![Bhadra Dam; the water leaking from the river sleeves gate stopped](https://www.udayavani.com/wp-content/uploads/2024/07/bhadra-1-415x229.jpg)
Lokesh Kanagaraj: ವಿಕ್ರಮ್,ಕೈಥಿಯಂತೆ ಎರಡು ಭಾಗಗಳಲ್ಲಿ ʼಲಿಯೋʼ?; ನಿರ್ದೇಶಕರಿಂದ ಸುಳಿವು
Team Udayavani, Oct 8, 2023, 10:12 AM IST
![Lokesh Kanagaraj: ವಿಕ್ರಮ್,ಕೈಥಿಯಂತೆ ಎರಡು ಭಾಗಗಳಲ್ಲಿ ʼಲಿಯೋʼ?; ನಿರ್ದೇಶಕರಿಂದ ಸುಳಿವು](https://www.udayavani.com/wp-content/uploads/2023/10/TDY-2-5-620x372.jpg)
ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿ ಸದ್ದು ಮಾಡಿದ್ದು, ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ʼಮಾಸ್ಟರ್ʼ ಬಳಿಕ ಲೋಕೇಶ್ ಕನಕರಾಜ್ ವಿಜಯ್ ಕಾಂಬಿನೇಷನ್ ನೊಂದಿಗೆ ʼಲಿಯೋʼ ಸಿನಿಮಾ ಮಾಡಿದ್ದು, ಪ್ರೇಕ್ಷಕರು ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ ನಿರ್ದೇಶಕ ಲೋಕೇಶ್ ನಾನಾ ಸಿನಿ ವೆಬ್ ಸೈಟ್ ಗಳಿಗೆ ಸಂದರ್ಶನವನ್ನು ನೀಡಿದ್ದಾರೆ. ಅದರಲ್ಲಿ ತನ್ನ ಸಿನಿಮಾ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ಲೋಕೇಶ್ ಕನಕರಾಜ್ ಅವರ ʼವಿಕ್ರಮ್ʼ ಹಾಗೂ ʼಕೈಥಿʼ ಸಿನಿಮಾ ಸೀಕ್ವೆಲ್ ಆಗಿ ಬರಲಿರುವುದು ಗೊತ್ತೇ ಇದೆ. ಈ ಸಿನಿಮಾಗಳಂತೆ ʼಲಿಯೋʼ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಸುಳಿವನ್ನು ಲೋಕೇಶ್ ಸಂದರ್ಶನವೊಂದರಲ್ಲಿ ನೀಡಿದ್ದಾರೆ.
“ಲಿಯೋ” ಸೀಕ್ವೆಲ್ ಬಗ್ಗೆ ನಾನು ಸಿನಿಮಾ ರಿಲೀಸ್ ಆಗುವವರೆ ಏನು ಹೇಳಲಾರೆ. ದಳಪತಿ ನನಗೆ ಹೇಳಿದರೆ ನಾನು ಅದನ್ನು ಮಾಡುತ್ತೇನೆ. ನಾನು ಮುಂದೆ ʼತಲೈವರ್ 171ʼ (ರಜಿನಿಕಾಂತ್ ಜೊತೆ) ಮತ್ತು ʼಕೈಥಿ 2ʼ (ಕಾರ್ತಿ ಜೊತೆ) ಮಾಡಲಿದ್ದೇನೆ. ʼಕೈಥಿ 2ʼ ಚಿತ್ರದ ಶೂಟಿಂಗ್ ಮುಗಿದ ನಂತರ ರೋಲೆಕ್ಸ್ ಸ್ಪಿನ್-ಆಫ್ ಮತ್ತು ʼವಿಕ್ರಮ್ 2ʼ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ.
ಇನ್ನು ʼಲಿಯೋʼ ಟ್ರೇಲರ್ ನಲ್ಲಿ ಪಾರ್ಥಿಬನ್(ವಿಜಯ್ ಪಾತ್ರ) ತನ್ನ ಪತ್ನಿಯ ಬಳಿ ಶತ್ರುವಿನ ಬಗ್ಗೆ ಹೇಳುವ ಒಂದು ಡೈಲಾಗ್ಸ್ ಇದೆ. ಡೈಲಾಗ್ಸ್ ನಲ್ಲಿರುವ ಈ ಪದ ನಿಂದನೆ ಹಾಗೂ ಅವಮಾನಕಾರವಾಗಿದ್ದು, ವಿಜಯ್ ಅಭಿಮಾನಿಗಳಿಗೆ ಇದು ಇಷ್ಟವಾಗಿಲ್ಲ. ಈ ಬಗ್ಗೆ ನಿರ್ದೇಶಕ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Actress: ಇಸ್ರೇಲ್ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡ ಬಾಲಿವುಡ್ ನಟಿ; ಸಂಪರ್ಕ ಕಡಿತ
“ಆ ಸಿನಿಮಾ ಮತ್ತು ಆ ದೃಶ್ಯಕ್ಕೆ ಆ ಮಾತು, ಭಾವ ಬೇಕಿತ್ತು. ನಾವು ಕೆಲವೊಮ್ಮೆ ಕೋಪದಿಂದ ಕೆಲವು ಪದಗಳನ್ನು ಹೇಳುತ್ತೇವೆ ಮತ್ತು ನಾವು ಆ ದೃಶ್ಯವನ್ನು ಚಿತ್ರೀಕರಿಸಲು ಮುಂದಾದಾಗ, ದಳಪತಿ ವಿಜಯ್ ನನ್ನನ್ನು ಕೇಳಿದರು ‘ಇದು ಸರಿಯೇ? ಅಥವಾ ನಾನು ಇದನ್ನು ಹೇಳಿದರೆ ಅದು ತಪ್ಪಾಗುತ್ತದೆಯೇ?’ ನಂತರ, ಆ ಪಾತ್ರಕ್ಕೆ, ಆ ದೃಶ್ಯಕ್ಕೆ ಮಾಡುವುದು ಸರಿಯಾದ ಕೆಲಸ ಎಂದು ನಾನು ಅವರಿಗೆ ಮನವರಿಕೆ ಮಾಡಿದೆ. ಮತ್ತು ನಾನು ಎಲ್ಲಾ ಆಪಾದನೆಗಳನ್ನು ತೆಗೆದುಕೊಳ್ಳುತ್ತೇನೆ. ಇದನ್ನು ನಟ ದಳಪತಿ ವಿಜಯ್ ಹೇಳಿಲ್ಲ. ʼಲಿಯೋʼ ಚಿತ್ರದಲ್ಲಿನ ಅವರ ಪಾತ್ರವಾದ ಪಾರ್ತಿಬನ್ ಇದನ್ನು ಹೇಳಿದ್ದಾರೆ,” ಎಂದು ನಿರ್ದೇಶಕ ಲೋಕೇಶ್ ವಿವರಿಸಿದರು.
