ್ನ ಆಕೆಯ ಮನಸ್ಸಿನಲ್ಲಾದ ತಳಮಳ, ಭೀತಿ ಹಾಗೂ ಗೊಂದಲವನ್ನು ಅಮಿತ್ ಜಾನಿ ಅವರ ಸಾಹಿತ್ಯ ಹಾಗೂ ಪ್ರೀತಿ ಸರೋಜ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಕಟ್ಟಿಕೊಡುತ್ತದೆ. ನಮಾಜ್ ಮಾಡುತ್ತಾ ಬೆಳೆದ ಸೀಮಾ ಹೈದರ್, ಹಿಂದೂವಾಗಿ ಗಂಗೆಯ ತಟದಲ್ಲಿ ಕೂರುವ, ದೇವರಿಗೆ ಕೈಮುಗಿಯುವ ದೃಶ್ಯ ಹಾಗೂ ಭಾರತದ ಧ್ವಜವನ್ನು ಹಿಡಿದು ರಾರಾಜಿಸುವ ದೃಶ್ಯವನ್ನು ತೋರಿಸಲಾಗಿದೆ.
ಈ ಸಿನಿಮಾವನ್ನು ಜಯಂತ್ ಸಿನ್ಹಾ, ಭರತ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ಅಮಿತ್ ಜಾನಿ ನಿರ್ಮಾಣ ಮಾಡುತ್ತಿದ್ದಾರೆ.
ದೇಶದ್ಯಂತ ನೂರಾರು ರಂಗಭೂಮಿ ಕಲಾವಿದರನ್ನು ಚಿತ್ರಕ್ಕಾಗಿ ಆಡಿಷನ್ ನಡೆಸಲಾಗಿತ್ತು. ಸಚಿನ್ ಮೀನಾ ಪಾತ್ರಕ್ಕಾಗಿ ಗುಲಾಮ್ ಹೈದರ್ ಆಡಿಷನ್ ನೀಡಿದ್ದರು. ಸೀಮಾ ಹೈದರ್ ಹಾಗೂ ಸಚಿನ್ ಅವರ ಆರ್ಥಿಕ ಸಂಕಷ್ಟದ ಕಾರಣದಿಂದ ಅವರನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಿರ್ಮಾಪಕ ಅಮಿತ್ ಜಾನಿ ಹೇಳಿದ್ದರು. ಆದರೆ ಸೀಮಾ ಹೈದರ್ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಇದುವರೆಗೆ ಬಹಿರಂಗವಾಗಿಲ್ಲ.
ಈ ಮಧ್ಯ ವಿರೋಧದ ನಡುವೆಯೂ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಲು ಅಮಿತ್ ಜಾನಿ ಆಗಸ್ಟ್ 27 ರಂದು ಮುಂಬೈಗೆ ಹೋಗಲಿದ್ದಾರೆ. ಸದ್ಯ ಈ ಹಾಡು 500 ಕ್ಕೂ ಹೆಚ್ಚಿನ ಮ್ಯೂಸಿಕ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.