ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ: YouTube, Facebook ಸೇರಿ 9 ಮಂದಿಯ ವಿರುದ್ಧ ಕೇಸ್
ಇಂಥ ಪ್ರಕರಣ ಮಾಲಿವುಡ್ ಸಿನಿಮಾರಂಗದಲ್ಲಿ ಇದೇ ಮೊದಲು
Team Udayavani, Oct 26, 2023, 1:03 PM IST
ಕೊಚ್ಚಿ: ಮಾಲಿವುಡ್ ಸಿನಿಮಾವೊಂದರ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದಕ್ಕಾಗಿ ಯೂಟ್ಯೂಬ್, ಫೇಸ್ ಬುಕ್ ಸೇರಿದಂತೆ 9 ಮಂದಿಯ ವಿರುದ್ಧ ಕೊಚ್ಚಿ ಪೊಲೀಸರು ದೂರು ದಾಖಲಿಸಿದ್ದಾರೆ. ಈ ವಿಚಾರದಲ್ಲಿ ಇಂಥ ಪ್ರಕರಣವೊಂದು ದಾಖಲಾಗಿರುವುದು ಮಾಲಿವುಡ್ ಸಿನಿಮಾರಂಗದಲ್ಲಿ ಇದೇ ಮೊದಲು.
ಅಕ್ಟೋಬರ್ 13 ರಂದು ರಿಲೀಸ್ ಆದ ʼರಾಹೆಲ್ ಮಕಲ್ʼ ಸಿನಿಮಾದ ನಿರ್ದೇಶಕ ಉಬೈನಿ ಇ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 385 (ಸುಲಿಗೆ) ಮತ್ತು ಸೆಕ್ಷನ್ 120 (ಒ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ನನ್ನ ಸಿನಿಮಾದ ವಿರುದ್ಧ ಬ್ಲ್ಯಾಕ್ ಮೇಲ್ ಹಾಗೂ ಸುಲಿಗೆ ಮಾಡುವುದಕ್ಕಾಗಿ ನಕಾರಾತ್ಮಕ ವಿಮರ್ಶೆ ಹಾಗೂ ಅಭಿಪ್ರಾಯವನ್ನು ಹರಿದು ಬಿಡಲಾಗಿದೆ ಎಂದು ನಿರ್ದೇಶಕ ಉಬೈನಿ ಇ ಅವರು ಫೇಸ್ ಬುಕ್, ಯೂಟ್ಯೂಬ್ ಹಾಘೂ ವ್ಲಾಗರ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಿನಿಮಾ ಪ್ರಚಾರ ಸಂಸ್ಥೆಯ ಮಾಲೀಕ ಹೈನ್ಸ್, ಸಾಮಾಜಿಕ ಮಾಧ್ಯಮ ವಿಮರ್ಶಕರಾದ ಅರುಣ್ ತರಂಗ, ಅಸ್ವಂತ್ ಕೋಕ್, ಫೇಸ್ಬುಕ್ ಖಾತೆ ಬಳಕೆದಾರ ಅನೂಪನು6165, ಸೋಷಿಯಲ್ ಮೀಡಿಯಾ ಹ್ಯಾಂಡಲ್ ಸೋಲ್ಮೇಟ್ಸ್55 ಮತ್ತು ಪ್ಲಾಟ್ಫಾರ್ಮ್ಗಳಾದ ಯೂಟ್ಯೂಬ್ ಮತ್ತು ಫೇಸ್ಬುಕ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ʼ ಅರೋಮಾಲಿಂತೆ ಆದ್ಯತೇ ಪ್ರಾಣಾಯಾಮ್ʼ ಸಿನಿಮಾದ ನಿರ್ದೇಶಕ ಮುಬೀನ್ ರೌಫ್ ಅವರು ಸಿನಿಮಾದ ವಿಮರ್ಶೆಯನ್ನು ವ್ಲಾಗರ್ ಹಾಗೂ ವಿಮರ್ಶಕರು ಒಂದು ವಾರದವರೆಗೂ ಪ್ರಕಟಿಸದಂತೆ ನಿರ್ದೇಶನ ನೀಡುವಂತೆ ಕೇರಳ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದೇ ಸಮಯದಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ʼರಾಹೆಲ್ ಮಕನ್ ಕೋರಾʼ ಕಾಮಿಡಿ ಡ್ರಾಮಾವಾಗಿದ್ದು,ಇದರಲ್ಲಿ ಅನ್ಸನ್ ಪಾಲ್ ಮತ್ತು ಮೆರಿನ್ ಫಿಲಿಪ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅಲ್ತಾಫ್ ಸಲೀಂ, ವಿಜಯಕುಮಾರ್, ಸ್ಮಿನು ಸಿಜೋ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್ ಪ್ರಮಾಣಪತ್ರ!
Bhool Bhulaiyaa 3; ವಿದ್ಯಾ-ಮಾಧುರಿ ನಾಟ್ಯ ಲಹರಿ
Somy Ali: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್ ಕೇಳಿದ ಸಲ್ಮಾನ್ ಖಾನ್ ಮಾಜಿ ಗೆಳತಿ
Ranbir Kapoor: ಹೊಸ ಲುಕ್ನಲ್ಲಿ ರಣಬೀರ್ ಕಪೂರ್; ಧೂಮ್ 4ಗೆ ತಯಾರಿ?
Salman to Munawar: ಗ್ಯಾಂಗ್ಸ್ಟರ್ ಲಾರೆನ್ಸ್ ಹಿಟ್ ಲಿಸ್ಟ್ ಯಾರೆಲ್ಲಾ ಇದ್ದಾರೆ
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.