ಇನ್ನು ಇದೇ ಅಕ್ಟೋಬರ್ 19 ರಂದು ʼಲಿಯೋʼ ಸಿನಿಮಾ ತೆರೆಗೆ ಬರಲಿದೆ. ತ್ರಿಶಾ ಕೃಷ್ಣನ್, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್, ಬಾಬು ಆಂಟೋನಿ, ಬೇಬಿ ಇಯಲ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದಾರೆ.
ಟಾಪ್ ನ್ಯೂಸ್
![Bhadra Dam; the water leaking from the river sleeves gate stopped](https://www.udayavani.com/wp-content/uploads/2024/07/bhadra-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1](https://www.udayavani.com/wp-content/uploads/2024/07/1-5-150x90.jpg)
ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?
![samanta](https://www.udayavani.com/wp-content/uploads/2024/07/samanta-150x95.jpg)
Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು
![Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್](https://www.udayavani.com/wp-content/uploads/2024/07/14-1-150x90.jpg)
Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್
![ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು](https://www.udayavani.com/wp-content/uploads/2024/07/12-2-150x90.jpg)
ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
MUST WATCH
ಹೊಸ ಸೇರ್ಪಡೆ
![BBMP: 17.56 ಕೋಟಿ ಬಾಡಿಗೆ ಬಾಕಿ; ಬ್ಯಾಂಕ್ಗೆ ಪಾಲಿಕೆ ಬೀಗ](https://www.udayavani.com/wp-content/uploads/2024/07/5-5-150x90.jpg)
BBMP: 17.56 ಕೋಟಿ ಬಾಡಿಗೆ ಬಾಕಿ; ಬ್ಯಾಂಕ್ಗೆ ಪಾಲಿಕೆ ಬೀಗ
![Bhadra Dam; the water leaking from the river sleeves gate stopped](https://www.udayavani.com/wp-content/uploads/2024/07/bhadra-1-150x83.jpg)
Bhadra Dam; ಕೊನೆಗೂ ನಿಂತಿತು ರಿವರ್ ಸ್ಲೀವ್ಸ್ ಗೇಟ್ ನಿಂದ ಸೋರಿಕೆಯಾಗುತ್ತಿದ್ದ ನೀರು
![Bengaluru: ಅನಧಿಕೃತ ಕೇಬಲ್ ತೆರವಿಗೆ ಬೆಸ್ಕಾಂನಿಂದ 2 ದಿನ ಗಡುವು](https://www.udayavani.com/wp-content/uploads/2024/07/4-5-150x90.jpg)
Bengaluru: ಅನಧಿಕೃತ ಕೇಬಲ್ ತೆರವಿಗೆ ಬೆಸ್ಕಾಂನಿಂದ 2 ದಿನ ಗಡುವು
![Drug sell: ದುಬೈನಿಂದಲೇ ಡ್ರಗ್ಸ್ ಮಾರಾಟ ದಂಧೆ; ತಾಯಿ-ಮಗಳ ವಿರುದ್ಧ ಬೆಂಗ್ಳೂರಲ್ಲಿ ಕೇಸ್](https://www.udayavani.com/wp-content/uploads/2024/07/3-6-150x90.jpg)
Drug sell: ದುಬೈನಿಂದಲೇ ಡ್ರಗ್ಸ್ ಮಾರಾಟ ದಂಧೆ; ತಾಯಿ-ಮಗಳ ವಿರುದ್ಧ ಬೆಂಗ್ಳೂರಲ್ಲಿ ಕೇಸ್
![Electric shock: ಮೊಬೈಲ್ ಚಾರ್ಜ್ಗೆ ಹಾಕುವಾಗ ವಿದ್ಯುತ್ ಶಾಕ್; ವಿದ್ಯಾರ್ಥಿ ಬಲಿ!](https://www.udayavani.com/wp-content/uploads/2024/07/2-5-150x90.jpg)
Electric shock: ಮೊಬೈಲ್ ಚಾರ್ಜ್ಗೆ ಹಾಕುವಾಗ ವಿದ್ಯುತ್ ಶಾಕ್; ವಿದ್ಯಾರ್ಥಿ ಬಲಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.